ಕರ್ನಾಟಕದ ಪಪ್ಪು ಯಾರು ಗೊತ್ತಾ? ನಮೋ ಭಕ್ತರು ಹೇಳಿದ್ದು ಹೀಗೆ

ಕರ್ನಾಟಕದ ಪಪ್ಪು ಯಾರು ಗೊತ್ತಾ? ನಮೋ ಭಕ್ತರು ಹೇಳಿದ್ದು ಹೀಗೆ

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನರೇಂದ್ರ ಮೋದಿ ಭಕ್ತರು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಹೊಸ ವಿವಿಧ ರೀತಿಯಲ್ಲಿ ಪೋಸ್ಟ್ ಹಾಗೂ ಕಾಮೆಂಟ್ಗಳನ್ನು ಬರೆದು ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವುದಷ್ಟೇ ಹಲವು ಬಾರಿ  ಹೊಸ ಹೊಸ ವಿಷಯಗಳನ್ನು ಹುಡುಕಿ ಮನರಂಜಿಸುತ್ತಾರೆ.

ಈಗ ಹೊಸದೊಂದು ಅಭಿಯಾನ ಆರಂಭಿಸಿರುವ ನಮೋ ಭಕ್ತರು ರಾಜ್ಯದ ಸಂಸದನ ಮೇಲೆ ಮುಗಿಬಿದ್ದಿದ್ದು, ಕರ್ನಾಟಕದಲ್ಲಿಯೂ ಒಬ್ಬ ರಾಹುಲ್ ಗಾಂಧಿ ಜನಿಸಿದ್ದಾನೆ ಆತ ಬೆಳಕಿಗೆ ಬರುವುದು ಕೊಂಚ ತಡವಾಗಿದೆಯಷ್ಟೇ, ಕೊನೆಗೂ ಆತ ಈಗ ನಿಮ್ಮ ಮುಂದೆ ಬಂದಿದ್ದಾನೆ ಎಂಬ ಪೋಸ್ಟ್ ಗಳ ಮೂಲಕ ಬರ ಪೂರಿತ ಮನರಂಜನೆಯನ್ನು ನೀಡುತ್ತಿದ್ದಾರೆ.

ಅಷ್ಟಕ್ಕೂ ವಿಷಯದ ಮೂಲವೇನು ಗೊತ್ತಾ??

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಾಹುಲ್ ಗಾಂಧಿ ಅವರನ್ನು ಹಲವಾರು ಜನ ಪಪ್ಪು ಎಂದು ಕರೆಯುತ್ತಾರೆ. ಹಲವು ಬಾರಿ ಸಭೆ ಸಮಾರಂಭಗಳಲ್ಲಿ ಕಾಮಿಡಿ ಪಟಾಕಿಗಳನ್ನು ಸಿಡಿಸಿದ ಕಾರಣ ರಾಹುಲ್ ಗಾಂಧಿ ರವರಿಗೆ ಹೆಸರನ್ನು ನೀಡಿದ್ದಾರೆ. ಈಗ ಅದೇ ರೀತಿ ಕರ್ನಾಟಕದ ರಾಹುಲ್ ಗಾಂಧಿ ರವರನ್ನು ನಮೋ ಭಕ್ತರು ಕಂಡುಹಿಡಿದಿದ್ದಾರೆ. ಅಷ್ಟಕ್ಕೂ ಕರ್ನಾಟಕದ ರಾಹುಲ್ ಗಾಂಧಿ ಎಂದು ಹೆಸರಾದ ಸಂಸದ ಯಾರು ಗೊತ್ತಾ?

ನಿನ್ನೆಯಷ್ಟೇ ಡಿಕೆ ಶಿವಕುಮಾರ್ ಅವರ ಸಹೋದರ ರಾಗಿರುವ ಡಿಕೆ ಸುರೇಶ್ ರವರು ಒಂದು ವೇಳೆ ಮೋದಿ ರವರು ಒಪ್ಪಿಕೊಂಡರೆ ನಾನು ರಾಮನಗರದಲ್ಲಿ ಅವರ ವಿರುದ್ಧ ಸ್ಪರ್ಧಿಸಲು ಸಿದ್ಧನಿದ್ದೇನೆ ಎಂದು ಹೇಳಿದರು, ಈ ಹೇಳಿಕೆಯನ್ನು ಮುಂದಿಟ್ಟುಕೊಂಡು ಡಿಕೆ ಸುರೇಶ್ ರ್ ಅವರನ್ನು ಹಲವಾರು ಜನ ಟ್ರೋಲ್ಗೆ ಗುರಿ ಮಾಡಿದ್ದರು. ಆದರೆ ಇಷ್ಟಕ್ಕೆ ಸುಮ್ಮನಾಗದ ಡಿಕೆ ಸುರೇಶ್ ಕುಮಾರ್ ರವರು ಈಗ ಮತ್ತೊಂದು ವಿಷಯದಲ್ಲಿ ಟ್ರೋಲ್ಗೆ ಗುರಿಯಾಗಿ ಪಪ್ಪು ಎಂದು ಕರೆಸಿಕೊಂಡಿದ್ದಾರೆ.

ಈಗ ಮತ್ತೊಮ್ಮೆ ಆನಂದ್ ಸಿಂಗ್ ಅವರು ಆಸ್ಪತ್ರೆ ಸೇರಿರುವುದು ಬಿಯರ್ ಬಾಟಲ್ ನಿಂದ ಹೊಡೆದಾಡಿಕೊಂಡು ಅಲ್ಲ ಬದಲಾಗಿ ನೆನ್ನೆ ಆನಂದ್ ಸಿಂಗ್ ರವರು ತಮ್ಮ ಬಂಧುಗಳ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು ಆದಕಾರಣ ಅವರು ನಿದ್ದೆಗೆಟ್ಟು ತದನಂತರ ಆಸ್ಪತ್ರೆಯಲ್ಲಿ ಸುಸ್ತಾಗಿದೆ ಎಂದು ದಾಖಲಾಗಿದ್ದಾರೆ, ಎಂದು ಹೇಳಿದ ಬಳಿಕ ಅದೇ ಹೇಳಿಕೆಯ ಮುಂದುವರಿದ ಭಾಗವಾಗಿ ಆನಂದ್ ಸಿಂಗ್ ರವರು ರಾತ್ರಿ ಇಡೀ ರೆಸಾರ್ಟ್ ನಲ್ಲಿ ಇದ್ದರೂ ಎಂಬ ಮಾತನ್ನು ಹೇಳಿದ್ದಾರೆ. ಇದನ್ನು ಕಂಡ ನಮೋ ಭಕ್ತರು ಒಂದು ಮನುಷ್ಯ ಎರಡು ಕಡೆ ಇರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿ ಡಿಕೆ ಸುರೇಶ್ ರವರು ಕರ್ನಾಟಕದ ರಾಹುಲ್ ಗಾಂಧಿ / ಪಪ್ಪು ಎಂದು ಕರೆದಿದ್ದಾರೆ.