ಪರಮೇಶ್ವರ್ ಅವರಿಗೆ ಖಡಕ್ ಎಚ್ಚರಿಕೆ ನೀಡಿದ ಪೊಲೀಸ್ ಸಂಘ

ಪರಮೇಶ್ವರ್ ಅವರಿಗೆ ಖಡಕ್ ಎಚ್ಚರಿಕೆ ನೀಡಿದ ಪೊಲೀಸ್ ಸಂಘ

0

ಕಳೆದ ಬಾರಿ ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿ ಇದ್ದಾಗ ಮೊಟ್ಟಮೊದಲ ಬಾರಿಗೆ ಜನರನ್ನು ಕಾಯುವ ಪೊಲೀಸರು ದಂಗೆ ಏಳಲು ಸಿದ್ಧರಾಗಿದ್ದರು. ರಾಜ್ಯದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಪೊಲೀಸರು ಧರಣಿ ಮಾಡುವ ಸಂದರ್ಭ ಒದಗಿಬಂದಿತ್ತು. ಆದರೆ ಪರಮೇಶ್ವರ್ ರವರು ನೀಡಿದ ಭರವಸೆಗಳನ್ನು ನಂಬಿ ಕೊಂಡು ಪೊಲೀಸ್ ಸಂಘವು ಧರಣಿಯಿಂದ ಹಿಂದೆ ಸರಿದಿತ್ತು.

[do_widget id=et_ads-2]

ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಪೊಲೀಸರ ವೇತನ ಮತ್ತು ವ್ಯವಸ್ಥೆಗಳಲ್ಲಿ ಭಾರೀ ಲೋಪದೋಷಗಳು ಇವೆ. ಇವನ್ನೆಲ್ಲ ಸರಿಪಡಿಸುತ್ತೇನೆ ಎಂದು ಭರವಸೆ ನೀಡಿದ ಪರಮೇಶ್ವರ್ ಅವರ ಭರವಸೆಗಳು ಎಲ್ಲವೂ ಸುಳ್ಳು ಎಂದು ಪೊಲೀಸರಿಗೆ ಈಗ ತಿಳಿದು ಬಂದಿದೆ.ಇದರಿಂದ ಕುಪಿತಗೊಂಡು ಇರುವ ಪೊಲೀಸರು ಪರಮೇಶ್ವರ್ ರವರಿಗೆ ಪತ್ರದ ಮೂಲಕ ಖಡಕ್ ಸಂದೇಶವನ್ನು ಕಳುಹಿಸಿ ದ್ದಾರೆ.

[do_widget id=et_ads-4]

ನಿಮ್ಮ ಬರವಸೆ ಗಳೆಲ್ಲವೂ ಪೊಳ್ಳು ಎಂದು ನಮಗೆ ತಿಳಿದಿದೆ ಪರರಾಜ್ಯಗಳ ರೀತಿ ನಮಗೂ ಪೊಲೀಸ್ ವ್ಯವಸ್ಥೆ ಆಗಬೇಕು ಇಲ್ಲವಾದರೆ ಅದರ ಪರಿಣಾಮಗಳನ್ನು ನೀವೇ ಎದುರಿಸಬೇಕು ಎಂದು ಖಡಕ್ ಸಂದೇಶವನ್ನು ಪರಮೇಶ್ವರ್ ಅವರಿಗೆ ಪೊಲೀಸರು ನೀಡಿದ್ದಾರೆ. ಒಂದು ವೇಳೆ ಈ ಬಾರಿ ನಾವು ಧರಣಿಯ ನಿರ್ಧಾರ ಕೈಗೊಂಡಲ್ಲಿ ಅದರ ಪರಿಣಾಮವನ್ನು ಸ್ವತಃ ನೀವೇ ಎದುರಿಸಬೇಕಾಗುತ್ತದೆ ಎಂದು ಖಾರವಾಗಿಯೇ ಪೊಲೀಸರು ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ.

[do_widget id=et_ads-5]