ಡಿಕೆ ಶಿವಕುಮಾರ್ ಅವರಿಗೆ ಬಿಗ್ ಶಾಕ್: ಕೈ ಬಿಟ್ಟ ಹೈಕಮಾಂಡ್

0

ಸಚಿವರಾದ ಡಿ ಕೆ ಶಿವಕುಮಾರ್ ರವರಿಗೆ ಸಂಕಷ್ಟಗಳ ಮೇಲೆ ಸಂಕಷ್ಟಗಳು ಬರುತ್ತಿವೆ. ಇನ್ನೇನು ಒಂದು ಸಮಸ್ಯೆಯಿಂದ ಪಾರಾಗಿದ್ದಾರೆ ಎಂದು ಅನ್ನುವಷ್ಟರಲ್ಲಿ ಮತ್ತೊಂದು ಸಂಕಷ್ಟ ಎದುರಾಗುತ್ತದೆ. ಈಗ ಡಿಕೆ ಶಿವಕುಮಾರ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.ಆದರೆ ಇದನ್ನು ಎದುರಾಳಿಗಳು ಮಾಡಿಲ್ಲ ಬದಲಾಗಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಶಾಕ್ ನೀಡಿದೆ.

ಮೊನ್ನೆಯಷ್ಟೇ ಬೆಳಗಾವಿ ರಾಜಕಾರಣ ಮುಗಿದಿದೆ. ಇನ್ನು ಮುಂದೆ ಬೆಳಗಾವಿ ರಾಜಕಾರಣದಲ್ಲಿ ಡಿಕೆ ಶಿವಕುಮಾರ್ ಅವರು ಹಸ್ತಕ್ಷೇಪ ಮಾಡುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ. ಇಷ್ಟೇ ಅಲ್ಲದೆ ಡಿಕೆಶಿ ಅವರ ಮೇಲೆ ಕೇಸುಗಳ ಮೇಲೆ ಕೇಸುಗಳು ದಾಖಲಾಗುತ್ತಿವೆ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಡಿಕೆ ಶಿವಕುಮಾರ್ ಅವರನ್ನು ಕಾಪಾಡುವ ಜವಾಬ್ದಾರಿ ಕಾಂಗ್ರೆಸ್ ಹೈಕಮಾಂಡ್ ಅದ್ದೂ ಎಂದು ರಾಜಕೀಯ ಪಂಡಿತರು ಹೇಳುತ್ತಿದ್ದರೆ, ಕಾಂಗ್ರೆಸ್ ಹೈಕಮಾಂಡ್ ಮಾತ್ರ ಡಿಕೆ ಶಿವಕುಮಾರ್ ಅವರ ಕೈಬಿಟ್ಟಿದೆ.

ಹೌದು ಕಾಂಗ್ರೆಸ್ ಹೈಕಮಾಂಡ್ ನಿಂದ ಅಧಿಸೂಚನೆ ಹೊರ ಬಂದಿದ್ದು ನಿಮ್ಮಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಬಾರದು, ನಿಮ್ಮ ಸಮಸ್ಯೆಗಳು ಏನೇ ಇದ್ದರೂ ಬೇಗ ಬಗೆಹರಿಸಿಕೊಳ್ಳಿ ಎಂಬ ಖಡಕ್ ಸಂದೇಶವನ್ನು ನೀಡಿದ್ದು, ಈ ಸಮಸ್ಯೆಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ಹಸ್ತಕ್ಷೇಪ  ಮಾಡುವುದಿಲ್ಲ ಎಂದು ಹೇಳಿದೆ.