ಇಫ್ತಾರ್ ಕೂಟದ ವಿರುದ್ದ ರೊಚ್ಚಿಗೆದ್ದ ಬಿಜೆಪಿ ಶಾಸಕ

ಇಫ್ತಾರ್ ಕೂಟದ ವಿರುದ್ದ ರೊಚ್ಚಿಗೆದ್ದ ಬಿಜೆಪಿ ಶಾಸಕ

0

ಪ್ರತಿ ಬಾರಿಯೂ ರಂಜಾನ್ ಮಾಸದಲ್ಲಿ, ರಾಜಕಾರಣಿಗಳು ಭರ್ಜರಿ ಇಫ್ತಾರ್ ಕೂಟವನ್ನು ಏರ್ಪಡಿಸಿ ಹಬ್ಬದ ಹೆಸರಲ್ಲಿ ಮತ ದಾರರನ್ನು ಸೆಳೆಯುವುದು ತಿಳಿದಿರುವ ವಿಷಯ, ಆದರೆ ಇದನ್ನು ನೇರವಾಗಿ ಇಲ್ಲಿ ಒಬ್ಬ ಬಿಜೆಪಿ ಶಾಸಕರು ಹೇಳಿದ್ದಾರೆ.

ಪಕ್ಕ ಹಿಂದುತ್ವದ ಕಟ್ಟಾಳು ಹಾಗಿರುವ ಇವರು ಕೆಳಕಂಡಂತೆ ಹೇಳಿಕೆ ನೀಡಿದ್ದಾರೆ.

“ಓಟುಗಳಿಗಾಗಿ ಬೇಡುವವರು ಮಾತ್ರ ಇಫ್ತಾರ್ ಕೂಟಗಳನ್ನು ಆಯೋಜಿಸುತ್ತಾರೆ” ಎಂದು ಪ್ರಚೋದನಾತ್ಮಕ ಹೇಳಿಕೆ ನೀಡಿದ ಆರೋಪದಲ್ಲಿ ಹೈದರಾಬಾದ್ ನ ಬಿಜೆಪಿ ಶಾಸಕ ರಾಜಾ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದೆ.

“ಓಟುಗಳಿಗಾಗಿ ಬೇಡುವವರು ಮಾತ್ರ ಇಫ್ತಾರ್ ಕೂಟಗಳನ್ನು ಆಯೋಜಿಸುತ್ತಾರೆ. ನಾನು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ” ಎಂದು ರಾಜಾ ಸಿಂಗ್ ಹೇಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

“ತೆಲಂಗಾಣ ರಾಷ್ಟ್ರ ಸಮಿತಿ ಇಂತಹ ಕೂಟಗಳನ್ನು ಆಯೋಜಿಸುವುದರಲ್ಲಿದೆ. ದೇಶದಲ್ಲಿ ಉಗ್ರವಾದ ಹರಡಲು ‘ಹಸಿರು ಪುಸ್ತಕ’ ಕಾರಣವಾಗಿದೆ” ಎಂದೂ ಅವರು ವಿಡಿಯೋದಲ್ಲಿ ಹೇಳಿದ್ದರು.

ಈ ಬಗ್ಗೆ ಫಲಕ್ನುಮಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.