ಸಿಎಂ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವ ಸಾದ್ಯತೆ.? ಒಂದು ಚಾಮುಂಡೇಶ್ವರಿ ಇನೊಂದು ಎಲ್ಲಿ ಗೊತ್ತಾ‌‌‌…??

ಸಿಎಂ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವ ಸಾದ್ಯತೆ.? ಒಂದು ಚಾಮುಂಡೇಶ್ವರಿ ಇನೊಂದು ಎಲ್ಲಿ ಗೊತ್ತಾ‌‌‌…??

0

ವಿಧಾನಸಭೆ ಚುನಾವಣೆಗೆ ದಿನ ದಿನಕ್ಕೆ ರಂಗೆರುತ್ತಿದೆ, ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವ ಸಾದ್ಯತೆ ಇದೆ ಎಂದು ಸಿಎಂ ಆಪ್ತ ವಲಯದ ಮೂಲಗಳು “ಉದಯವಾಣಿ’ಗೆ ತಿಳಿಸಿವೆ. ಗೊಂದಲದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪಕ್ಷದ ಆಂತರಿಕ ವರದಿಯಿಂದಲೇ ಸೋಲಿನ ಭೀತಿಯಿಂದ ತಲ್ಲಣರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಚಾಮುಂಡೇಶ್ವರಿ ಕ್ಷೇತ್ರದ ಜೊತೆಗೆ ಮತ್ತೂಂದು ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಒಂದು ವೇಳೆ ಕಾಂಗ್ರೆಸ್‌ ಪಕ್ಷವೇ ಗೆದ್ದು ಮತ್ತೆ ಅಧಿಕಾರಕ್ಕೆ ಬಂದಲ್ಲಿ ಮುಖ್ಯಮಂತ್ರಿ ಹುದ್ದೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಸಿಎಂ ತಮ್ಮ ಸ್ಪರ್ಧೆ ಹೇಗಿರಬೇಕು ಎನ್ನುವ ಬಗ್ಗೆ ಗುಪ್ತಚರ ಇಲಾಖೆಯಿಂದ ಮತ್ತು ಖಾಸಗಿ ತಂಡದಿಂದ ವರದಿ ತರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ‌.

ಸಿಎಂಗೆ ಬಿಗ್ ಶಾಕ್..!!

ಹೌದು!! ಈ ಎರಡೂ ವರದಿಗಳಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂಗೆ ಈ ಬಾರಿ ಸೋಲು ಖಚಿತ ಎಂಬ ಅಭಿಪ್ರಾಯ ಬಂದಿದೆ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧೆಗೆ ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣ ಹೆಚ್ಚು ಸೂಕ್ತ ಎಂಬ ಅಭಿಪ್ರಾಯವನ್ನು ವರದಿ ವ್ಯಕ್ತಪಡಿಸಿವೆ ಎಂದು ಸಿಎಂ ಆಪ್ತ ವಲಯದ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದರಿಂದ ಅಲ್ಲೆ ಸ್ಪರ್ಧೆಗೆ ಇಚ್ಛಿಸಿದ್ದು, ಗೆಲುವಿನ ಓಟ ಮುಂದುವರಿಸಲು ಬಸವಕಲ್ಯಾಣ ಎರಡನೇ ಕ್ಷೇತ್ರವಾಗಿ ಆಯ್ಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಲಿಂಗಾಯತ-ವೀರಶೈವ ಪ್ರತ್ಯೇಕ ಧರ್ಮದ ನಿಲುವು ತೆಗೆದುಕೊಂಡಿರುವ ಸಿದ್ದರಾಮಯ್ಯ ಸರ್ಕಾರ, ಈ ನಿರ್ಧಾರ ಬಸವಕಲ್ಯಾಣದಲ್ಲಿ ಅವರಿಗೆ ವರವಾಗಿ ಪರಿಣಮಿಸುವ ಸಾಧ್ಯತೆ ಇದೆ. ಹಾಗಾಗಿ ಬಸವಕಲ್ಯಾಣ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವುದು ಸೂಕ್ತ ಎಂದು ಶಿಫಾರಸಿನ ಪ್ರಮುಖ ಅಂಶ ಎಂದು ಸಿಎಂ ಕಚೇರಿ ಮೂಲಗಳು ಸ್ಪಷ್ಟಪಡಿಸಿವೆ.

ಇದಲ್ಲದೇ ಬಸವಣ್ಣನವರ ಅನುಭವ ಮಂಟಪ ಕಾಮಗಾರಿಗೆ ಸಿದ್ದರಾಮಯ್ಯ ಸರ್ಕಾರ 100 ಕೋಟಿ ಅನುದಾನ ಘೋಷಿಸಿದ್ದು, ಈಗಾಗಲೇ 10 ಕೋಟಿ ರೂ. ಬಿಡುಗಡೆಯಾಗಿದೆ. ಇದು ಮಾತೆ ಮಹಾದೇವಿ ಹೋರಾಟಕ್ಕೆ ಸಿಕ್ಕ ಗೌರವ ಕೂಡ. ಇದು ಸಿದ್ದರಾಮಯ್ಯ ಅವರಿಗೂ ಕ್ಷೇತ್ರದ ಲಿಂಗಾಯತರ ಮತಭರವಸೆ ಸಿಗುವ ಅವಕಾಶ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಮತ್ತು ವರುಣಾ ಕ್ಷೇತ್ರಗಳಲ್ಲಿ ಅವರ ಪುತ್ರ ಯತೀಂದ್ರ ಸ್ಪರ್ಧಿಸುವುದು ಬಹುತೇಕ ಖಚಿತ. ಆದರೆ, ಸಿದ್ದರಾಮಯ್ಯರನ್ನು ಸೋಲಿಸಲು ಬಿಜೆಪಿ ಮತ್ತು ಜೆಡಿಎಸ್‌ ರಣತಂತ್ರ ಹೇರಿದ್ದು, ಒಳ ಒಪ್ಪಂದದ ಮೂಲಕ ಚಾಮುಂಡೇಶ್ವರಿಯಲ್ಲಿ ಜೆಡಿಎಸ್‌ನ ಜಿ.ಟಿ.ದೇವೇಗೌಡ ಅವರನ್ನು ಮತ್ತು ವರುಣಾದಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರನ್ನು ಗೆಲ್ಲಿಸುವ ಬಗ್ಗೆ ತಯಾರಿ ನಡೆದಿದೆ ಎನ್ನಲಾದ ಮಾಹಿತಿ ಸಿದ್ದರಾಮಯ್ಯ ಅವರನ್ನು ಗಂಭೀರವಾಗಿ ಯೋಚಿಸುವಂತೆ ಮಾಡಿದೆ. ರಾಜ್ಯದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ, ಹೆಣೆದಿರುವ ತಂತ್ರ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಕೆಡಹುವ ಅವಕಾಶ ಹೆಚ್ಚಿದೆ ಎನ್ನುವುದೂ ಸಿದ್ದರಾಮಯ್ಯ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಅಷ್ಟಕು ಬಸವಕಲ್ಯಾಣ ಯಾಕೆ..? ವರಿದಿಯಲ್ಲಿ ಏನಿದೆ..?

– ಬಸವಕಲ್ಯಾಣದ ಪ್ರಭಾವಿ ಸಮುದಾಯಗಳು: ರೆಡ್ಡಿಗಳು, ಹಿಂದುಳಿದವರು, ಪರಿಶಿಷ್ಟ (ಬಲ), ಪರಿಶಿಷ್ಟ (ಎಡ), ಲಂಬಾಣಿಗಳು, ಮುಸ್ಲಿಮರು, ಮರಾಠರು, ಲಿಂಗಾಯತರು.

– ಪರಿಶಿಷ್ಟ (ಎಡ) ಮತ್ತು ಪರಿಶಿಷ್ಟ (ಬಲ), ಲಂಬಾಣಿ, ಇತರ ಹಿಂದುಳಿದ ವರ್ಗದವರಲ್ಲಿ ಶೇಕಡಾ 75ಕ್ಕಿಂತ ಹೆಚ್ಚು ಸಿದ್ದರಾಮಯ್ಯ ಪರ ಒಲವು.

– ರೆಡ್ಡಿಗಳಲ್ಲಿ ಶೇ.30 ಮತ್ತು ಮರಾಠ ಸಮುದಾಯದಲ್ಲಿ ಶೇ.20 ಸಿದ್ದರಾಮಯ್ಯ ಅವರಿಗೆ ಮತ ಪರಿವರ್ತನೆಯಾಗಬಹುದು.

– ಲಿಂಗಾಯತರಲ್ಲಿ ಶೇಕಡಾ 25 ಮತಗಳು ಸಿದ್ದರಾಮಯ್ಯ ಪರವಾಗಬಹುದು. ಇದು ರಾಜ್ಯಾದ್ಯಂತ ಲಿಂಗಾಯತ ಮತ ವಿಭಜನೆಯ ದಿಕ್ಸೂಚಿಯೂ ಆಗಬಹುದು.

– ಮುಸ್ಲಿಮರ ಶೇಕಡಾ 90 ಮತ್ತು ಕುರುಬರ ಶೇ. 95 ಮತಗಳನ್ನು ಸಿದ್ದರಾಮಯ್ಯ ಸೆಳೆಯಬಹುದು.

– ಬಿಜೆಪಿಯಿಂದ ಮಲ್ಲಿಕಾರ್ಜುನ ಖೂಬಾ, ಜೆಡಿಎಸ್‌ನಿಂದ ಎಂ.ಜಿ. ಮುಳೆ ಅಭ್ಯರ್ಥಿಗಳಾಗುವುದು ಬಹುತೇಕ ಖಚಿತ.

– ಖೂಬಾ ಅವರಿಗೆ ಲಿಂಗಾಯತರ ಶೇ. 70 ಮತಗಳು ಬೀಳುವ ಸಾಧ್ಯತೆಯಿದ್ದು, ವಿಜಯಿಯಾಗಲು ಕಠಿಣ ಹಾದಿಯಿದೆ.

ಬಸವಕಲ್ಯಾಣದಲ್ಲಿ ಮತದಾರರು..!!

ಲಿಂಗಾಯತರು-30,000

ಮುಸಲ್ಮಾನರು- 40,000

ಹಿಂದುಳಿದ ವರ್ಗ- 15,000

ಪರಿಶಿಷ್ಟ ಜಾತಿ (ಎಡ ಮತ್ತು ಬಲ)- 30,000

ಮರಾಠರು-30,000

Source: ಉದಯವಾಣಿ