ಕಾಂಗ್ರೆಸ್ ಸಮಾವೇಶಕ್ಕೆ ಬಂದವರಿಗೆ ಬಿಜೆಪಿ ಊಟ..!

ಕಾಂಗ್ರೆಸ್ ಸಮಾವೇಶಕ್ಕೆ ಬಂದವರಿಗೆ ಬಿಜೆಪಿ ಊಟ..!

0

ಚಾಮರಾಜನಗರ: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಸಮಾವೇಶಕ್ಕೆ ಬಂದಿದ್ದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಆಯೋಜಿಸಿದ್ದ ನವ ಶಕ್ತಿ ಸಮಾವೇಶವನ್ನು ಲೆಕ್ಕಿಸದೇ ನೇರವಾಗಿ ಉಟದ ಕೊಠಡಿಗೆ ತೆರಳಿ ಊಟ ಮಾಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಿದ್ದರು.ಯಾರಿಗೂ ಸಹ ಊಟದ ವ್ಯವಸ್ಥೆಯನ್ನು ಮಾಡಿರಲಿಲ್ಲ.

ಭವನ ಮುಂದೆ ಬಿಜೆಪಿ ಹಮ್ಮಿಕೊಂಡಿದ್ದ ನವಶಕ್ತಿ ಸಮಾವೇಶದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ಆದರೇನು ಎಲ್ಲವು ಒಂದೆ ಅಲ್ಲವೇ ಎಂದು ಬಸ್ ನಲ್ಲಿ ಬಂದಿದ್ದ ನೂರಾರು ಸಂಖ್ಯೆಯಲ್ಲಿದ್ದ ಕಾರ್ಯಕರ್ತರು ಕಾಂಗ್ರೆಸ್ ಟೋಪಿ, ಶಾಲುವನ್ನು ಹಾಕಿಕೊಂಡೇ ಊಟಕ್ಕೆ ಕುಳಿತರು.

ಇದನ್ನರಿತ ಬಿಜೆಪಿ ಸಂಘಟಕರು ಊಟ ಹಾಕುವುದನ್ನು ಅರ್ಧ ಗಂಟೆ ವಿಳಂಬ ಮಾಡಿದ್ದರು. ಸಹ ಇನ್ನು ಬರುವವರ ಸಂಖ್ಯೆ ಹೆಚ್ಚಾಯಿತೇ ವಿನಹ ಕಡಿಮೆಯಾಗಲಿಲ್ಲ. ಜತೆಗೆ ಅದೇ ಮಾರ್ಗದಲ್ಲಿ ಬಸ್ ಗಳನ್ನು ನಿಲಿಸಿದ್ದರು.ಹಿಗಾಗಿ ಅನ್ಯ ಮಾರ್ಗವಿಲ್ಲದೇ ಕಾಂಗ್ರೆಸ್ ಕಾರ್ಯಕರ್ತರಿಗೊ ಊಟ ಹಾಕಲಾಯಿತು. ಇದರಿಂದ ಬಿಜೆಪಿ ಕಾರ್ಯಕರ್ತರಿಗೆ ಊಟ ಸಿಗಲಿಲ್ಲ.ಹೀಗಾಗಿ ಕಾಂಗ್ರೆಸ್ ಸಮಾವೇಶಕ್ಕೆ ಬಂದ ಕಾರ್ಯಕರ್ತರು ಬಿಜೆಪಿ ಸಮಾವೇಶದಲ್ಲಿ ಊಟ ಮಾಡಿ ಕೊಂಡು ಹೋದದ್ದು ವಿಶೇಷವಾಗಿತ್ತು.

ಕೃಪೆ: ದಿಂಗತ