ರಾಜ್ಯಕ್ಕೆ ಮೋದಿ ಮಲತಾಯಿ ಧೋರಣೆ ಮಾಡಿಲ್ಲ…!! ಇದುವರೆಗೂ ಕೇಂದ್ರದಿಂದ ರಾಜ್ಯಕ್ಕೆ ಬಂದ ಹಣ ಎಷ್ಟು ಗೊತ್ತಾ..??
ರಾಜ್ಯಕ್ಕೆ ಮೋದಿ ಮಲತಾಯಿ ಧೋರಣೆ ಮಾಡಿಲ್ಲ…!! ಇದುವರೆಗೂ ಕೇಂದ್ರದಿಂದ ರಾಜ್ಯಕ್ಕೆ ಬಂದ ಹಣ ಎಷ್ಟು ಗೊತ್ತಾ..??
ರಾಜ್ಯಕ್ಕೆ ಮೋದಿ ಮಲತಾಯಿ ಧೋರಣೆ ಮಾಡಿದ್ದಾರೆ ಎಂದು ಈಗಾಗಲೇ ಹಲವು ಬಾರಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಸರ್ಕಾರದ ಮಂತ್ರಿಗಳು ಟೀಕೆಗಳನ್ನು ಮಾಡಿದ್ದಾರೆ. ಅಷ್ಟಕು ಕೇಂದ್ರದಿಂದ ರಾಜ್ಯಕ್ಕೆ ಹಣ ಬಂದೆ ಇಲ್ವ ಅನೋದು ನಾವು ಅವಲೋಕನ ಮಾಡಿಕೊಳ್ಳಬೇಕು.
ಸಹಜವಾಗಿ ಕೇಂದ್ರದಲ್ಲಿ ಬೇರೆ ಪಕ್ಷ ಅಧಿಕಾರ ಮತ್ತು ರಾಜ್ಯದಲ್ಲಿ ಬೇರೆ ಪಕ್ಷ ಅಧಿಕಾರದಲ್ಲಿ ಇದ್ದರೆ ಕೇಂದ್ರದಿಂದ ರಾಜ್ಯಕ್ಕೆ ಬರುವುದು ಅಷ್ಟು ಸುಲಭವಲ್ಲ. ಇಷ್ಟು ವರ್ಷ ಇದು ಹಾಗೆಯೇ ನಡೆದುಕೊಂಡು ಬಂದಿದೆ ಆದರೆ ಮೋದಿ ಸರ್ಕಾರ ಈ ಮಲತಾಯಿ ಧೋರಣೆಯನ್ನು ಮಾಡದೆ ರಾಜ್ಯಕ್ಕೆ ಹತ್ತು ಹಲವು ಯೋಜನೆಯಡಿ ಹಣ ಬಿಡುಗಡೆ ಮಾಡಿದೆ.
ಅಷ್ಟಕು ಯಾವ ಯಾವ ಯೋಜನೆಯಡಿ ಹಣ ಬಂದಿದೆ..!!
*14 ನೇ ಹಣಕಾಸು ಆಯೋಗದ ಅನ್ವಯ ಕರ್ನಾಟಕಕ್ಕೆ 14.19 ಲಕ್ಷ ಕೋಟಿ ರೂ. ಆದಾಯದ ಪಾಲು ಬಂದಿದೆ.
*ಅಮೃತ್ ಯೋಜನೆ:ರಾಜ್ಯದ 27 ನಗರಗಳನ್ನು ಅಮೃತ್ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತಿದೆ.ರಾಜ್ಯಕ್ಕೆ ಐದು ವರ್ಷಗಳಲ್ಲಿ ಪೂರ್ಣ ಗೊಳ್ಳುವ ಈ ಯೋಜನೆ ಮೊತ್ತ ರೂ. 4,900 ಕೋಟಿ ರೂ.
*ಉಜ್ವಾಲ್ ಯೋಜನೆ: ಈ ಯೋಜನೆಯಡಿ ಬಿಪಿಎಲ್ ಕಾರ್ಡುದಾರ ಕುಟುಂಬಗಳ ಮಹಿಳೆಯರಿಗೆ ಉಚಿತ ಅಡುಗೆ ಅನಿಲ ವನ್ನು ಒದಗಿಸಲಾಗುವುದು – ರಾಜ್ಯಕ್ಕೆ ಮೂರು ವರ್ಷಗಳಲ್ಲಿ ಪೂರ್ಣ ಗೊಳ್ಳುವ ಈ ಯೋಜನೆ ಮೊತ್ತ ರೂ. 4,900 ಕೋಟಿ ರೂ.
*ಜಿಲ್ಲಾ ಖನಿಜ ನಿಧಿ: ರೂ. 34,353
*ರಾಷ್ಟ್ರೀಯ ಹೆದ್ದಾರಿಗಳು: ರೂ. 27,000 ಕೋಟಿ
*ಬೆಂಗಳೂರು ಮೆಟ್ರೋ: ರೂ. 2,600 ಕೋಟಿ ರೂ.
*ರೈಲ್ವೆ ಇಲಾಖೆಕ್ಕೆ: ರೂ. 2,197 ಕೋಟಿ.
* ಸ್ಮಾರ್ಟ್ ಸಿಟಿ: ರಾಜ್ಯದ 6 ನಗರಗಳನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆ ಮಾಡಲಾಗಿದೆ ಮಂಗಳೂರು, ಶಿವಮೊಗ್ಗ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ತುಮಕೂರು, ದಾವಣಗೆರೆ ನಗರಗಳನ್ನು ಆಯ್ಕೆಮಾಡಲಾಗಿದೆ. ಈ ಯೋಜನೆ ಪೂರ್ಣ ಗೊಳ್ಳುವ ಈ ಯೋಜನೆ ಮೊತ್ತ ರೂ. 960 ಕೋಟಿ ರೂ.
*ಪ್ರಧಾನಿ ಕೃಷ್ಣ ಸಿಂಚೈ ಯೋಜನೆ: ರೂ. 405
*ಸರ್ಕಾರಿ ಕಾರು ಗಳು ಬಸ್ಗಳು ಖರೀದಿಗೆ: ರೂ. 239 ಕೋಟಿ.
*ಪ್ರಧಾನಿ ಆವಾಸ್ ಯೋಜನೆ: ರೂ. 219 ಕೋಟಿ.
*ಸ್ವಚ್ ಭಾರತ: ರೂ. 204 ಕೋಟಿ.
*Soil ಆರೋಗ್ಯ ಕಾರ್ಡ್: ರೂ. 31 ಕೋಟಿ
ಇತರ ನಿಯೋಜನೆಗಳೊಂದಿಗೆ, ಒಟ್ಟಾರೆಯಾಗಿ ಸುಮಾರು ರೂ. 3.36 ಲಕ್ಷ ಕೋಟಿ ರೂ ಮೋದಿ ಸರ್ಕಾರ ಕರ್ನಾಟಕಕ್ಕೆ ಹಂಚಿಕೆ ಮಾಡಲಾಗಿದೆ.
ಇದುವರೆಗೂ ಇಷ್ಟು ದುಡ್ಡು ಕೇಂದ್ರದ ರಾಜ್ಯಕ್ಕೆ ಬಂದಿದೆ ಆದರೂ ಕೂಡ ನಮ್ಮ ಮುಖ್ಯಮಂತ್ರಿಗಳು ಹೇಳುತ್ತಾರೆ ಕೇಂದ್ರದಿಂದ ಯಾವುದೇ ಸೌಲಭ್ಯಗಳು ಬಂದಿಲ್ಲ ಅನೋದು ಎಷ್ಟರಮಟ್ಟಿಗೆ ಸರಿ ನೀವೇ ಯೋಚನೆ ಮಾಡಿ.