ಬಿಗ್‌ ಬ್ರೇಕಿಂಗ್:ಸಿದ್ದರಾಮಯ್ಯ ಸರ್ಕಾರದಿಂದ ಅಲ್ಪಸಂಖ್ಯಾತ ಪತ್ರಕರ್ತರಿಗೆ ಉಚಿತ ಲ್ಯಾಪ್‌ಟಾಪ್,ಕ್ಯಾಮರಾ ವಿತರಣೆ..!!

ಬಿಗ್‌ ಬ್ರೇಕಿಂಗ್:ಸಿದ್ದರಾಮಯ್ಯ ಸರ್ಕಾರದಿಂದ ಅಲ್ಪಸಂಖ್ಯಾತ ಪತ್ರಕರ್ತರಿಗೆ ಉಚಿತ ಲ್ಯಾಪ್‌ಟಾಪ್,ಕ್ಯಾಮರಾ ವಿತರಣೆ..!!

0

ಸಿದ್ದರಾಮಯ್ಯ ಸರ್ಕಾರ ಅಲ್ಪಸಂಖ್ಯಾತರ ಮನವೊಲಿಸುವ ಮತ್ತೊಂದು ಪ್ರಯತ್ನ ಬೆಳಕಿಗೆ ಬಂದಿದೆ.

ಅಲ್ಪಸಂಖ್ಯಾತರ ಓಲೈಕೆಗೆ ಸಿದ್ದರಾಮಯ್ಯ ಅವರ ಸರ್ಕಾರ ಯಾವತ್ತೂ ಹಿಂದೆ ಬಿದಿಲ್ಲ. ಅಲ್ಪಸಂಖ್ಯಾತರ ಮತಗಳನ್ನು ಪಡೆಯಲು ಪ್ಲಾನ್ ಮಾಡಿರುವ ಸಿದ್ದರಾಮಯ್ಯ ಅವರು ಇಗ ಮತ್ತೊಂದು ಬಾರಿ ಅಲ್ಪಸಂಖ್ಯಾತರ ಮನವೊಲಿಸಲು ಮುಂದಾಗಿದ್ದಾರೆ.

ಕರ್ನಾಟಕದಲ್ಲಿನ ನಿರ್ಣಾಯಕ ವಿಧಾನಸಭಾ ಚುನಾವಣೆಗಳಿಗೆ ಮುಂಚಿತವಾಗಿ, ಅಲ್ಪಸಂಖ್ಯಾತ ಸಮುದಾಯದಿಂದ ಮಾಧ್ಯಮ ವರದಿಗಾರರನ್ನು ಸಮಾಧಾನಗೊಳಿಸುವ ರಾಜ್ಯ ಸರ್ಕಾರವು ವಿವಾದಾತ್ಮಕ ಪ್ರಯತ್ನ ಬೆಳಕಿಗೆ ಬಂದಿದೆ.

ರಾಜ್ಯದ ಅಲ್ಪಸಂಖ್ಯಾತ ಕಮಿಷನರ್ ನಿರ್ದೇಶಕ ನೀಡಿದ ಮಾಹಿತಿ ಪ್ರಕಾರ ಅಲ್ಪಸಂಖ್ಯಾತ ಸಮುದಾಯದಿಂದ ಪತ್ರಕರ್ತರು ಮತ್ತು ಸುದ್ದಿ ಸಂಸ್ಥೆಗಳಿಗೆ ವಿಶೇಷ ಅನುದಾನವನ್ನು ನೀಡಬೇಕೆಂದು ಕರೆ ನೀಡಿದೆ. ಈ ವ್ಯಾಪ್ತಿಯಲ್ಲಿ ಬರುವ ಪ್ರಮುಖ ಪತ್ರಕರ್ತರು ವಿಶೇಷ ಮಾಧ್ಯಮ ಕಿಟ್ ಪಡೆಯುತ್ತಾರೆ. ಕಿಟ್ ಲ್ಯಾಪ್‌ಟಾಪ್, ಕ್ಯಾಮರಾ ಒಳಗೊಂಡಿರುತ್ತದೆ.

ಇದಲ್ಲದೆ, ವಾರ್ತಾ ಸಂಸ್ಥೆಗಳಿಗೆ, ರಾಜ್ಯ ಸರ್ಕಾರ ಮಾಸಿಕ ಜಾಹೀರಾತುಗಳನ್ನು ದ್ವಿಗುಣಗೊಳಿಸುವ ಉದ್ದೇಶ ಹೊಂದಿದೆ.

ಕರ್ನಾಟಕದ ಚುನಾವಣೆಗೆ ಕೆಲ ತಿಂಗಳು ಮುಂಚೆಯೇ ಈ ತರಹದ ಯೋಜನೆ ಮಾಡಿರುವುದು, ಅಲ್ಪಸಂಖ್ಯಾತರ ಓಲೈಕೆ ಮಾಡಲು ಸರ್ಕಾರ ಮುಂದಾಗಿದ್ದು. ಇದು ಅತಿಯಾದ ಓಲೈಕೆ ಎಂದು ಕೇಂದ್ರ ಸರ್ಕಾರದ ಸಚಿವ ಸದಾನಂದ ಗೌಡ ಟ್ವಿಟರ್ ಮೂಲಕ ಸಿದ್ದರಾಮಯ್ಯ ಅವರ ಮೇಲೆ ವಾಗ್ದಾಳಿ ಮಾಡಿದ್ದಾರೆ.