​ಸಿದ್ದರಾಮಯ್ಯನವರೇ ನಿಮಗೆ ತಾಕತ್ತಿದ್ರೆ ಕರಾವಳಿಗೆ ಬನ್ನಿ ಇಲ್ಲಾ ನಾನೇ ಚಾಮುಂಡೇಶ್ವರಿಗೆ ಬರ್ತೀನಿ: ಅನಂತ್ ಕುಮಾರ್ ಹೆಗಡೆ..!!

​ಸಿದ್ದರಾಮಯ್ಯನವರೇ ನಿಮಗೆ ತಾಕತ್ತಿದ್ರೆ ಕರಾವಳಿಗೆ ಬನ್ನಿ ಇಲ್ಲಾ ನಾನೇ ಚಾಮುಂಡೇಶ್ವರಿಗೆ ಬರ್ತೀನಿ: ಅನಂತ್ ಕುಮಾರ್ ಹೆಗಡೆ..!!

0

ಅನಂತಕುಮಾರ್ ಹಗಡೆ, ಸದ್ಯ ಕರ್ನಾಟಕ ರಾಜಕಾರಣದಲ್ಲಷ್ಟೇ ಅಲ್ಲ ಇಡೀ ಭಾರತದಾದ್ಯಂತ ಸೆಕ್ಯೂಲರ್ ಗಳ ಪಾಲಿಗೆ ನುಂಗಲಾರದ ತುತ್ತಾಗಿದ್ದಾರೆ. ಅನಂತಕುಮಾರ್ ಹೆಗಡೆಯೆಂದರೆ ಕರ್ನಾಟಕದ ಕಾಂಗ್ರೆಸ್ ಹಾಗು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ನಡುಕ ಹುಟ್ಟಿದೆ.

ಅನಂತಕುಮಾರ್ ಹೆಗಡೆಯವರು ತಮ್ಮ ಹರಿತವಾದ, ಹಿಂದುತ್ವದ ಭಾಷಣಗಳಿಂದಲೇ ರಾಜ್ಯದಲ್ಲಿ ಚಿರಪರಿಚಿತ. ಆದರೆ ವಿರೋಧಿಗಳ ಕಣ್ಣಿಗೆ ಅನಂತಕುಮಾರ್ ಹೆಗಡೆ ಮಾತ್ರ ವಿಲನ್ ಆಗಿ ಕಾಣುತ್ತಾರೆ.


ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಉಳಿಸಿಕೊಳ್ಳುವ ಮನಸ್ಸಿದ್ದರೆ ತೊಡೆ ತಟ್ಟಿ ಉತ್ತರ ಕನ್ನಡಕ್ಕೆ ಬನ್ನಿ ಇಲ್ಲಾ ನಾನೇ ಚಾಮುಂಡೇಶ್ವರಿಗೆ ಬರುತ್ತೇನೆ ಎಂದು ಸವಾಲು ಹಾಕಿದ್ದಾರೆ.