ಇದೇ ಭಾನುವಾರ ನಡೆಯಬೇಕಿದ್ದ ಕರ್ನಾಟಕ ಲೋಕಸೇವಾ ಆಯೋಗದ ಪ್ರಥಮ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿ ಪರೀಕ್ಷೆ ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ಅಯೋಗ ಪ್ರಕಟಣೆ ಹೊರಡಿಸಿದೆ..
ಇದೇ ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಆಗಮಿಸುತ್ತಿರುವ ಬೆನ್ನಲ್ಲೇ ಕೆಲವು ಕನ್ನಡ ಪರ ಸಂಘಟನೆಗಳು ಬಂದ್ ಗೆ ಕರೆ ಕೊಟ್ಟಿದ್ದವು.. ಇದರಿಂದ ಪರೀಕ್ಷಾರ್ಥಿಗಳಿಗೆ ತೊಂದರೆ ಆಗಬಾರದೆಂದು ಮುಂದೂಡಿರಬಹುದು ಎಂದು ಹೇಳಲಾಗುತ್ತಿದೆ.. ಆದರೆ ಸೂಕ್ತ ಕಾರಣ ಆಯೋಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿಲ್ಲ..
ಅಷ್ಟಕು ಪರೀಕ್ಷೆ ಯಾವಾಗ ಗೊತ್ತಾ??
ಭಾನುವಾರ ನಡೆಯಬೇಕಿದ್ದ ಪರೀಕ್ಷೆಯನ್ನು ಮುಂದೂಡಿರುವ ಆಯೋಗ ಮುಂದಿನ ಪರೀಕ್ಷಾ ದಿನವನ್ನು ಇನ್ನು ನಿಗದಿ ಮಾಡಿಲ್ಲ.. ನಿಗದಿಯಾದ ತಕ್ಷಣ ಕರ್ನಾಟಕ ಲೋಕಸೇವಾ ಆಯೋಗದ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುತ್ತದೆ ಎಂದಿದ್ದಾರೆ..
ಶೇರ್ ಮಾಡಿ ಎಲ್ಲರಿಗೂ ಮಾಹಿತಿ ತಿಳಿಯಲಿ..
ಮುಂದಿನ ಪರೀಕ್ಷಾ ದಿನಾಂಕವನ್ನು ನಮ್ಮ ಫೇಸ್ಬುಕ್ ಪೆಜ್ ನಲ್ಲೂ ಪ್ರಕಟಿಸಲಾಗುವುದು..
https://www.facebook.com/officialkarunaadavaani/
ಮೇಲಿನ ಲಿಂಕ್ ಮೂಲಕ ನಮ್ಮ ಫೇಸ್ಬುಕ್ ಪೇಜ್ ಲೈಕ್ ಮಾಡಿ