ಸುಮಲತಾ ರವರ ವಿರುದ್ಧ ದೂರು ದಾಖಲಿಸಿದ ಜೆಡಿಎಸ್ ಪ್ರಧಾನ ಕಾರ್ಯದರ್ಶಿ

ಸುಮಲತಾ ರವರ ವಿರುದ್ಧ ದೂರು ದಾಖಲಿಸಿದ ಜೆಡಿಎಸ್ ಪ್ರಧಾನ ಕಾರ್ಯದರ್ಶಿ

ಮಂಡ್ಯ ಜಿಲ್ಲೆಯಲ್ಲಿ ಚುನಾವಣಾ ಕಾವು ಮತ್ತಷ್ಟು ಏರತೊಡಗಿದೆ, ದಿನೇದಿನೇ ಒಂದಲ್ಲಾ ಒಂದು ಕುತೂಹಲದ ಸಂಗತಿಗಳು ಹೊರಬೀಳುತ್ತವೆ. ಈಗಾಗಲೇ ಯೋಧ ನೀಡಿದ ಒಂದು ಮತದ ಅಂತರದಿಂದ ಮುನ್ನಡೆ ಪಡೆದು ಕೊಂಡಿರುವ ಸುಮಲತಾ ರವರಿಗೆ ಇದೀಗ ದೂರಿನ ಬಿಸಿ ತಾಗುತ್ತಿದೆ. ಆದರೆ ರಾಜ್ಯದ ಹಿರಿಯ ವಕೀಲರು ಹಾಗೂ ರಾಜಕೀಯ ಪಂಡಿತರ ಪ್ರಕಾರ ಈ ದೂರಿನ ಅನ್ವಯ ಸುಮಲತಾ ರವರಿಗೆ ಯಾವುದೇ ತೊಂದರೆಗಳು ಆಗಲು ಸಾಧ್ಯವಿಲ್ಲ, ಒಂದು ಅರ್ಥವಿಲ್ಲದ ದೂರು ಇದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ರವರು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿರುವ ಕಾರಣ ಪರಿಶೀಲಿಸಿ ದೂರನ್ನು ತಿರಸ್ಕರಿಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಹೌದು ಅರ್ಥವೇ ಇಲ್ಲದಂತೆ ಜೆಡಿಎಸ್ ಪ್ರಧಾನ ಕಾರ್ಯದರ್ಶಿಗಳಾದ ಪ್ರದೀಪ್ ಕುಮಾರ್ ರವರು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳ ಬಳಿ ತೆರಳಿ ಎ ಸುಮಲತಾ ಅವರು ಹಲವಾರು ತಿಂಗಳುಗಳ ಹಿಂದೆ ನಟಿಸಿರುವ ಹಿಂದುಸ್ತಾನ್ ಗೋಲ್ಡ್ ಕಂಪನಿ ಎಂಬ ಜಾಹೀರಾತನ್ನು ಹಲವಾರು ಖಾಸಗಿ ವಾಹಿನಿಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. ಇದರಿಂದ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿ ಮತದಾರರನ್ನು ಸೆಳೆಯುವ ಪ್ರಯತ್ನವನ್ನು ಸುಮಲತಾ ಅಂಬರೀಶ್ ಅವರು ಮಾಡುತ್ತಿದ್ದಾರೆ ಎಂದು ದೂರನ್ನು ದಾಖಲಿಸಿದ್ದಾರೆ. ಈ ದೂರನ್ನು ಕೇಳಿದ ಕೆಲವರು ಕೇವಲ ಪ್ರಚಾರಕ್ಕಾಗಿ ಈ ರೀತಿಯ ದೂರನ್ನು ದಾಖಲೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಒಟ್ಟಿನಲ್ಲಿ ಈ ದೂರಿಗೆ ಚುನಾವಣಾ ಅಧಿಕಾರಿಗಳು ಯಾವ ರೀತಿಯ ಉತ್ತರ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.