ರಾಹುಲ್ ಗೆ ಬಿಗ್ ಶಾಕ್ ನೀಡಿದ ಓವೈಸಿ- ವೈನಾಡು ಕ್ಷೇತ್ರದಲ್ಲಿ ಗೆಲ್ಲುತ್ತೇನೆ ಎಂದು ಕೊಂಡಿದ್ದ ರಾಹುಲ್ ಗೆ ಬಿಗ್ ಶಾಕ್

ರಾಹುಲ್ ಗೆ ಬಿಗ್ ಶಾಕ್ ನೀಡಿದ ಓವೈಸಿ- ವೈನಾಡು ಕ್ಷೇತ್ರದಲ್ಲಿ ಗೆಲ್ಲುತ್ತೇನೆ ಎಂದು ಕೊಂಡಿದ್ದ ರಾಹುಲ್ ಗೆ ಬಿಗ್ ಶಾಕ್

ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಾಹುಲ್ ಗಾಂಧಿ ಅವರು ಸೋಲಿನ ಪಲಾಯನ ಮಾಡಿದ್ದಾರೆ ಎನ್ನಲಾಗುತ್ತಿದೆ. ಯಾಕೆಂದರೆ ಸತತ 15 ವರ್ಷಗಳ ಕಾಲ ಅಮೇಥಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿ, ಇದೀಗ ಸ್ಮೃತಿ ಇರಾನಿ ರವರ ವಿರುದ್ಧ ಸೋಲುತ್ತೇನೆ ಎಂಬ ಭಯದಿಂದ ರಾಹುಲ್ ಗಾಂಧಿ ಅವರು ದಕ್ಷಿಣ ಭಾರತದತ್ತ ಮುಖ ಮಾಡಿದ್ದಾರೆ. ಇದರಿಂದ ಈಗಾಗಲೇ ಹಲವಾರು ವಿವಾದಗಳು ಸೃಷ್ಟಿಯಾಗಿವೆ.

ಇತ್ತ ಕೇರಳ ಪಕ್ಷವೂ ಸಹ ಬಿಜೆಪಿ ಪಕ್ಷದ ವಿರುದ್ಧ ಹೋರಾಡಬೇಕು ಎಂದರೆ ಕರ್ನಾಟಕದ ಕ್ಷೇತ್ರದಿಂದ ಸ್ಪರ್ಧಿಸ ಬೇಕಿತ್ತು ಆದರೆ ಯಾವ ಕಾರಣಕ್ಕಾಗಿ ಕೇರಳ ರಾಜ್ಯದ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಟೀಕೆ ಮಾಡುತ್ತಿದೆ. ಕೆಲವು ಮೂಲಗಳ ಪ್ರಕಾರ ರಾಹುಲ್ ಗಾಂಧಿ ರವರು ಅಲ್ಪಸಂಖ್ಯಾತರ ಮತಗಳನ್ನು ನೆಚ್ಚಿಕೊಂಡು ಕೇರಳ ರಾಜ್ಯದ ವಯನಾಡು ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

ಈ ಎಲ್ಲಾ ಆರೋಪಗಳಿಗೆ ಪೂರಕವೆಂಬಂತೆ ರಾಹುಲ್ ಗಾಂಧಿ ಅವರು ನಾಮಪತ್ರ ಸಲ್ಲಿಸುವ ವೇಳೆ ಯಲ್ಲಿ ಹಸಿರು ಧ್ವಜಗಳು ರಾರಾಜಿಸುತ್ತಿದ್ದವು, ಈ ವಿಡಿಯೋ ಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು ಸಂಚಲನವನ್ನು ಸೃಷ್ಟಿಸಿದೆ. ಆದರೆ ಇದೀಗ ಕೇರಳ ರಾಜ್ಯದಲ್ಲಿಯೂ ಸಹ ರಾಹುಲ್ ಗಾಂಧಿ ರವರ ಗೆಲುವು ಸುಲಭವಾದ ಅಂತೆ ಕಾಣುತ್ತಿಲ್ಲ, ಬಿಜೆಪಿ ಪಕ್ಷವೂ ಸಹ ತನ್ನ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ ಮತ್ತು ಅಧಿಕಾರ ಪಾರ್ಟಿ ಬೆಂಬಲ ನೀಡುತ್ತದೆ ಎಂದು ಊಹಿಸಿಕೊಂಡಿದ್ದ ಸಿಪಿಎಂ ಪಕ್ಷವೂ ಸಹ ಈಗಾಗಲೇ ರಾಹುಲ್ ರವರಿಗೆ ಕೈ ಕೊಟ್ಟು ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದೆ.

ಇಷ್ಟು ಸಾಲದು ಎಂಬಂತೆ ಮತ್ತಷ್ಟು ಅಲ್ಪಸಂಖ್ಯಾತರ ಮತಗಳನ್ನು ವಿಭಜನೆ ಮಾಡಲು ನೇರವಾಗಿ ಓವೈಸಿ ರವರು ಕಣಕ್ಕಿಳಿದಿದ್ದಾರೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ರಾಹುಲ್ ಗಾಂಧಿ ರವರ ವಿರುದ್ಧ ಓವೈಸಿ ರವರು ಪ್ರಚಾರ ನಡೆಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಯಾವ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡುತ್ತಾರೆ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಆದರೆ ಓವೈಸಿ ರವರು ರಾಹುಲ್ ಗಾಂಧಿ ರವರ ವಿರುದ್ಧ ಮತ ಚಲಾಯಿಸುವಂತೆ ಪ್ರೇರೇಪಿಸುವುದು ಖಚಿತಗೊಂಡಿದೆ. ಈ ಮೂಲಕ ಈ ಕ್ಷೇತ್ರದಲ್ಲಿಯೂ ಸಹ ರಾಹುಲ್ ಅವರ ಗೆಲುವು ಮತ್ತಷ್ಟು ಕಗ್ಗಂಟಾಗಿದೆ.