ಬೇಜವಾಬ್ದಾರಿ ತೋರುತ್ತಿರುವ ಪಂತ್ ಸ್ಥಾನಕ್ಕೆ ಈತನೇ ಪರಿಹಾರ ಎಂದು ಕನ್ನಡಿಗನನ್ನು ಆಯ್ಕೆ ಮಾಡಿದ ಆಕಾಶ್ ಚೋಪ್ರಾ, ಯಾರು ಆ ಕನ್ನಡಿಗ ಗೊತ್ತೇ??
ಬೇಜವಾಬ್ದಾರಿ ತೋರುತ್ತಿರುವ ಪಂತ್ ಸ್ಥಾನಕ್ಕೆ ಈತನೇ ಪರಿಹಾರ ಎಂದು ಕನ್ನಡಿಗನನ್ನು ಆಯ್ಕೆ ಮಾಡಿದ ಆಕಾಶ್ ಚೋಪ್ರಾ, ಯಾರು ಆ ಕನ್ನಡಿಗ ಗೊತ್ತೇ??
ನಮಸ್ಕಾರ ಸ್ನೇಹಿತರೇ ಆಕಾಶ್ ಚೋಪ್ರಾ ಭಾರತ ತಂಡದ ಮಾಜಿ ಕ್ರಿಕೇಟ್ ಆಟಗಾರ. ಕ್ರಿಕೇಟ್ ಆಡುತ್ತಿದ್ದಾಗ ಹೆಸರು ಮಾಡದಿದ್ದರೂ, ಈಗ ವೀಕ್ಷಕ ವಿವರಣೆಗಾರರಾಗಿ ಮಿಂಚುತ್ತಿದ್ದಾರೆ. ಈಗ ಭಾರತ ತಂಡದ ಸಂಯೋಜನೆ ಬಗ್ಗೆ ಮಾತನಾಡಿರುವ ಆಕಾಶ್ ಚೋಪ್ರಾ, ರಿಷಭ್ ಪಂತ್, ಈ ಆಟಗಾರನಿಂದ , ಸೀಮಿತ ಓವರ್ ಗಳ ಸರಣಿಯಲ್ಲಿ ಸ್ಥಾನ ಕಳೆದುಕೊಳ್ಳಬಹುದು ಎಂದು ಭವಿಷ್ಯ ನುಡಿದಿದ್ದಾರೆ.
ಹೌದು ರಿಷಭ್ ಪಂತ್ ಪ್ರದರ್ಶನ ಅಷ್ಟು ಸ್ಥಿರವಾಗಿಲ್ಲ. ಒಂದು ಪಂದ್ಯದಲ್ಲಿ ಆಡಿದರೇ , ಮತ್ತೊಂದಿಷ್ಟು ಪಂದ್ಯಗಳಲ್ಲಿ ಆಡುವುದಿಲ್ಲ. ಈ ಅಸ್ಥಿರ ಪ್ರದರ್ಶನ ಭಾರತ ತಂಡಕ್ಕೆ ತಲೆನೋವಾಗಿದೆ. ಮುಂದಿನ ವರ್ಷ ನಡೆಯಲಿರುವ 2023ರ ಏಕದಿನ ವಿಶ್ವಕಪ್ ಗೆ ತಂಡವನ್ನು ಸಂಯೋಜಿಸುತ್ತಿರುವ ಭಾರತ ತಂಡ , ವಿಕೇಟ್ ಕೀಪರ್ ಸ್ಥಾನಕ್ಕೆ ನಂಬಿಕಸ್ತ ಬ್ಯಾಟ್ಸಮನ್ ಹುಡುಕುತ್ತಿದೆ. ಸದ್ಯ ನಡೆಯಲಿರುವ ವಿಂಡೀಸ್ ಸರಣಿಯಲ್ಲಿ ಉಪನಾಯಕ ಕೆ.ಎಲ್.ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಆಡಬಹುದು.
![](http://karunaadavaani.com/wp-content/uploads/2021/10/kl-rahul-1024x553.jpg)
ಅದಲ್ಲದೇ ರಾಹುಲ್ ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಅದ್ಭುತವಾಗಿ ಕೀಪಿಂಗ್ ಮಾಡುತ್ತಾರೆ. ಕೀಪಿಂಗ್ ನಲ್ಲಿ ಒಂದು ಸಣ್ಣ ತಪ್ಪು ಸಹ ಮಾಡುವುದಿಲ್ಲ. ಆದರೇ ರಿಷಭ್ ಇತ್ತಿಚಿನ ದಿನಗಳಲ್ಲಿ ಬ್ಯಾಟಿಂಗ್ ಮಾತ್ರವಲ್ಲದೇ, ಕೀಪಿಂಗ್ ನಲ್ಲಿಯೂ ಸಹ ಹಲವಾರು ಮಿಸ್ಟೇಕ್ ಗಳು ಮಾಡುತ್ತಿರುವುದು ಸಹ ತಂಡಕ್ಕೆ ದುಬಾರಿಯಾಗಿದೆ. ಹಾಗಾಗಿ ಕೆ.ಎಲ್.ರಾಹುಲ್ ಪೂರ್ಣ ಪ್ರಮಾಣದ ವಿಕೇಟ್ ಆದರೇ ಆಗ ರಿಷಭ್ ಪಂತ್ ಗೆ ತಂಡದಲ್ಲಿ ಸ್ಥಾನ ಸಿಗುವುದು ಅನುಮಾನ. ಹೀಗಾಗಿ ರಿಷಭ್ ಪಂತ್ ಇನ್ನು ಮುಂದೆ ಎಚ್ಚರಿಕೆಯ ಬ್ಯಾಟಿಂಗ್ ನಡೆಸಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.