ಐಪಿಎಲ್ ಆರಂಭಕ್ಕೂ ಮುನ್ನ ಡೆಲ್ಲಿ ತಂಡಕ್ಕೆ ಬಿಗ್ ಶಾಕ್, ಕಹಿ ಸುದ್ದಿ ಘೋಷಣೆ ಮಾಡಿದ ಬಿಸಿಸಿಐ. ಏನು ಗೊತ್ತಾ??

ಐಪಿಎಲ್ ಆರಂಭಕ್ಕೂ ಮುನ್ನ ಡೆಲ್ಲಿ ತಂಡಕ್ಕೆ ಬಿಗ್ ಶಾಕ್, ಕಹಿ ಸುದ್ದಿ ಘೋಷಣೆ ಮಾಡಿದ ಬಿಸಿಸಿಐ. ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಮುಂದಿನ ಏಪ್ರಿಲ್ ತಿಂಗಳ ಎರಡನೇ ವಾರದಲ್ಲಿ ಭಾರಿ ಕುತೂಹಲ ಮೂಡಿಸಿರುವ ಐಪಿಎಲ್ ಟೂರ್ನಿ ಆರಂಭವಾಗಲಿದೆ, ಕಳೆದ ಬಾರಿ ವಿದೇಶದಲ್ಲಿ ಟೂರ್ನಿಯನ್ನು ನಡೆಸಲಾಗಿತ್ತು, ಆದರೆ ಈ ಬಾರಿ ಪ್ರೇಕ್ಷಕರು ಇಲ್ಲದೆ ಇದ್ದರೂ ಪರವಾಗಿಲ್ಲ ಎಂದು ‌ ಭಾರತದಲ್ಲಿ ಟೂರ್ನಿಯನ್ನು ಆಯೋಜಿಸಲು ಬಿಸಿಸಿಐ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.

ಇದಕ್ಕಾಗಿ ಪ್ರತಿಯೊಂದು ತಂಡಗಳು ಕೂಡ ಇದೀಗ ಸಿದ್ಧತೆಯನ್ನು ಆರಂಭಿಸಿವೆ, ರಾಷ್ಟ್ರೀಯ ಸೇವೆಯಲ್ಲಿರುವ ಆಟಗಾರರನ್ನು ಹೊರತು ಪಡಿಸಿ ಉಳಿದ ಆಟಗಾರರು ಈಗಾಗಲೇ ಅಭ್ಯಾಸವನ್ನು ಕೂಡ ಆರಂಭಿಸಿದ್ದಾರೆ, ಇನ್ನು ಕೆಲವರು ತಂಡ ಸೇರಿಕೊಂಡು ಕ್ವಾರಂಟೈನ್ ನಿಯಮಗಳನ್ನು ಪಾಲಿಸುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ಡೆಲ್ಲಿ ಐಪಿಎಲ್ ತಂಡಕ್ಕೆ ಕಹಿ ಸುದ್ದಿಯೊಂದು ಕೇಳಿ ಬಂದಿದ್ದು, ಇಂಗ್ಲೆಂಡ್ ವಿರುದ್ಧ ನಡೆದ ಮೊಟ್ಟ ಮೊದಲ ಏಕದಿನ ಪಂದ್ಯದಲ್ಲಿ ಡೆಲ್ಲಿ ತಂಡದ ನಾಯಕ ಹಾಗೂ ಭಾರತ ಕ್ರಿಕೆಟ್ ತಂಡದ ಯುವ ಆಟಗಾರರು ಶ್ರೇಯಸ್ ಅಯ್ಯರ್ ರವರು ಇಂಜುರಿ ಸಮಸ್ಯೆಗೆ ಒಳಗಾಗಿದ್ದಾರೆ, ಇದೀಗ ಬಂದಿರುವ ಬಿಸಿಸಿಐ ಪ್ರಕಟಣೆ ಪ್ರಕಾರ ಮುಂದಿನ ಎರಡು ಏಕದಿನ ಪಂದ್ಯಗಳಿಗೆ ಶ್ರೇಯಸ್ ಅಯ್ಯರ್ ಲಭ್ಯವಿರುವುದಿಲ್ಲ, ವೈದ್ಯರು ತಪಾಸಣೆ ನಡೆಸುತ್ತಿದ್ದಾರೆ, ಒಂದು ವೇಳೆ ಶಸ್ತ್ರಚಿಕಿತ್ಸೆ ಅಗತ್ಯವಿದ್ದರೇ ಶ್ರೇಯಸ್ ಅಯ್ಯರ್ ರವರು ಇಡೀ ಐಪಿಎಲ್ ಟೂರ್ನಿ ಯನ್ನು ಆಟವಾಡಲು ಸಾಧ್ಯವಿಲ್ಲ ಎಂದು ಘೋಷಣೆ ಮಾಡಿದೆ.