ವಿಜಯ್ ಸೂರ್ಯ ಅಷ್ಟೇ ಅಲ್ಲ ಜೊತೆ ಜೊತೆಯಲ್ಲಿ ಟಿಆರ್ಪಿ ಹೆಚ್ಚಿಸಲು ಸ್ಟಾರ್ ನಟಿ ಎಂಟ್ರಿ ! ಪಾತ್ರದ ಮಹತ್ವವೇನು ಗೊತ್ತೇ?

ವಿಜಯ್ ಸೂರ್ಯ ಅಷ್ಟೇ ಅಲ್ಲ ಜೊತೆ ಜೊತೆಯಲ್ಲಿ ಟಿಆರ್ಪಿ ಹೆಚ್ಚಿಸಲು ಸ್ಟಾರ್ ನಟಿ ಎಂಟ್ರಿ ! ಪಾತ್ರದ ಮಹತ್ವವೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಕೆಲವು ವಾರಗಳಿಂದ ಆರಂಭವಾದ ದಿನದಿಂದಲೂ ಟಿಆರ್ಪಿ ಲಿಸ್ಟಿನಲ್ಲಿ ಉತ್ತಮ ಗಳಿಕೆಯನ್ನು ಮಾಡಿ ಮೊದಲನೇ ಅಥವಾ ಎರಡನೇ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದ ಜೊತೆ ಜೊತೆಯಲ್ಲಿ ದಾರವಾಹಿ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವುದರಲ್ಲಿ ವಿಫಲವಾಗುತ್ತಿದೆ. ಸಾಮಾಜಿಕ ಜಾಲತಾಣಗಳನಂತೂ ಕತೆಯನ್ನು ಬಹಳ ಎಳೆಯಲಾಗುತ್ತಿದೆ ಎಂದು ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ಟಿಆರ್ ಪಿಯನ್ನು ಹೆಚ್ಚಿಸಿಕೊಳ್ಳಲು ಜೊತೆ ಜೊತೆಯಲಿ ಧಾರಾವಾಹಿ ಯಲ್ಲಿ ಮಹತ್ವದ ತಿರುವು ನೀಡಲು ಕನ್ನಡದ ಖ್ಯಾತ ಧಾರಾವಾಹಿಗಳಲ್ಲಿ ಒಂದಾಗಿದ್ದ ಅಗ್ನಿಸಾಕ್ಷಿ ಧಾರವಾಹಿಯಲ್ಲಿ ತನ್ನದೇ ಛಾಪು ಮೂಡಿಸಿದ್ದ ನಟ ವಿಜಯ್ ಸೂರ್ಯ ರವರು ಎಂಟ್ರಿಕೊಡುತ್ತಿದ್ದಾರೆ ಎಂಬ ಅಧಿಕೃತ ಮಾಹಿತಿ ಕೇಳಿಬಂದಿತ್ತು.

ವಿಜಯ್ ಸೂರ್ಯ ರವರು ಧಾರವಾಹಿಗೆ ತಿರುವು ನೀಡುವ ಮೂಲಕ ಜೊತೆ ಜೊತೆಯಲಿ ಧಾರವಾಹಿ ಮತ್ತೊಮ್ಮೆ ಟಾಪ್ ಲಿಸ್ಟಿನಲ್ಲಿ ಸ್ಥಾನ ಪಡೆದುಕೊಳ್ಳಬಹುದು ಎಂಬ ಮಾತುಗಳು ಕೇಳಿಬಂದಿದ್ದವು. ಹಲವಾರು ದಿನಗಳಿಂದ ಜೊತೆ ಜೊತೆಯಲ್ಲಿ ಧಾರಾವಾಹಿಯಲ್ಲಿ ಕಥೆ ಮದುವೆಯ ಕಡೆ ಸಾಗುತ್ತಿಲ್ಲ ಎಂದು ಪ್ರೇಕ್ಷಕರು ಬೇಸರ ಮಾಡಿಕೊಂಡಿದ್ದರು. ಆದರೆ ಇವರಿಬ್ಬರ ಪ್ರೇಮ ಕಥೆಯನ್ನು ಮದುವೆಯ ಕಡೆಗೆ ತಿರುಗಿಸುವ ಮಹತ್ವದ ಕೆಲಸವನ್ನು ವಿಜಯಸೂರ್ಯ ರವರು ಮಾಡಿ ಕಥೆಯಲ್ಲಿ ದೊಡ್ಡ ಬದಲಾವಣೆ ತರುತ್ತಾರೆ.

ಈ ಮೂಲಕ ಮತ್ತೆ ಜೊತೆ ಜೊತೆಯಲಿ ಧಾರವಾಹಿ ಟಿಆರ್ಪಿ ಲಿಸ್ಟಿನಲ್ಲಿ ಮೇಲಕ್ಕೆ ಹೋಗಬಹುದು ಎಂದು ಅಂದಾಜು ಮಾಡಲಾಗಿತ್ತು. ಈ ಎಲ್ಲಾ ಮಾಹಿತಿಗಳ ನಡುವೆಯೇ ಇದೀಗ ಈ ಧಾರವಾಹಿಗೆ ಮತ್ತೊಬ್ಬರು ಕನ್ನಡದ ಖ್ಯಾತ ನಟಿ ಎಂಟ್ರಿಕೊಟ್ಟಿದ್ದು ಜೊತೆ ಜೊತೆಯಲಿ ಧಾರವಾಹಿ ಮತ್ತಷ್ಟು ಕುತೂಹಲ ಕೆರಳಿಸಿದೆ. ಇದೇ ಮೊಟ್ಟಮೊದಲ ಬಾರಿಗೆ ಈ ಕನ್ನಡದ ಎವರ್ಗ್ರೀನ್ ಸ್ಟಾರ್ ನಟಿ ಕಿರುತೆರೆಗೆ ಎಂಟ್ರಿ ನೀಡಿದ್ದು, ಕಳೆದ ಕೆಲವು ತಿಂಗಳುಗಳಿಂದ ಸಿನಿಮಾ ರಂಗದಿಂದ ಕಿರುತೆರೆಗೆ ಬಂದು ಯಶಸ್ಸು ಗಳಿಸಿರುವ ಸಾಲಿಗೆ ಸೇರಿಕೊಳ್ಳಲು ಈ ನಟಿ ಕೂಡ ಸಿದ್ಧರಾದಂತೆ ಕಾಣುತ್ತಿದೆ.

ಹೌದು ಸ್ನೇಹಿತರೇ ಹೀಗೆ ಜೊತೆ ಜೊತೆಯಲಿ ಧಾರವಾಹಿಗೆ ಮತ್ತಷ್ಟು ರಂಗು ನೀಡಲು ಎಂಟ್ರಿ ಕೊಡುತ್ತಿರುವುದು ಮತ್ಯಾರು ಅಲ್ಲ ಅವರ ಕನ್ನಡದ ಹಿರಿಯ ನಟಿ ಹಾಗೂ ನಮ್ಮ ನಿಮ್ಮೆಲ್ಲರ ನೆಚ್ಚಿನ ಸುಧಾರಾಣಿ ರವರು. ಈ ವಿಷಯವನ್ನು ಇದೀಗ ಜೀ ವಾಹಿನಿಯು ಖಚಿತಪಡಿಸಿದ್ದು ಇವರ ಕುರಿತು ಒಂದು ಪ್ರೊಮೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದೆ. ಪ್ರೊಮೊ ದಲ್ಲಿ ಸುಬ್ರಮಣ್ಯ ಸಿರಿಮನೆ ರವರು ಸುಧಾರಾಣಿ ರವರನ್ನು ಪ್ರಶ್ನಿಸುವ ಚಿಕ್ಕ ತುಣುಕು ಕಂಡುಬಂದಿದ್ದು ಅದೇ ಸಮಯದಲ್ಲಿ ಫೋನ್ ಹಿಡಿದುಕೊಂಡು ವಿಜಯ್ ಸೂರ್ಯ ರವರ ಎಂಟ್ರಿ ಆಗುತ್ತದೆ ಎಂಬುದು ತಿಳಿದುಬರುತ್ತದೆ.

ಧಾರವಾಹಿಯಲ್ಲಿ ಆರ್ಯವರ್ಧನ್ ಹಾಗೂ ಅನುಸಿರಿಮನೆ ರವರ ನಡುವಿನ ಮದುವೆಗೆ ನೇರ ತಿರುವು ನೀಡುವ ಮಹತ್ವದ ಪಾತ್ರಧಾರಿಯಾಗಿ ಸುಧಾರಾಣಿ ಹಾಗೂ ವಿಜಯಸೂರ್ಯ ರವರು ಕಾಣಿಸಿಕೊಳ್ಳಲಿದ್ದು, ಸುಬ್ರಹ್ಮಣ್ಯ ಸಿರಿಮನೆ ರವರು ಸುಧಾರಾಣಿ ರವರನ್ನು ಭೇಟಿಯಾದ ನಂತರ ವಿಜಯಸೂರ್ಯ ರವರನ್ನು ಅನು ಸಿರಿಮನೆ ಅವರಿಗೆ ಮದುವೆ ಮಾಡಬೇಕು ಎಂದು ಕಥೆ ಆರಂಭವಾಗಿ ಕ್ರಮೇಣ ಕಥೆಯನ್ನು ಮುಂದುವರೆಸಿ ಕೊನೆಯದಾಗಿ ಆರ್ಯವರ್ಧನ್ ರವರ ಜೊತೆ ಅನು ಸಿರಿಮನೆ ರವರ ಮದುವೆ ಮಾಡಲು ದಾರಿತೋರಿಸುವ ಮಹತ್ವದ ಪಾತ್ರಗಳು ಎನಿಸಿಕೊಳ್ಳಲಿದೆ.

ಒಟ್ಟಿನಲ್ಲಿ ಸುಧಾರಾಣಿ ಹಾಗೂ ವಿಜಯಸೂರ್ಯ ರವರು ಇದೀಗ ಜೊತೆ ಜೊತಯಲಿ ಧಾರಾವಾಹಿಯಲ್ಲಿ ಎಂಟ್ರಿ ಕೊಡುವ ಮೂಲಕ ಈ ಧಾರವಾಹಿ ಮತ್ತೊಮ್ಮೆ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತದಯೇ ಎಂಬುದನ್ನು ಕಾದುನೋಡಬೇಕಿದೆ.