ಕರ್ನಾಟಕ ರಣಜಿ ತಂಡಕ್ಕೆ ಆನೆಬಲ ! ಸೆಮಿಫೈನಲ್ ತಲುಪಿದ ಬೆನ್ನಲ್ಲೇ ಕರ್ನಾಟಕ ರಣಜಿ ತಂಡಕ್ಕೆ ಭರ್ಜರಿ ಗುಡ್ ನ್ಯೂಸ್ !

ಕರ್ನಾಟಕ ರಣಜಿ ತಂಡಕ್ಕೆ ಆನೆಬಲ ! ಸೆಮಿಫೈನಲ್ ತಲುಪಿದ ಬೆನ್ನಲ್ಲೇ ಕರ್ನಾಟಕ ರಣಜಿ ತಂಡಕ್ಕೆ ಭರ್ಜರಿ ಗುಡ್ ನ್ಯೂಸ್ !

ನಮಸ್ಕಾರ ಸ್ನೇಹಿತರೇ, ಇದೀಗ ಕರ್ನಾಟಕ ತಂಡವು ನಿಮಗೆಲ್ಲರಿಗೂ ತಿಳಿದಿರುವಂತೆ ಇಂದು ಜಮ್ಮು ಹಾಗೂ ಕಾಶ್ಮೀರ ತಂಡವನ್ನು 167 ರನ್ಗಳಿಂದ ಸೋಲಿಸಿ ಸೆಮಿಫೈನಲ್ ತಲುಪಿದೆ.

ಮತ್ತೊಮ್ಮೆ ರಣಜಿ ಟ್ರೋಫಿಯನ್ನು ಗೆಲ್ಲಲು ಕೇವಲ ಇನ್ನೆರಡು ಮೆಟ್ಟಿಲುಗಳು ಮಾತ್ರ ಬಾಕಿ ಉಳಿದಿವೆ. ಕ್ವಾಟರ್ ಫೈನಲ್ ಪಂದ್ಯದ ಕೊನೆಯ ದಿನದಲ್ಲಿ ಅತ್ಯುತ್ತಮ ಬೌಲಿಂಗ್ ನಡೆಸಿದ ಗೌತಮ್ ರವರು ಏಳು ವಿಕೆಟ್ ಗಳನ್ನು ಪಡೆದುಕೊಂಡು ಜಮ್ಮು ಹಾಗೂ ಕಾಶ್ಮೀರ ತಂಡವನ್ನು ಮನೆಗೆ ಕಳುಹಿಸಿದರು. ಪಂದ್ಯ ಗೆದ್ದೆವು ಇನ್ನೇನು ಸೆಮಿಫೈನಲ್ ಪಂದ್ಯದ ಕಡೆ ಗಮನ ಹರಿಸೋಣ ಎನ್ನುವಷ್ಟರಲ್ಲಿ ಕರ್ನಾಟಕ ತಂಡಕ್ಕೆ ಆನೆ ಬಲ ಬಂದಿದೆ.

ಹೌದು, ಭಾರತ ತಂಡದಲ್ಲಿ ಆಟವಾಡಿ ತದ ನಂತರ ರಾಷ್ಟ್ರೀಯ ಅಕಾಡೆಮಿಯಲ್ಲಿ ಅಭ್ಯಾಸ ಮಾಡಲು ಹಾಗೂ ವಿಶ್ರಾಂತಿ ಪಡೆಯಲು ಕ್ವಾಟರ್ ಫೈನಲ್ ತಂಡದಿಂದ ಹೊರಗುಳಿದಿದ್ದ ಕೆಎಲ್ ರಾಹುಲ್ ಅವರು ಇದೀಗ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕದ ಪರ ಅಖಾಡಕ್ಕೆ ಇಳಿಯುವುದು ಖಚಿತವಾಗಿದೆ. ಆಯ್ಕೆ ಸಮಿತಿಯು ರಾಹುಲ್ ರವರನ್ನು ತಂಡಕ್ಕೆ ಆಯ್ಕೆ ಮಾಡಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ಸೇರಿಕೊಂಡಿದ್ದ ಮನೀಶ್ ಪಾಂಡೆ ರವರು ಒಂದೆಡೆ ಬಲ ತಂದರೆ ಇದೀಗ ಸೆಮಿಫೈನಲ್ನಲ್ಲಿ ಕೆಎಲ್ ರಾಹುಲ್ ಸೇರಿಕೊಂಡಿರುವುದು ಕರ್ನಾಟಕ ತಂಡಕ್ಕೆ ಮತ್ತಷ್ಟು ಬಲ ತುಂಬಿದಂತಾಗಿದೆ. ಇದೇ ತಿಂಗಳ ಕೊನೆಯ ದಿನವಾದ 29ನೇ ತಾರೀಕಿನಂದು ಕರ್ನಾಟಕ ತಂಡ ಈಡನ್ ಗಾರ್ಡನ್ ಮೈದಾನದಲ್ಲಿ ಪಶ್ಚಿಮ ಬಂಗಾಳ ತಂಡದ ಜೊತೆ ಸೆಮಿಫೈನಲ್ ಪಂದ್ಯ ಆಡಲಿದೆ.