ಪರೇಶ್ ರಾವಲ್ ಹೇಳಿದ್ದನ್ನು ನೋಡಿ ಬೆಪ್ಪಾದ ಬುದ್ಧಿಜೀವಿಗಳು ! ಮತ್ತೊಮ್ಮೆ ಸದ್ದು ಮಾಡಿದ ಪರೇಶ್

ಪರೇಶ್ ರಾವಲ್ ಹೇಳಿದ್ದನ್ನು ನೋಡಿ ಬೆಪ್ಪಾದ ಬುದ್ಧಿಜೀವಿಗಳು ! ಮತ್ತೊಮ್ಮೆ ಸದ್ದು ಮಾಡಿದ ಪರೇಶ್

ನಮಸ್ಕಾರ ಸ್ನೇಹಿತರೇ, ಪರೇಶ್ ರಾವಲ್ ರವರ ಬಗ್ಗೆ ನಿಮಗೆಲ್ಲರಿಗೂ ತಿಳಿದೇ ಇದೆ. ಸಾಮಾಜಿಕ ವಿಷಯಗಳನ್ನು ಗಣನೆಗೆ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳ ಮುಂದೆ ಬಹಳ ನೇರವಾಗಿ ದ್ವನಿ ಎತ್ತುವ ಪರೇಶ್ ರಾವಲ್ ರವರು ಇದೀಗ ಮತ್ತೊಮ್ಮೆ ಸದ್ದು ಮಾಡಿದ್ದಾರೆ.

ದೇಶದ ಎಲ್ಲೆಡೆ ಪೌರತ್ವ ತಿದ್ದುಪಡಿ ಮಸೂದೆ ಕುರಿತು ಕಾನೂನು ಜಾರಿಯಾಗಿರುವುದರ ಕಾರಣ ಪ್ರತಿಭಟನೆ ಮಾಡುತ್ತಿರುವವರನ್ನು ಕಂಡು ಹಾಗೂ ಇವರ ಬೆಂಬಲಕ್ಕೆ ನಿಂತಿರುವ ಸೋ ಕಾಲ್ಡ್ ಬುದ್ಧಿ ಜೀವಿಗಳಿಗೆ ಟಾಂಗ್ ನೀಡಿರುವ ಪರೇಶ್ ರಾವಲ್ ರವರು ಹೇಳಿದ್ದನ್ನು ನೋಡಿ ಬುದ್ಧಿಜೀವಿಗಳು ಬೆಪ್ಪಾದರೇ ಮತ್ತೊಂದೆಡೆ ಪೌರತ್ವ ತಿದ್ದುಪಡಿ ಮಸೂದೆಯನ್ನು ಬೆಂಬಲಿಸುತ್ತಿರುವ ಜನರು ಪರೇಶ್ ರಾವಲ್ ರವರ ಹೇಳಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಅಷ್ಟಕ್ಕೂ ಅವರು ಹೇಳಿದ್ದಾದರೂ ಏನು ಗೊತ್ತಾ? ತಿಳಿಯಲು ಕೆಳಗಡೆ ಓದಿ.

ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಬರೆದು ಕೊಂಡಿರುವ ಪರೇಶ್ ರಾವಲ್ ರವರು  ಮ್ಯಾನ್ಮಾರ್ ನಿಂದ ಭಾರತ- 1769 ಕಿ.ಮೀ. ಮ್ಯಾನ್ಮಾರ್‌ನಿಂದ ಚೀನಾ ದೇಶಕ್ಕೆ – 2 ಕಿ.ಮೀ. ಆದರೂ ಕೂಡ ರೋಹಿಂಗ್ಯಾಗಳು ಭಾರತಕ್ಕೆ ಬರಲು ಏಕೆ ಬಯಸುತ್ತಾರೆ, ಅವರು ಚೀನಾಕ್ಕೆ ಹೋಗಲು ಏಕೆ ಬಯಸುವುದಿಲ್ಲ? ಎಂದು ಪ್ರಶ್ನೆ ಮಾಡಿ,ಅದರಲ್ಲಿಯೇ ಉತ್ತರ ನೀಡಿದ್ದಾರೆ. ಉತ್ತರ ಹೀಗಿದೆ: ಏಕೆಂದರೆ ನಿರಾಶ್ರಿತರಾದ ರೋಹಿಂಗ್ಯಾಗಳನ್ನು ಬೆಂಬಲಿಸಲು ಚೀನಾ ದೇಶದಲ್ಲಿ ಭಾರತದಲ್ಲಿ ಇದ್ದಂತೆ ಯಾವುದೇ ಬುದ್ಧಿಜೀವಿಗಳು ಮತ್ತು ರಾಷ್ಟ್ರ ವಿರೋಧಿಗಳು ಇಲ್ಲ ಎಂದು ಮಾತಿನಲ್ಲಿಯೇ ಕುಟುಕಿದ್ದಾರೆ. ಇವರ ಈ ಟ್ವೀಟ್ ಇದೀಗ ಬಾರಿ ವೈರಲ್ ಆಗಿದ್ದು ಇದರ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.