ಧಿಡೀರನೇ ಡಬಲ್ ಆಯಿತು ಸರಿಗಮಪ ಹನುಮಂತನ ಸಂಭಾವನೆ! ಎಷ್ಟು ಗೊತ್ತಾ? ಊಹಿಸಕ್ಕೂ ಕಷ್ಟ

ಧಿಡೀರನೇ ಡಬಲ್ ಆಯಿತು ಸರಿಗಮಪ ಹನುಮಂತನ ಸಂಭಾವನೆ! ಎಷ್ಟು ಗೊತ್ತ ಊಹಿಸಕ್ಕೂ ಕಷ್ಟ

ಸ ರಿ ಗ ಮ ಪ ಹನುಮಂತನ ಬಗ್ಗೆ ಈಗ ಯಾರಿಗೆ ಗೊತ್ತಿಲ್ಲ ಹೇಳಿ! ತಾನು ಕುರಿ ಕಾಯುವಾಗ ಹಾಡಿದ ಒಂದು ಹಾಡಿನ ವಿಡಿಯೋದಿಂದ ಹನುಮಂತ ಈಗ ಇಡೀ ಕರ್ನಾಟಕದ ಮನೆ ಮಾತಾಗಿದ್ದಾನೆ. ಸ ರಿ ಗ ಮ ಪ ಶೋ ದಲ್ಲಿ ಪ್ರತಿ ವಾರ ಕೂಡ ಹನುಮಂತ ವಿಭಿನ್ನವಾದ ಹಾಡುಗಳಿಂದ ಎಲ್ಲರ ಮನಸ್ಸನ್ನು ಗೆದಿದ್ದಾನೆ.

ಇತ್ತೀಚಿಗೆ ಅಷ್ಟೇ ಸ ರಿ ಗ ಮ ಪ ರಿಯಾಲಿಟಿ ಷೋ ನಲ್ಲಿ ಮುಂಗಾರು ಮಳೆ ಯೋಗರಾಜ್ ಭಟ್ ಅವರು ಕೂಡ, ಇವನ ಹಾಡುಗಳನ್ನು ಕೇಳಿ ಆನಂದ ಪಟ್ಟಿದ್ದಾರೆ. ಇದಲ್ಲದೆ ಹನುಮಂತನಿಗೆ ತಮ್ಮ ಮುಂದಿನ ಚಿತ್ರದಲ್ಲಿ ಹಾಡಲು ಅವಕಾಶ ಮುಂಗಾರು ಮಳೆ ಯೋಗರಾಜ್ ಭಟ್ಟರು ಕಲ್ಪಿಸಿ ಕೊಟ್ಟಿದ್ದಾರೆ.

ಈಗ ಹನುಮಂತನಿಗೆ ಮತ್ತೊಂದು ಬಂಪರ್ ಆಫರ್ ಬಂದಿದೆ. ಅಷ್ಟಕ್ಕೂ ಅದೇನು ಗೊತ್ತಾ? ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ ನಿಮಗೆ ತಿಳಿಯುತ್ತದೆ.

ವಿಷಯ ಏನಪ್ಪಾ ಅಂದರೆ ಕಳೆದ ವಾರದಿಂದ ಧಿಡೀರನೇ ಹನುಮಂತನ ಪರ್ಫಾರ್ಮೆನ್ಸ್ ನೋಡಿ ಮೆಚ್ಚಿದ ಜಿ ಕನ್ನಡ ತಂಡದವರು ಇವನ ಸಂಭಾವನೆಯನ್ನುಇದ್ದಕ್ಕಿದ್ದ ಹಾಗೆ ಹೆಚ್ಚಿಸಿದ್ದಾರೆ. ಇಲ್ಲಿಯ ವರೆಗೆ ಸ ರಿ ಗ ಮ ಪ ಶೋನಲ್ಲಿ ಹನುಮಂತನಿಗೆ ಒಂದು ಹಾಡು ಹಾಡಲು ಸುಮಾರು 10 ರಿಂದ 15 ಸಾವಿರ ಸಂಭಾವನೆಯನ್ನು ಕೊಡಲಾಗುತ್ತಿತ್ತು.

ನಿಮಗೆಲ್ಲ ಗೊತ್ತಿರೋ ಹಾಗೆ ಹನುಮಂತನ ಜನಪ್ರಿಯತೆ ಈಗ ಬಹಳ ಜಾಸ್ತಿ ಆಗಿದೆ,ಕರ್ನಾಟಕದಲ್ಲಿ ಮನೆಮಾತಾಗಿದ್ದಾರೆ. ಇದೇ ಕಾರಣಕ್ಕೆ ಈಗ ಹನುಮಂತಪ್ಪ ನವರಿಗೆ ಒಂದು ಹಾಡು ಹಾಡಲು ಬರೋಬ್ಬರಿ 3೦,೦೦೦ ರೂಪಾಯಿಗಳು ಜಿ ವಾಹಿನಿಯಿಂದ ಕೊಡುತ್ತಿದ್ದಾರೆ. ಇದು ನಿಜಕ್ಕೂ ಹನುಮಂತಪ್ಪನವರ ಒಂದು ಸಾಧನೆ ಎಂದು ಹೇಳಬಹದು.

ಕನ್ನಡದ ಹಳ್ಳಿಯ ಪ್ರತಿಭೆ ಹನುಮಂತಪ್ಪನವರು ಈಗ ಕರ್ನಾಟಕದ ಮನೆ ಮಾತಾಗಿದ್ದಾರೆ. ತನ್ನ ಹಳ್ಳಿಯಲ್ಲಿ ಕುರಿ ಕಾಯುವಾಗ ಮಾಡಿದ ಒಂದು ಸೆಲ್ಫಿ ವಿಡಿಯೋ ಹನುಮಂತನಿಗೆ ಈ ಮಟ್ಟದ ಹೆಸರನ್ನು ತಂದು ಕೊಟ್ಟಿದೆ ಎಂದರೆ ನೀವು ನಂಬಲೇಬೇಕು. ಬಹಳ ದಿನಗಳಿಂದ ಕನ್ನಡದ ಹೆಸರಾಂತ ಹಾಡಿನ ರಿಯಾಲಿಟಿ ಶೋ ಸ ರಿ ಗ ಮ ಪ ದಲ್ಲಿ ಹನುಮಂತ ಹಾಡುಗಳನ್ನು ಕೇಳಿದ ಜನ ಹುಚ್ಚೆದ್ದು ಕುಣಿಯುತ್ತಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಅನುಶ್ರೀ ಅವರ ಕೋರಿಕೆ ಯಂತೆ ಹನುಮಂತ ಅವರ ತಾಯಿ ಕೂಡ ರಿಯಾಲಿಟಿ ಶೋಗೆ ಬಂದಿದ್ದರು. ಈ ಸಮಯದಲ್ಲಿ ಹನುಮಂತ ಯಾರೇ ಕೂಗಾಡಲಿ ಊರೇ ಹೋರಾಡಲಿ ಹಾಡನ್ನು ಹಾಡಿದ್ದಾನೆ, ಇದಕ್ಕೆ ಅನುಶ್ರೀ ಅವರು ಲಂಬಾಣಿ ಗೆಟಪ್ ನಲ್ಲಿ ಸಕತ್ ಡಾನ್ಸ್ ಮಾಡಿದ್ದರು.