ಹುಷಾರ್: ದನಗಳನ್ನು ಕಳ್ಳತನ ಮಾಡಿ ಸಾಗಿಸುತ್ತಿದ್ದ ಕಾರುಗಳನ್ನು ಪುಡಿಪುಡಿ ಮಾಡಿದ ಆಕ್ರೋಶಗೊಂಡ ಗ್ರಾಮಸ್ಥರು..!!

ಹುಷಾರ್: ದನಗಳನ್ನು ಕಳ್ಳತನ ಮಾಡಿ ಸಾಗಿಸುತ್ತಿದ್ದ ಕಾರುಗಳನ್ನು ಪುಡಿಪುಡಿ ಮಾಡಿದ ಆಕ್ರೋಶಗೊಂಡ ಗ್ರಾಮಸ್ಥರು..!!

0

ಶಿವಮೊಗ್ಗ: ಕದ್ದು ಸಾಗಿಸುತ್ತಿದ್ದ ದನಗಳನ್ನು 3 ಕಾರುಗಳನ್ನು ಗ್ರಾಮಸ್ಥರು ಪುಡಿಪುಡಿ ಮಾಡಿದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಬ್ಯಾಕೋಡು ಬಳಿ ನಡೆದಿದೆ.

ರಸ್ತೆಯಲ್ಲಿ ಮೇಯುತ್ತಿದ್ದ ಐದು ದನಗಳನ್ನು , ಝೈಲೋ ,ಇನ್ನೋವಾ ಕಾರುಗಳಲ್ಲಿ ತುಂಬಿಕೊಂಡು ಹೋಗುತ್ತಿದ್ದರು. ಇದನ್ನು ಗಮನಿಸಿದ ಗ್ರಾಮಸ್ಥರು ಹಾರಿಗೆ ಗ್ರಾಮದ ಬಳಿ ಕಾರನ್ನು ತಡೆದು. ಆಕ್ರೋಶಗೊಂಡಿದ್ದ ಗ್ರಾಮಸ್ಥರು ಎರಡೂ ಕಾರುಗಳನ್ನು ಪುಡಿಪುಡಿ ಮಾಡಿದ್ದಾರೆ.

ಗ್ರಾಮಸ್ಥರ ಆಕ್ರೋಶಕ್ಕೆ ಬೆದರಿದ ದನಗಳ್ಳರು ತಕ್ಷಣವೇ ದನಗಳು ಇದ್ದ ಕಾರನ್ನು ಬಿಟ್ಟು ಹಿಂದಿನಿಂದ ಬಂದ ಇನ್ನೊಂದು ಕಾರಿನಲ್ಲಿ ಐವರು ಪರಾರಿಯಾಗಿದ್ದಾರೆ. ಇವರನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿದ ಪೊಲೀಸರು ಹಾಗೂ ಗ್ರಾಮಸ್ಥರು ಈ ತಂಡವನ್ನು ಕೊಲ್ಲೂರು ಬಳಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣ ದಾಖಲಿಸದೆ ಆರೋಪಿಗಳನ್ನು ಬಿಟ್ಟು ಕಳಿಸುತ್ತಾರೆ ಎಂಬ ಗುಮಾನಿಯಿಂದ ರಾತ್ರಿ ಬ್ಯಾಕೋಡು ಪೊಲೀಸ್ ಔಟ್ ಪೋಸ್ಟ್ ಬಳಿ ಸುತ್ತಮುತ್ತಲ ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ನಂತರ ಆರೋಪಿಗಳನ್ನು ಕಾರ್ಗಲ್ ಠಾಣೆಗೆ ಕರೆದೊಯ್ದು, ಪ್ರಕರಣ ದಾಖಲಿಸಲಾಗಿದೆ.