ಬಿಜೆಪಿ ಅಧಿಕಾರಕ್ಕೆ ಬಂದರೆ ಗೋ ಹತ್ಯೆ ಬಂದ್: ಪ್ರಣಾಳಿಕೆ ಬಿಡುಗಡೆ – ಶೇರ್ ಮಾಡಿ ಪ್ರತಿಯೊಬ್ಬರಿಗೂ ತಿಳಿಸಿ
ಬಿಜೆಪಿ ಅಧಿಕಾರಕ್ಕೆ ಬಂದರೆ ಗೋ ಹತ್ಯೆ ಬಂದ್: ಪ್ರಣಾಳಿಕೆ ಬಿಡುಗಡೆ – ಶೇರ್ ಮಾಡಿ ಪ್ರತಿಯೊಬ್ಬರಿಗೂ ತಿಳಿಸಿ
ಕರ್ನಾಟಕ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಬಿಜೆಪಿ, ತನ್ನ ಪ್ರಣಾಳಿಕೆ ಮೂಲಕ ರಾಜ್ಯದ ಜನರಿಗೆ ಭರವಸೆಗಳ ಮಾಹಪೂರಗಳನ್ನೇ ನೀಡಿದೆ.ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಮನಗೆಲ್ಲಲು ಬಿಜೆಪಿ ‘ನಮ್ಮ ಕರ್ನಾಟಕಕ್ಕೆ ನಮ್ಮ ವಚನ’ ಎಂಬ ಹೆಸರಿನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.ಕರ್ನಾಟಕ ಗೋ ಹತ್ಯೆ ನಿಷೇಧ ಕಾಯ್ದೆ 2012 ಕ್ಕೆ ಮರುಚಾಲನೆ, ಗೋ ಸೇವಾ ಆಯೋಗದ ಪುನರಾರಂಭ ಮಾಡುವುದಾಗಿ ಬಿಜೆಪಿ ಆಶ್ವಾಸನೆ ನೀಡಿದೆ.
ಕೋಮು ಪ್ರಚೋದನೆ ಗುಂಪುಗಳಾದ ಪಿಎಫ್ಐ ಮತ್ತು ಕೆಎಫ್ಡಿ ಸೇರಿದಂತೆ ಇನ್ನಿತರ ಗುಂಪುಗಳನ್ನು ನಿಷೇಧಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಬಿಜೆಪಿ ಜನತೆಗೆ ಭಾಷೆ ಕೊಟ್ಟಿದೆ. ರೈತರ, ಕೃಷಿ ಅಭಿವೃದ್ಧಿಗಾಗಿ ಯೋಜನೆಗಳನ್ನು ಜಾರಿಗೆ ತರುವುದೂ ಸೇರಿದಂತೆ ಹಲವು ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ.ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವಡೇಕರ್, ಮುರುಳೀಧರ್ ರಾವ್, ಸೇರಿದಂತೆ ಹಲವು ಬಿಜೆಪಿ ನಾಯಕರು ಪ್ರಣಾಳಿಕೆ ಬಿಡುಗಡೆಯಲ್ಲಿ ಉಪಸ್ಥಿತರಿದ್ದರು.
ಪ್ರಣಾಳಿಕೆ ಬಿಡುಗಡೆಗೂ ಮುನ್ನ ನಿನ್ನೆ ನಿಧನ ಹೊಂದಿದ ಬಿಜೆಪಿ ಅಭ್ಯರ್ಥಿ ವಿಜಯ್ ಕುಮಾರ್’ಗೆ ಸಂತಾಪ ಸೂಚಿಸಿದರು.ಶಾಲಾ ಕಾಲೇಜು ಶುಲ್ಕ ನಿಯಂತ್ರಣ ಪ್ರಾಧಿಕಾರ ಸ್ಥಾಪಿಸುವುದು ಸೇರಿದಂತೆ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಬೆಂಗಳೂರು ಸೇರಿದಂತೆ ಎಲ್ಲ ನಗರಗಳಲ್ಲಿ ಅಗತ್ಯ ಮೂಲಸೌಕರ್ಯ ಹಾಗೂ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ.
ಪ್ರಣಾಳಿಕೆಯಲ್ಲಿನ ಮುಖ್ಯಾಂಶಗಳು:
- ₹ 1 ಲಕ್ಷವರೆಗಿನ ರೈತರ ಸಾಲಮನ್ನಾ.
- ಕಾಲೇಜಿಗೆ ಸೇರುವ ವಿದ್ಯಾರ್ಥಿಗಳಿಗೆಲ್ಯಾಪ್ ಟಾಪ್.
- ಮೊದಲ ಸಂಪುಟ ಸಭೆಯಲ್ಲಿ ಲೋಕಾಯುಕ್ತಕ್ಕೆಪೂರ್ಣಾಧಿಕಾರ ನೀಡುವ ತೀರ್ಮಾನ.
- ಪಿಎಫ್ಐ, ಕೆಎಫ್ ಡಿ ಸಂಘಟನೆಗಳ ನಿಷೇಧ.
- ಗೋಹತ್ಯೆ ತಡೆ ಮಸೂದೆ ಜಾರಿ.
- ಭ್ರಷ್ಟಾಚಾರದ ಪ್ರಕರಣ ಬಯಲಿಗೆ ಎಳೆಯುವವರ ರಕ್ಷಣೆಗಾಗಿ ವಿಷಲ್ ಬ್ಲೋವರ್ ಪಾಲಿಸಿ ರಚನೆ.
- ಪ್ರತಿ ಜಿಲ್ಲೆಯಲ್ಲಿ 3 ಹಾಗೂ ತಾಲ್ಲೂಕಿಗೆ 1 ಅನ್ನಪೂರ್ಣ ಕ್ಯಾಂಟೀನ್.
- 20 ಲಕ್ಷ ಸಣ್ಣ ರೈತರಿಗೆ ತಲಾ ₹ 10,000 ನೀಡುವ ನೇಗಿಲಯೋಗಿ ಯೋಜನೆ.
- ರೈತರ ಪಂಪ್ಸೆಟ್ಗಳಿಗೆ ಪ್ರತಿದಿನ 10 ಗಂಟೆಗಳ ಕಾಲ ತ್ರೀ ಫೇಸ್ ವಿದ್ಯುತ್ ಪೂರೈಕೆ.
- ಪ್ರತಿವರ್ಷ ಒಂದು ಸಾವಿರ ರೈತರಿಗೆ ಇಸ್ರೇಲ್ ಮತ್ತು ಚೀನಾ ಭೇಟಿಗೆ ವ್ಯವಸ್ಥೆಮಹಿಳೆಯರಿಗಾಗಿ.
- ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಉಚಿತ ಸ್ಮಾರ್ಟ್ಫೋನ್, ಸ್ಯಾನಿಟರಿ ನ್ಯಾಪ್ಕಿನ್.
- ವಿವಾಹ ಮಂಗಳ ಯೋಜನೆಯಡಿ ಬಿಪಿಎಲ್ ಕುಟುಂಬದ ಯುವತಿಯರ ಮದುವೆಗೆ ₹ 25 ಸಾವಿರ ಮತ್ತು 3 ಗ್ರಾಂನ ಚಿನ್ನದ ತಾಳಿ.
- ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘಗಳ ಮಹಿಳೆಯರಿಗೆ ಶೇ 1ರ ಬಡ್ಡಿದರದಲ್ಲಿ ₹ 2 ಲಕ್ಷದ ವರೆಗೆ ಸಾಲ.
ಯುವಜನರಿಗೇನು?:
- ಉದ್ಯೋಗ ಅವಕಾಶ ಸೃಷ್ಟಿಸಲು 60 ಬಿಪಿಓ ಸಂಕೀರ್ಣಗಳ ಸ್ಥಾಪನೆ
- ಹುಬ್ಬಳ್ಳಿ, ಬೆಂಗಳೂರು, ರಾಯಚೂರು, ಕಲಬುರ್ಗಿ, ಮೈಸೂರು, ಮಂಗಳೂರಿನಲ್ಲಿ ಸ್ಟಾರ್ಟ್ಅಪ್ ಕಂಪನಿಗಳಿಗೆ ಸ್ಥಳಾವಕಾಶ
- ಶಾಲಾ–ಕಾಲೇಜುಗಳಲ್ಲಿ ಕ್ರೀಡಾ ಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು ₹ 100 ಕೋಟಿ
- ಪ್ರತಿ ತಾಲ್ಲೂಕಿನಲ್ಲಿ ಅಥ್ಲೆಟಿಕ್ ಟ್ರ್ಯಾಕ್, ಈಜುಕೋಳ, ಒಳಾಂಗಣ ಕ್ರೀಡಾಂಗಣಸಮುದಾಯವಾರು:
- ಮದಕರಿ ನಾಯಕ ವಸತಿ ಯೋಜನೆಯಡಿ ಪರಿಶಿಷ್ಟ ಪಂಗಡ ಸಮುದಾಯಗಳಿಗೆ ವಸತಿ ನಿರ್ಮಿಸಲು ₹ 6.500 ಕೋಟಿ ಮೀಸಲು
- ಮಾದಾರ ಚೆನ್ನಯ್ಯ ವಸತಿ ಯೋಜನೆಯಡಿ ಪರಿಶಿಷ್ಟ ಜಾತಿ ಸಮುದಾಯಗಳಿಗೆ ಆಧುನಿಕ ಮನೆಗಳ ನಿರ್ಮಾಣ
- ಡಾ.ಬಿ.ಆರ್.ಅಂಬೇಡ್ಕರ್ ಬದುಕಿನೊಂದಿಗೆ ಸಂಬಂಧ ಹೊಂದಿದ್ದ ಮೌವ್, ನಾಗಪುರ, ದೆಹಲಿ, ದಾದರ್ ಮತ್ತು ಲಂಡನ್ಗೆ ಭೇಟಿ ನೀಡಲು ‘ಡಾ.ಭೀಮ್ರಾವ್ ರಾಮ್ಜೀ ಅಂಬೇಡ್ಕರ್ ತೀರ್ಥಸ್ಥಳ ಯಾತ್ರೆ’ ನಿಧಿ ಸ್ಥಾಪನೆ
- ತಿಗಳ, ಸವಿತಾ ಸಮಾಜ, ಈಡಿಗ, ಬಿಲ್ಲವ ಹಾಗೂ ಯಾದವ ಸಮುದಾಯಗಳ ಕಲ್ಯಾಣಕ್ಕಾಗಿ ಮಂಡಳಿ/ಅಭಿವೃದ್ಧಿ ನಿಗಮ ಸ್ಥಾಪನೆ
ದಕ್ಷ ಆಡಳಿತಕ್ಕಾಗಿ:
- ಅಧಿಕಾರಕ್ಕೆ ಬಂದ 30 ದಿನಗೊಳಗಾಗಿ ರಾಜ್ಯದಲ್ಲಿನ ಮರಳು, ಭೂ ಮತ್ತು ಕಾನೂನುಬಾಹಿರ ಗಣಿಗಾರಿಕೆ ಕೊನೆಗಾಣಿಸಲು ಶಾಶ್ವತ ವಿಶೇಷ ಕಾರ್ಯಪಡೆ ಸ್ಥಾಪನೆ
- ಜನರ ಸುರಕ್ಷತೆಗಾಗಿ ರಾಜ್ಯಾದ್ಯಂತ ಸಿ.ಸಿ.ಟಿ.ವಿ ಕ್ಯಾಮೆರಾಗಳ ಅಳವಡಿಕೆ
- ಪೊಲೀಸ್ ಪಡೆಯಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳ ಭರ್ತಿ
ಆರೋಗ್ಯ:
- ಎಲ್ಲ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಜನೌಷಧಿ ಮಳಿಗೆಗಳ ಸ್ಥಾಪನೆ
- ಎಲ್ಲ ಬಡ ಮತ್ತು ದುರ್ಬಲ ವರ್ಗದವರ ಚಿಕಿತ್ಸೆಗಾಗಿ ₹ 5 ಲಕ್ಷ ವಿಮೆ ಒದಗಿಸುವ ‘ಆಯುಷ್ಮಾನ್ ಕರ್ನಾಟಕ ಯೋಜನೆ’ ಜಾರಿ.
- ಆರೋಗ್ಯ ರಕ್ಷಣೆಗೆ ಯೋಜನೆ
ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ದುರ್ಬಲಗೊಂಡ ಕಾಯಿದೆಗಳನ್ನು ಬಲಗೊಳಿಸಿ, ಸಕಾಲ ಕಾಯ್ದೆಯನ್ನು ಎಲ್ಲ ಸರಕಾರಿ ಸೇವೆಗಳಿಗೆ ವಿಸ್ತರಿಸುವುದು, ಏಮ್ಸ್ ಮಾದರಿಯಲ್ಲಿ ಕರ್ನಾಟಕ ರಾಜ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಗಳನ್ನು ಸ್ಥಾಪಿಸುವುದಾಗಿ ಬಿಜೆಪಿ ಹೇಳಿದೆ.ಉದ್ಯಮಗಳನ್ನು ನಡೆಸಲು ಏಕಗವಾಕ್ಷಿ ವ್ಯವಸ್ಥೆಯಲ್ಲಿ ಮತ್ತಷ್ಟು ಸುಧಾರಣೆ, ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಿಸಿದ್ದು, ಸ್ವಚ್ಛ ಹಾಗೂ ಹಸಿರು ಕರ್ನಾಟಕ ನಿರ್ಮಾಣಕ್ಕಾಗಿ ಪ್ರತಿ ನಗರದಲ್ಲಿ ಲಾಲ್ಬಾಗ್ನಂತಹ ಉದ್ಯಾನ ನಿರ್ಮಾಣ ಹಾಗೂ ಮಾಡುವುದಾಗಿ ಬಿಜೆಪಿ ಹೇಳಿದೆ.ಮಿಶನ್ ಕಲ್ಯಾಣಿ ಯೋಜನೆ.
ಭೂ ರಹಿತ ಕಾರ್ಮಿಕರಿಗೆ ಮುಖ್ಯಮಂತ್ರಿ ರೈತ ಸುರಕ್ಷಾ ವಿಮೆ ಯೋಜನೆಯಡಿ, ಉಚಿತ 2 ಲಕ್ಷ ರೂ. ಅಫಘಾತ ವಿಮೆ, ರಾಜ್ಯದ ಎಲ್ಲ ಕೆರೆಗಳ ಅಭಿವೃದ್ಧಿಗಾಗಿ ಮಿಶನ್ ಕಲ್ಯಾಣಿ ಯೋಜನೆ, ರೈತ ಬಂಧು ವಿದ್ಯಾರ್ಥಿ ವೇತನ ನೀಡಲಾಗುವುದು ಹಾಗೂ ದೇವಾಲಯಗಳ ಆದಾಯವನ್ನು ಸಂಪೂರ್ಣವಾಗಿ ಆಯಾ ದೇವಳದ ಅಭಿವೃದ್ಧಿ ಚಟುವಟಿಕೆಗೆ ಮೀಸಲಿಡುವಂತೆ ಕಾಯಿದೆ ತಿದ್ದುಪಡಿ ಮಾಡಲಾಗುವುದು ಎಂದು ಭರವಸೆ ನೀಡಿದೆ.
Source: http://www.prajavani.net/news/article/2018/05/04/570582.html