ಹೊಸ ಉಪಾಯದೊಂದಿಗೆ ಐಪಿಎಲ್ ಟೂರ್ನಿ ಮುಂದುವರೆಸಲು ಆಲೋಚನೆ ನಡೆಸಿದ ಗಂಗೂಲಿ. ಏನಂತೆ ಗೊತ್ತಾ?

ನಮಸ್ಕಾರ ಸ್ನೇಹಿತರೇ ನಿಮಗೆ ಐಪಿಎಲ್ ಟೂರ್ನಿ ನಿಂತು ಹೋಗಿರುವುದು ಬೇಸರ ತರಿಸಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ, ಅದರಲ್ಲಿಯೂ ಇದೇ ಮೊಟ್ಟ ಮೊದಲ ಬಾರಿಗೆ ಆರ್ಸಿಬಿ ತಂಡವು ಹಲವಾರು ವರ್ಷಗಳ ಬಳಿಕ ಟೂರ್ನಿಯ ಆರಂಭದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಯಾರು ಊಹಿಸಿದಂತೆ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿರುವ ಕಾರಣ ಟೂರ್ನಿ ಗೆಲ್ಲುವ ನೆಚ್ಚಿನ ತಂಡ ಗಳಲ್ಲಿ ಒಂದಾಗಿದೆ, ಆದರೆ ಇಂತಹ ಸಮಯದಲ್ಲಿ ಐಪಿಎಲ್ ನಿಂತು ಹೋದರೇ ಸಾಮಾನ್ಯಕ್ಕಿಂತ ಹೆಚ್ಚಿನ ನಿರಾಸೆಯಾಗುವುದು ಆರ್ಸಿಬಿ ಅಭಿಮಾನಿಗಳಿಗೆ.

ಆದರೆ ಈತನಮಧ್ಯೆ ಕೇವಲ ಆರ್ಸಿಬಿ ಅಭಿಮಾನಿಗಳಿಗೆ ಅಷ್ಟೇ ಅಲ್ಲದೆ ಐಪಿಎಲ್ ಟೂರ್ನಿಯ ಅಭಿಮಾನಿಗಳಿಗೆ ಸಂತಸದ ಸುದ್ದಿಯನ್ನು ನೀಡಲು ಬಿಸಿಸಿಐಗೆ ಅಧ್ಯಕ್ಷರಾಗಿರುವ ಹಾಗೂ ನಮ್ಮ ನಿಮ್ಮೆಲ್ಲರ ನೆಚ್ಚಿನ ಸೌರವ್ ಗಂಗೂಲಿಯವರು ಸಿಹಿ ಸುದ್ದಿ ನೀಡಲು ಸಿದ್ಧತೆ ನಡೆಸಿದ್ದಾರೆ ಎಂಬುದು ತಿಳಿದು ಬಂದಿದೆ.

ಹೌದು ಸ್ನೇಹಿತರೇ ಮೂಲಗಳ ಪ್ರಕಾರ ಇದೀಗ ಕೇವಲ ಒಂದು ಪರ್ಮಿಷನ್ ಗಾಗಿ ಸೌರವ್ ಗಂಗೂಲಿ ರವರು ಕಾಯುತ್ತಿದ್ದು, ಆ ಒಂದು ಪರ್ಮಿಷನ್ ಸಿಕ್ಕರೆ ಕೇವಲ 7 ದಿನಗಳಲ್ಲಿ ಟೂರ್ನಿ ಆರಂಭವಾಗಿದೆ. ಹೌದು ಸ್ನೇಹಿತರೇ ಎಲ್ಲ ಎಂಟು ತಂಡಗಳನ್ನು ಮುಂಬೈ ನಗರಕ್ಕೆ ವರ್ಗಾವಣೆ ಮಾಡಿ ಎಲ್ಲಾ ಪಂದ್ಯಗಳನ್ನು ಮುಂಬೈ ನಗರದ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಿ ಯಾವುದೇ ಕಾರಣಕ್ಕೂ ಆಟಗಾರರನ್ನು ಕೂಡ ಹೊರಗಡೆ ಹೋಗದಂತೆ ನೋಡಿ ಕೊಂಡು ಐಪಿಎಲ್ ಟೂರ್ನಿ ಮುಂದುವರಿಸಲು ಚಿಂತನೆ ನಡೆಸಿದ್ದಾರೆ. ಒಂದು ವೇಳೆ ಅದು ನಡೆದರೆ ಕಂಡಿತ ಆರ್ಸಿಬಿ ತಂಡ ಕಪ್ ಗೆಲ್ಲಲಿದೆ. ಏನಂತೀರಿ??