Loan Recovery– ಬ್ಯಾಂಕ್ ಇಂದ ಸಾಲ ಪಡೆದಿರುವವರಿಗೆ ಜನರು ಸಾಲ ಮರುಪಾವತಿ ಮಾಡಲು ಆಗದೆ ಇದ್ದಾಗ, ಅವರಿಂದ ಸಾಲದ ಹಣವನ್ನು ವಾಪಸ್ ಪಡೆಯಲು ಬ್ಯಾಂಕ್ ಕೆಲವು ಕಠಿಣ ಕ್ರಮಗಳನ್ನು ಜನರ ಮೇಲೆ ಹೇರುತ್ತದೆ. ಇದರಿಂದ ಜನರಿಗೆ ನಿಜಕ್ಕೂ ತೊಂದರೆ ಆಗುತ್ತಿದೆ ಎಂದು ಹೇಳಬಹುದು. ಆದರೆ ಈ ವಿಚಾರಗಳ ಬಗ್ಗೆ ಈಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಲ್ಲಾ ಖಾಸಗಿ ಮತ್ತು ಸರ್ಕಾರಿ ಬ್ಯಾಂಕ್ ಗಳಿಗೆ ಸೂಚನೆ ಕೊಟ್ಟಿದ್ದಾರೆ.
ಬ್ಯಾಂಕ್ ಗಳ ಸಾಲ ಮರುಪಾವತಿ ವಿಷಯದ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು ಮಾತನಾಡಿದ್ದು, ಜನರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವ ಅಗತ್ಯವಿಲ್ಲ, ಆ ರೀತಿ ಆದಾಗ ಹುಷಾರಾಗಿ, ಮಾನವೀಯತೆಯಿಂದ ಸಂದರ್ಭವನ್ನು ನಿಭಾಯಿಸಬೇಕು ಎಂದು ನಿರ್ಮಲಾ ಸೀತಾರಾಮನ್ ಅವರು ಎಲ್ಲಾ ಬ್ಯಾಂಕ್ ಗಳಿಗೆ ಆದೇಶ ನೀಡಿದ್ದಾರೆ. ಲೋಕಸಭೆಯಲ್ಲಿ ಪ್ರಶ್ನೆ ಉತ್ತರಗಳು ನಡೆಯುವ ವೇಳೆ ಈ ವಿಷಯ ಚರ್ಚೆ ಆಯಿತು. ಮಾರುಕಟ್ಟೆಯಲ್ಲಿ ಸಿಗುತ್ತಿರುವ ಪ್ಲಾಸ್ಟಿಕ್ ಅಕ್ಕಿಯನ್ನು ಗುರುತಿಸುವುದು ಹೇಗೆ ಗೊತ್ತೇ? ಸಂಪೂರ್ಣ ಡೀಟೇಲ್ಸ್.
ಬ್ಯಾಂಕ್ ಸಾಲ ಮರುಪಾವತಿ ಬಗ್ಗೆ ಪ್ರಶ್ನೆ ಬಂದಾಗ ನಿರ್ಮಲಾ ಸೀತಾರಾಮನ್ ಅವರು ಈ ರೀತಿ ಹೇಳಿದ್ದಾರೆ. “ಕೆಲವು ಬ್ಯಾಂಕ್ ನವರು ಯಾವುದೇ ಕರುಣೆ ಇಲ್ಲದೆ ನಡೆದುಕೊಳ್ಳುತ್ತಿವೆ ಎನ್ನುವ ಬಗ್ಗೆ ನಾನು ಕೂಡ ಸಾಕಷ್ಟು ದೂರುಗಳನ್ನು ಕೇಳಿದ್ದೇನೆ. ಈ ವೇಳೆ ಬ್ಯಾಂಕ್ ನವರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬಾರದು. ಬ್ಯಾಂಕ್ ಸಿಬ್ಬಂದಿಗಳಲ್ಲಿ ಸೂಕ್ಷ್ಮತೆ ಮತ್ತು ಮಾನವೀಯತೆ ಇರಬೇಕು ಎಂದು ಸರ್ಕಾರ ಎಲ್ಲಾ ಬ್ಯಾಂಕ್ ಗಳಿಗೆ ಸೂಚನೆ ನೀಡಿದೆ..” ಎಂದು ಮಾಹಿತಿ ನೀಡಿದ್ದಾರೆ ನಿರ್ಮಲಾ ಸೀತಾರಾಮನ್.
ಬ್ಯಾಂಕ್ ಸಾಲ ಮರುಪಾವತಿ ಬಗ್ಗೆ ಮೆಡ್ರಾಸ್ ಕೋರ್ಟ್ ಕೂಡ ಎಲ್ಲಾ ಬ್ಯಾಂಕ್ ಗಳು ಸಾಲಸ ಹಿಂಪಡೆಯುವ ವೇಳೆ ಈರ್ಕಾರ ಕೊಟ್ಟಿರುವ ಸೂಚನೆಯನ್ನು ಪಾಲಿಸಬೇಕು, ಅದಕ್ಕೆ ಅನುಗುಣವಾಗಿಯೇ ಸಾಲವನ್ನು ವಾಪಸ್ ಪಡೆಯಬೇಕು ಎಂದು ಹೇಳಿದೆ. ಸಾಲ ವಸೂಲಿ ಮಾಡಲು ಬ್ಯಾಂಕ್ ಏಜೆನ್ಟ್ ಗಳನ್ನು ನೇಮಿಸಿರುತ್ತದೆ, ಆದರೆ ಅದಕ್ಕೆ ಅನುಮತಿ ಇಲ್ಲ ಎಂದು ತಿಳಿಸಲಾಗಿದೆ. ಸಾಲ ವಾಪಸ್ ಪಡೆಯಲು ರೈತರ ಮೇಲೆ ಬಲವಂತ ಒತ್ತಡ ಹೇರಲಾಗುತ್ತಿದೆ ಎಂದು ಆರೋಪ ಮಾಡಲಾಗಿದೆ. ವಾಹನ ಓಡಿಸುವಾಗ ಮದ್ಯದಲ್ಲಿ ಕ್ಲಚ್ ಒತ್ತಿ ಗೇರು ಬದಲಾಯಿಸಬೇಕಾ? 90 % ಚಾಲಕರು ಮಾಡುವ ತಪ್ಪನ್ನು ನೀವು ಮಾಡಬೇಡಿ.
ಈ ಅರ್ಜಿ ಪರಿಶೀಲಿಸುವಾಗ ಶಕ್ತಿ ಬಳಸುವುದಿಲ್ಲ ಎಂದು ತಿಳಿಸಲಾಗಿದೆ. ಈಗಾಗಲೇ 2008 ರಲ್ಲಿ ಬ್ಯಾಂಕ್ ನಿಯಮದ ಪ್ರಕಾರ, ಬ್ಯಾಂಕ್ ಏಜೆನ್ಟ್ ಗಳ ವಿರುದ್ದ ದೂರು ಬಂದರೆ, ಈ ರೀತಿಯ ಏಜೆನ್ಟ್ ನೇಮಕ ಮಾಡಿಕೊಳ್ಳುವುದರಿಂದ ಬ್ಯಾಂಕ್ ಅನ್ನು ನಿಷೇಧಿಸುವ ಬಗ್ಗೆ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದೆ ಸರ್ಕಾರ.. ಬ್ಯಾಂಕ್ ಗಳು ತಮ್ಮ ಮಾರ್ಗಸೂಚಿಯನ್ನು ಆಗಾಗ ಪರಿಶೀಲಿಸಬೇಕು ಎಂದು ತಿಳಿಸಿದೆ..