ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಉತ್ತರ ಪ್ರದೇಶ ದಂತಹ ಬಹುಸಂಖ್ಯಾ ರಾಜ್ಯದಲ್ಲಿ ಕರೋನ ವೈರಸ್ ತಡೆಗಟ್ಟಲು ಯೋಗಿ ಆದಿತ್ಯನಾಥ್ ಅವರು ಹಲವಾರು ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ.
23 ಕೋಟಿ ಜನ ಸಂಖ್ಯೆ ಹೊಂದಿರುವ ಉತ್ತರ ಪ್ರದೇಶದಲ್ಲಿ ಕರೋನ ತಡೆಗಟ್ಟುವುದು ಸುಲಭದ ಕೆಲಸವಾಗಿರಲಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಇತರ ರಾಜ್ಯಗಳ ಮುಖ್ಯಮಂತ್ರಿಗಳು ಯಾರು ಮಾಡದ ಕೆಲವು ನಿರ್ಧಾರಗಳನ್ನು ಯೋಗಿ ಆದಿತ್ಯನಾಥ್ ಅವರು ತೆಗೆದು ಕೊಳ್ಳುತ್ತಿದ್ದಾರೆ, ಇದೀಗ ಹಲವಾರು ದಿನಗಳಿಂದ ದೇಶದ ಎಲ್ಲೆಡೆ ನೆಲೆಸಿರುವ ಉತ್ತರ ಪ್ರದೇಶದ ಕಾರ್ಮಿಕರನ್ನು ವಾಪಸ್ಸು ಕರೆಸಿಕೊಳ್ಳುವ ಕಾರ್ಯ ಮಾಡುತ್ತಿರುವ ಯೋಗಿ ಆದಿತ್ಯನಾಥ್ ಅವರು ಬಂದ ಜನರಿಗೆ 14 ದಿನ ಆಶ್ರಯ ಮನೆಯಲ್ಲಿ ಕ್ವಾರಂಟೈನ್ ಮಾಡಿ ಯಾವುದೇ ಕರೋನ ಲಕ್ಷಣಗಳು ಕಾಣಿಸಿಕೊಳ್ಳದೇ ಇದ್ದಲ್ಲಿ ಆಹಾರ ಧಾನ್ಯ ಹಾಗೂ ಇತರ ಅಗತ್ಯ ವಸ್ತುಗಳನ್ನು ಕೊಂಡು ಕೊಳ್ಳಲು ನಗದು ರೂಪದಲ್ಲಿ ಕೈಗೆ ಹಣ ನೀಡಲಾಗುತ್ತಿದೆ.
अन्य राज्यों में फँसे यूपी के कुछ मजदूरों को वापस लाने की पहल पर उप्र सरकार को साधुवाद। हम लगातार इस मुद्दे पर ज़ोर दे रहे हैं और यह उस दिशा में एक सार्थक कदम है।
इसे पूरी तरह से सफल होने के लिए बाकी मजदूरों के लौटने के लिए भी योजना बनानी जरूरी है।
अगर इसी तरह सकारात्मक.. 1/2 https://t.co/k2skJaUbLR
— Priyanka Gandhi Vadra (@priyankagandhi) April 24, 2020
ಈ ಕಾರ್ಯವನ್ನು ಶ್ಲಾಘಿಸಿರುವ ಪ್ರಿಯಾಂಕಾ ಗಾಂಧಿ ರವರು ವಿವಿಧ ರಾಜ್ಯಗಳಲ್ಲಿ ಸಿಲುಕಿರುವ ಉತ್ತರ ಪ್ರದೇಶ ಕಾರ್ಮಿಕರನ್ನು ಮರಳಿ ತರುತ್ತಿರುವ ಪ್ರಯತ್ನಕ್ಕೆ ಉತ್ತರ ಪ್ರದೇಶ ಸರ್ಕಾರಕ್ಕೆ ಧನ್ಯವಾದಗಳು, ನಾವು ಈ ವಿಷಯದ ಬಗ್ಗೆ ಒತ್ತು ನೀಡುತ್ತಿದ್ದೇವೆ ಮತ್ತು ಈ ದಿಕ್ಕಿನಲ್ಲಿ ಇದು ಸಕಾರಾತ್ಮಕ ಹೆಜ್ಜೆಯಾಗಿದೆ. ಇದು ಸಂಪೂರ್ಣವಾಗಿ ಯಶಸ್ವಿಯಾಗಲು ಇತರ ರಾಜ್ಯಗಳಲ್ಲಿ ಇನ್ನೂ ಉಳಿದಿರುವ ಅಂತಹ ಕಾರ್ಮಿಕರನ್ನು ಸಹ ಮರಳಿ ಕರೆತರಲು ಯೋಗಿ ಆದಿತ್ಯನಾಥ ರವರ ಸರ್ಕಾರ ಯೋಜನೆ ರೂಪಿಸಬೇಕಾಗಿದೆ. ನಾವೆಲ್ಲರೂ ಈ ರೀತಿ ಪರಸ್ಪರ ಸಹಕರಿಸಿದರೆ ಕರೋನ ವೈರಸ್ ವಿರುದ್ಧದ ಹೋರಾಟ ಮತ್ತಷ್ಟು ಬಲಗೊಳ್ಳುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.