Prathap Simha: ಸ್ನೇಹಿತರೆ ರಾಜಕಾರಣಿಗಳು ಒಬ್ಬರ ವಿರುದ್ಧ ಮತ್ತೊಬ್ಬರು ಟಾಂಗ್ ಕೊಡುತ್ತ ಮಾತನಾಡುವುದು, ಒಬ್ಬರು ಮತ್ತೊಬ್ಬರಿಗೆ ಸವಾಲೆಸೆಯುವುದು ಸಹಜ. ಹೀಗಿರುವಾಗ ಪ್ರತಾಪ ಸಿಂಹ ಮತ್ತೊಮ್ಮೆ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಶೀಘ್ರ ಮುಂದಾಗಬೇಕು ಎಂಬ ಹೇಳಿಕೆ ನೀಡುವ ಮೂಲಕ ಡಿಕೆ ಶಿವಕುಮಾರ್ ಅವರನ್ನು ಕೆರಳಿಸಿದ್ದಾರೆ.
ಹಾಗಾದ್ರೆ ನಿಜಕ್ಕೂ ಡಿಕೆ ಪ್ರತಾಪ್ ಸಿಂಹ (Prathap Simha) ಎಸೆದ ಸವಾಲನ್ನು ಸ್ವೀಕಾರ ಮಾಡಿ ಮೇಕೆದಾಟು ಅನುಷ್ಠಾನವನ್ನು ಜಾರಿಗೆ ತರುತ್ತಾರಾ? ಅಸಲಿಗೆ ಪ್ರತಾಪ್ ಸಿಂಹ ಈ ಕುರಿತು ಹೇಳಿದ್ದೇನು? ಎಂಬ ಎಲ್ಲ ಮಾಹಿತಿಯನ್ನು ಈ ಪುಟದ ಮುಖಾಂತರ ಸಂಕ್ಷಿಪ್ತವಾಗಿ ತಿಳಿಸ ಹೊರಟಿದ್ದೇವೆ. ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಗೆಲುವಿಗಾಗಿ ಮಹಾನ್ ನಾಯಕನನ್ನು ಕಣಕ್ಕೆ ಇಳಿಸಲು ತಯಾರಿ ನಡೆಸಿದೆಯೇ ಬಿಜೆಪಿ- ಲೋಕಸಭೆ ಚುನಾವಣೆಯಲ್ಲಿ ಮತ್ತೆ ಕ್ಲೀನ್ ಸ್ವೀಪ್ ಮಾಡುತ್ತಾ?? ಬರುತ್ತಿಯುವ ಮಹಾನ್ ಕಿಲಾಡಿ ಯಾರು ಗೊತ್ತೇ??
ಹೌದು ಗೆಳೆಯರೇ “ತಮಿಳುನಾಡು ಪ್ರತಿರೋಧಕ್ಕೆ ದಕ್ಷ ಉತ್ತರ ನೀಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು. ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಸರ್ಕಾರ ಶೀಘ್ರ ಕ್ರಮ ಕೈ ತೆಗೆದುಕೊಳ್ಳಬೇಕು ಎಂದು ಪ್ರತಾಪ್ ಸಿಂಹ ಒತ್ತಾಯ ಮಾಡಿದ್ದಾರೆ. ಮೈಸೂರಿನ ಸುದ್ದಿಗೋಷ್ಠಿ ಒಂದರಲ್ಲಿ ಮಾತನಾಡಿದಂತಹ ಅವರು ಡಿಸಿಎಂ ಆಗಿರುವಂತಹ ಡಿಕೆ ಶಿವಕುಮಾರ್ ತಮ್ಮ ಕ್ಷೇತ್ರದಲ್ಲಿದಿಂದಲೇ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬರಬೇಕಿದೆ. ವಿರೋಧ ಪಕ್ಷದಲ್ಲಿ ಇದ್ದಾಗ ಡಿಕೆ ಶಿವಕುಮಾರ್ ಮೇಕೆದಾಟು ಅನುಷ್ಠಾನಕ್ಕೆ ಧ್ವನಿ ಎತ್ತಿದ್ದರು. (Prathap Simha)
ಈಗ ಅವರದ್ದೇ ಸರ್ಕಾರವಿದ್ದು ಶೀಘ್ರ ಈ ಯೋಜನೆಯನ್ನು ಅನುಷ್ಠಾನಕ್ಕೆ ತರುವುದು ಒಳಿತು. ಮೇಕೆದಾಟು ಯೋಜನೆಗೆ ಪ್ರತಿರೋಧ ತೋರಿದ ತಮಿಳುನಾಡು ರಾಜ್ಯ ಸರ್ಕಾರಕ್ಕೆ ಪ್ರತ್ಯುತ್ತರ ನೀಡಬೇಕು, ರಾಜ್ಯದಲ್ಲಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬೀಳುತ್ತಿಲ್ಲ. ಮಳೆಯನ್ನು ನಂಬಿಕೊಂಡು ರೈತ ಬಿತ್ತನೆ ಕಾರ್ಯ ಮಾಡಿದ್ದರು, ಮಳೆಯ ಅಭಾವದಿಂದ ಬಿತ್ತನೆ ಮಾಡಲಾದ ತಂಬಾಕು ಸೇರಿ ಇತರೆ ಬೆಳೆಗಳು ಒಣಗುತ್ತಿವೆ. ಇದೆಲ್ಲದರ ಕುರಿತು ಸರಕಾರ ಗಮನ ಹರಿಸಬೇಕು. ಇರುವ ಐದಕ್ಕೆ ಷರತ್ತಿನ ಮೇಲೆ ಷರತ್ತು ಹಾಕಿರುವ ಕಾಂಗ್ರೆಸ್- ಆದರೆ ಪ್ರಿಯಾಂಕ್ ಖರ್ಗೆ ಎರಡು ಹೆಜ್ಜೆ ಮುಂದಕ್ಕೆ ಹೋಗಿ, ಮತ್ತಷ್ಟು ಹೊಸ ಗ್ಯಾರಂಟಿ. ಈ ಬಾರಿ ಏನಂತೆ ಗೊತ್ತೆ?
ರಾಜ್ಯದ ಜಲಾಶಯಗಳಲ್ಲಿಯೂ ನೀರಿನ ಮಟ್ಟ ತೀವ್ರ ಕುಸಿತ ಕಂಡಿದ್ದು, ಡ್ಯಾಮ್ ಗಳ ನೀರನ್ನು ಕುಡಿಯುವುದಕ್ಕಾಗಿ ಬಳಸಲು ಮೊದಲು ಆದ್ಯತೆ ನೀಡಿ, ನಂತರ ಕೃಷಿ ಬೆಳೆಗೆ ಆದ್ಯತೆ ನೀಡಿ. ಮುಂದಿನ ವಿಧಾನ ಮಂಡಲ ಅಧಿವೇಶನಕ್ಕೂ ಮುನ್ನ ವಿಧಾನಸಭೆ ವಿಪಕ್ಷ ನಾಯಕನ ಆಯ್ಕೆಯಾಗಲಿದೆ. ಈ ಬಗ್ಗೆ ಅದಾಗಲೇ ನಮ್ಮ ಪಕ್ಷದಲ್ಲಿ ಮಾತುಕತೆ ನಡೆಯುತ್ತಿದ್ದು ವಿರೋಧ ಪಕ್ಷ ನಾಯಕನ ಆಯ್ಕೆ ನಡೆದು ಹೆಸರನ್ನು ಘೋಷಣೆ ಮಾಡುತ್ತೇವೆ” ಎಂದು ಪ್ರತಾಪ್ ಸಿಂಹ (Prathap Simha) ಮಾತನಾಡಿದರು.
ಅಷ್ಟೇ ಅಲ್ಲದೆ ಹಾಸ್ಟೆಲ್ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆ ಮಾಡಿದ ಪ್ರತಾಪ್ ಸಿಂಹ ಮೈಸೂರಿನಲ್ಲಿ ದೀನ ದಯಾಳ್ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣ ಕಾಮಗಾರಿಯ ಪ್ರಗತಿಯನ್ನು ಸಂಸದ ಪ್ರತಾಪ್ ಸಿಂಹ ವೀಕ್ಷಿಸಿ ಹಾಸ್ಟೆಲ್ನಲ್ಲಿರುವ ಸಮಸ್ಯೆಗಳ ಬಗ್ಗೆ ವಿವರವನ್ನು ಪಡೆದುಕೊಂಡರು.