ಯೇಸು ಶಿಲುಬೆ ನಿರ್ಮಾಣಕ್ಕೆ ಮುಂದಾದ ಡಿಕೆಶಿ ಗೆ ಪ್ರಶ್ನೆಗಳ ಬಾಣಗಳನ್ನು ಸುರಿಸಿದ ಪ್ರತಾಪ್ ಸಿಂಹ ! ಕೇಳಿದ್ದೇನು ಗೊತ್ತಾ??

ಇದೀಗ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಡಿ ಕೆ ಶಿವಕುಮಾರ್ ಕಳೆದ ಮೈತ್ರಿ ಸರ್ಕಾರ ಅಧಿಕಾರದಲ್ಲಿ ಇರುವ ವೇಳೆ ಮಂಜೂರು ಮಾಡಿಸಿ ಕೊಂಡಿದ್ದ ಸರ್ಕಾರಿ ಜಮೀನಿನಲ್ಲಿ ಇಡೀ ವಿಶ್ವದಲ್ಲಿಯೇ ಅತಿ ಎತ್ತರದ ಯೇಸು ಶಿಲುಬೆಯನ್ನು ಕಟ್ಟಲು ಮುಂದಾಗಿದ್ದಾರೆ. ಡಿ ಕೆ ಶಿವಕುಮಾರ್ ಅವರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ಕೇಳಿ ಬಂದಿದೆ.

ಇದರ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ಪಕ್ಷದ ಹಲವಾರು ನಾಯಕರು ಕೂಡ ಡಿ ಕೆ ಶಿವಕುಮಾರ್ ಅವರ ನಿರ್ಧಾರದ ವಿರುದ್ಧ ಗುಡುಗಿದ್ದಾರೆ. ಇದೀಗ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಯುವ ಸಂಸದ ಪ್ರತಾಪ್ ಸಿಂಹ ರವರು ಕೂಡ ಇದೇ ಸಾಲಿಗೆ ಸೇರಿಕೊಂಡಿದ್ದಾರೆ. ಹೌದು ಇದೀಗ ಯೇಸು ಶಿಲುಬೆ ನಿರ್ಮಾಣ ಮಾಡಲು ಮುಂದಾಗಿರುವ ಡಿಕೆ ಶಿವಕುಮಾರ್ ಅವರಿಗೆ ಖಾರದ ಪ್ರಶ್ನೆಗಳನ್ನು ಕೇಳಿರುವ ಪ್ರತಾಪ್ ಸಿಂಹ ಅವರು ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಹಾಗೂ ಟ್ವಿಟರ್ನಲ್ಲಿ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಈ ಪ್ರಶ್ನೆಗಳು ಇದೀಗ ವೈರಲ್ ಆಗಿದ್ದು, ಪ್ರಶ್ನೆಗಳು ಈ ಕೆಳಗಿನಂತಿವೆ.

ಡಿ.ಕೆ. ಶಿವಕುಮಾರರೇ,ಯೇಸು ಪ್ರತಿಮೆ ಹಿಂದಿನ ಉದ್ದೇಶವಾದರೂ ಏನು?? ಕನಕಪುರದ ಕ್ಷೇತ್ರದ ಒಕ್ಕಲಿಗರನ್ನು ಕನ್ವರ್ಟ್ ಮಾಡುವ ಸ್ಕೀಮಾ?ಎಂದು ಎರಡನೇ ಪ್ರಶ್ನೆ ಕೇಳಿದ್ದಾರೆ??ಇನ್ನು ಮೂರನೇ ಪ್ರಶ್ನೆಯಾಗಿ ಪ್ರಸಿದ್ಧ ಮಠಗಳ ಹೆಸರನ್ನು ತೆಗೆದುಕೊಂಡಿರುವ ಪ್ರತಾಪ್ ಸಿಂಹ ರವರು, ಸಿದ್ಧಗಂಗಾ ಮಠ ,ಸುತ್ತೂರಿನಂತೆ ಆದಿಚುಂಚನ ಗಿರಿಯನ್ನೂ ಬೆಳೆಸಿದ ಬಾಲಗಂಗಾಧರ ಶ್ರೀಗಳು ನೀವು ಮರೆತುಹೋದರಾ? ಅಥವಾ ಸರ್ವ ಜಾತಿ ಜನಾಂಗದ ದೈವ ಶಿವಕುಮಾರ ಸ್ವಾಮೀಜಿ ಪ್ರತಿಮೆ ನಿರ್ಮಿಸಿದ್ದರೆ ಕಪಾಲಿ ಬೆಟ್ಟಕ್ಕೆ ಕಳಶ ಪ್ರಾಯವಾಗುತ್ತಿರಲಿಲ್ಲವೇ? ಎಂದು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

BJP KarnatakaCongressDk Shiva KumarKapali HillsPratap Simha