ಶಾ ಅಖಾಡಕ್ಕೆ ! ಒಂದೇ ಹೇಳಿಕೆ ಇಂದ ತುಕ್ಡೇ ಗ್ಯಾಂಗ್ ಗಳಲ್ಲಿ ನಡುಕ ಹುಟ್ಟಿಸಿದ ಶಾ!! ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ತಾವು ಸಾಮಾನ್ಯ ಜನರ ಹಕ್ಕುಗಳಿಗಾಗಿ, ದೇಶಕ್ಕಾಗಿ ಹೋರಾಟ ಮಾಡುತ್ತೇವೆ ಎಂದು ಹೋರಾಟದ ಮುಖವಾಡ ಧರಿಸಿ ದೇಶವನ್ನು ವಿಭಜನೆ ಮಾಡುತ್ತೇವೆ ಎಂದು ಕೇಂದ್ರ ಸರ್ಕಾರದ ಮೇಲೆ ಇರುವ ಕೋಪವನ್ನು ಅದರ ಮೇಲೆ ತೋರಿಸದೆ ದೇಶದ ವಿರುದ್ಧ ಧಿಕ್ಕಾರ ಕೂಗುವ ತುಕ್ಡೇ ಗ್ಯಾಂಗ್ ಗಳಿಗೆ ಸರಿಯಾದ ಬುದ್ಧಿ ಕಲಿಸಲು ಮುಂದಾಗಿರುವಂತೆ ಕಾಣುತ್ತಿದೆ ಅಮಿತ್ ಶಾ !

ಹೌದು ಸ್ನೇಹಿತರೇ, ಇಷ್ಟು ದಿವಸ ಕಾಶ್ಮೀರದ ವಿಚಾರ ಹಾಗೂ ದೇಶದ ಕೆಲವೊಂದು ಗಂಭೀರವಾದ ಆಂತರಿಕ ವಿಷಯಗಳ ಬಗ್ಗೆ ಗಮನ ಹರಿಸಿದ್ದ ಅಮಿತ್ ಶಾ ರವರು ಇದೀಗ ತಮ್ಮ ಗಮನವನ್ನು ತುಕ್ಡೇ ಗ್ಯಾಂಗ್ ಗಳ ಮೇಲೆ ಹರಿಸಲಿದ್ದಾರೆ ಎಂದು ಅವರೇ ಹೇಳಿದ್ದಾರೆ. ಆ ಒಂದು ಹೇಳಿಕೆ ತುಕ್ದೇ ಗ್ಯಾಂಗ್ ಗಳಲ್ಲಿ ನಡುಕ ಹುಟ್ಟಿಸಿರುವುದು ಸುಳ್ಳಲ್ಲ. ಅಷ್ಟೇ ಅಲ್ಲ, ಈ ಹೇಳಿಕೆಗೆ ಬಾರಿ ಜನ ಬೆಂಬಲ ಕೂಡ ಕೇಳಿಬಂದಿದೆ. ಆದರೆ ಇದ್ದಕ್ಕಿದ್ದ ಹಾಗೇ ಈ ನಿರ್ಧಾರ ಯಾಕೆ ಗೊತ್ತಾ ಹಾಗೂ ಹೇಳಿದ್ದೇನು ಗೊತ್ತಾ? ಇಲ್ಲಿದೇ ನೋಡಿ ಉತ್ತರ. ನಿಮಗೆಲ್ಲರಿಗೂ ತಿಳಿದಿರುವ ಹಾಗೇ ದೆಹಲಿಯಲ್ಲಿ CAA ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. ಆದರೆ ಈ ಶಾಂತ ರೀತಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಗಳನ್ನು ಅಶಾಂತಿ ಮಾರ್ಗದಲ್ಲಿ ನಡೆಯುವಂತೆ ಮಾಡಿದ್ದು ತುಕ್ಡೇ ಗ್ಯಾಂಗ್ ಗಳು ಎಂಬುದು ಅಮಿತ್ ಶಾ ರವರ ಅರೋಪ.

ಈ ಎಲ್ಲಾ ಪ್ರತಿಭಟನೆಗಳನ್ನು ಹಾದಿ ತಪ್ಪಿಸಿದ್ದು ವಿಪಕ್ಷಗಳು ಅದರಲ್ಲಿಯೂ ಕಾಂಗ್ರೆಸ್ ಹಾಗೂ ದೇಶದ ತುಕ್ಡೇ ಗ್ಯಾಂಗ್ ಗಳು. ಇನ್ನು ಮುಂದೆ ಸುಮ್ಮನೆ ಕೂರಲು ಸಾಧ್ಯವಿಲ್ಲ, ದೇಶದ ಎಲ್ಲಾ ತುಕ್ಡೇ ಗ್ಯಾಂಗ್ ಗಳ ಸಮಯ ಬಂದಿದೆ, ಇದು ದೇಶದ ಎಲ್ಲಾ ತುಕ್ದೇ ಗ್ಯಾಂಗ್ ಗಳನ್ನೂ ಕಠಿಣವಾಗಿ ಶಿಕ್ಷಿಸಲು ಸಕಾಲ ಎಂದು ಜರಿದಿದ್ದಾರೆ. ಈ ಮೂಲಕ ತುಕ್ಡೇ ಗ್ಯಾಂಗ್ ಗಳಿಗೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ್ದಾರೆ. ಮಾತನ್ನು ಮುಂದುವರೆಸುತ್ತಾ ಅಮಿತ್ ಶಾ ರವರು, ಕಾಂಗ್ರೆಸ್ ಪಕ್ಷ ಈ ಮಸೂದೆಯ ಕುರಿತು ಸಂಸತ್ತಿನಲ್ಲಿ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ಆಕ್ಷೇಪದ ವಿಷಯಗಳ ಕುರಿತು ಯಾಕೇ ಪ್ರಶ್ನೆ ಮಾಡಲಿಲ್ಲ. ಏನೇ ಆಗಲಿ ತುಕ್ಡೇ ಗ್ಯಾಂಗ್ ಗಳನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

amith shahbjpCAAKannadaKannada NewsKarunaada VaaniNarendra modi