ಉದ್ದವ್ ಗೆ ಭಾರಿ ಮುಜುಗರ ! ಉದ್ದವ್ ಮಾತನ್ನು ನೆನಪು ಮಾಡಿ ಬಹಿರಂಗ ಸವಾಲು ಎಸೆದ ಸಾರ್ವರ್ಕರ್ ಮೊಮ್ಮಗ ! ಉದ್ಧವ್ ರವರೇ ತಾಕತ್ತಿದ್ದರೆ ಈ ಕೆಲಸ ಮಾಡಿ ಎಂದ ನೆಟ್ಟಿಗರು !

ಇದೀಗ ರಾಹುಲ್ ಗಾಂಧಿ ರವರು ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡು ತಾವು ಕ್ಷಮೆ ಕೇಳುವುದಿಲ್ಲ ಎಂಬ ಉದಾಹರಣೆಗೆ ವೀರ ಸಾವರ್ಕರ್ ಅವರು ಬ್ರಿಟಿಷರ ಕ್ಷಮೆ ಕೇಳಿದ್ದಾರೆ ಎನ್ನಲಾಗುತ್ತಿರುವ ಆರೋಪವನ್ನು ಕೆದಕಿ ನಾನು ಕ್ಷಮೆ ಕೇಳಲು ರಾಹುಲ್ ಸಾರ್ವರ್ಕರ್ ಅಲ್ಲ ನಾನು ರಾಹುಲ್ ಗಾಂಧಿ ಎಂಬ ಹೇಳಿಕೆ ಬಾರಿ ಚರ್ಚೆಗೆ ಗ್ರಾಸವಾಗಿದೆ.

ಮೊದಲಿನಿಂದಲೂ ವೀರ ಸಾರ್ವರ್ಕರ್ ರವರ ಪರವಾಗಿ ಧ್ವನಿ ಎತ್ತುಕೊಂಡು ಬಂದಿರುವ ಕಾಂಗ್ರೆಸ್ ಪಕ್ಷದ ಮೈತ್ರಿ ಪಕ್ಷವಾಗಿರುವ ಶಿವಸೇನಾ ಪಕ್ಷಕ್ಕೆ ರಾಹುಲ್ ರವರ ಈ ಹೇಳಿಕೆಯಿಂದ ಹೊಸ ಸವಾಲುಗಳು ಎದುರಾಗುತ್ತಿವೆ. ಕಳೆದ ಕೆಲವು ಗಂಟೆಗಳ ಹಿಂದಷ್ಟೇ ರಾಹುಲ್ ಹೇಳಿಕೆ ಶಿವಸೇನಾ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರ ನಡುವೆ ಭಿನ್ನಮತೀಯ ಹೇಳಿಕೆಗಳು ಕೇಳಿ ಬರುವಂತೆ ಮಾಡಿತ್ತು. ಇದೀಗ ಇದರ ಕುರಿತು ವೀರ ಸಾರ್ವರ್ಕರ್ ಅವರ ಮೊಮ್ಮಗ ರಂಜಿತ್ ಸಾರ್ವರ್ಕರ್ ರವರು ಧ್ವನಿ ಎತ್ತಿದ್ದು, ಕಳೆದ ಕೆಲವು ದಿನಗಳ ಹಿಂದೆ ಉದ್ಧವ್ ಠಾಕ್ರೆ ರವರ ಮಾತನ್ನು ನೆನಪು ಮಾಡಿ ತಮ್ಮ ಸಿದ್ಧಾಂತ ಬದಲಾಯಿಸಿ ಕೊಳ್ಳುವುದಿಲ್ಲ ಎಂದುಕೊಂಡಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಶಿವಸೇನಾ ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ ರವರಿಗೆ ಭಾರಿ ಮುಜುಗರ ಉಂಟಾಗಿದೆ. ಅಷ್ಟಕ್ಕೂ ನಡೆದದ್ದೇನು ಗೊತ್ತಾ??

ವೀರ ಸಾವರ್ಕರ್ ಅವರ ಮೊಮ್ಮಗ ರಂಜಿತ್ ಸಾರ್ವರ್ಕರ್ ಅವರು ಮಾಧ್ಯಮಗಳೊಂದಿಗೆ ಮಾತನಾಡುವಾಗ ಕಳೆದ ಕೆಲವು ದಿನಗಳ ಹಿಂದೆ ವೀರ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವ ವಿಷಯದಲ್ಲಿ, ಹಲವಾರು ಜನ ವೀರ ಸಾವರ್ಕರ್ ಅವರ ವಿರುದ್ಧ ಧ್ವನಿಯೆತ್ತಿದ ಸಂದರ್ಭದಲ್ಲಿ ಉದ್ಧವ್ ಠಾಕ್ರೆ ಅವರು ಯಾರೇ ಆಗಲಿ ವೀರ ಸಾವರ್ಕರ್ ಅವರಿಗೆ ಅವಮಾನ ಮಾಡುವುದಾಗಲಿ ಅಥವಾ ಅವರ ವಿರುದ್ಧ ಮಾತನಾಡುವುದಾಗಲಿ ಮಾಡಿದರೆ ಬಹಿರಂಗವಾಗಿ ಸಾರ್ವಜನಿಕರ ಮುಂದೆ ಥಳಿಸುತ್ತೇವೆ ಎಂಬ ಹೇಳಿಕೆಯನ್ನು ನೀಡಿದ್ದರು. ಈ ಮಾತನ್ನು ಇದೀಗ ನೆನಪು ಮಾಡಿಕೊಂಡು ರಾಹುಲ್ ಗಾಂಧಿ ಅವರನ್ನು ಬಹಿರಂಗವಾಗಿ ಸಾರ್ವಜನಿಕರ ಮುಂದೆ ಥಳಿಸಿ ಎಂದು ರಂಜಿತ್ ಸಾರ್ವರ್ಕರ್ ಅವರು ಉದ್ಧವ್ ಠಾಕ್ರೆ ರವರಿಗೆ ಬಹಿರಂಗ ಸವಾಲು ಎಸೆದಿದ್ದಾರೆ. ಇದರಿಂದ ಉದ್ಧವ್ ಠಾಕ್ರೆ ರವರಿಗೆ ಭಾರಿ ಮುಜುಗರ ಉಂಟಾಗಿದ್ದು ಯಾವುದೇ ಪ್ರತಿಕ್ರಿಯೆ ಇಲ್ಲಿಯವರೆಗೂ ನೀಡಿಲ್ಲ. ಇದನ್ನು ಕಂಡ ನೆಟ್ಟಿಗರು ಉದ್ಧವ್ ಠಾಕ್ರೆ ರವರೇ ತಾಕತ್ತಿದ್ದರೆ ಈ ಕೆಲಸ ಮಾಡಿ ಎಂದು ಕಿಚಾಯಿಸಿದ್ದಾರೆ.