ಚಿದಂಬರಂಗೆ ಮರ್ಮಘಾತ ! ಹೀನಾಯ ಸ್ಥಿತಿಗೆ ಬಂದು ತಲುಪಿದ ಚಿದಂಬರಂ ಪರಿಸ್ಥಿತಿ ! ಮಾಡಿದ್ದ ನೋಡಿ ದೇಶವೇ ಶಾಕ್ !!

ಮಾಜಿ ಕೇಂದ್ರ ಸಚಿವರಾಗಿರುವ ಪಿ ಚಿದಂಬರಂ ರವರ ಬಗ್ಗೆ ನಿಮಗೆ ಎಲ್ಲರಿಗೂ ತಿಳಿದೇ ಇದೆ. ಹಲವಾರು ಹಗರಣಗಳ ಸುಳಿಯಲ್ಲಿ ಸಿಲುಕಿ ಹಾಕಿಕೊಂಡಿರುವ ಮಾಜಿ ಕೇಂದ್ರ ಸಚಿವ ಚಿದಂಬರಂ ರವರು, ಇಡೀ ದೇಶದಲ್ಲಿಯೇ ಯಾರು ಹೊಂದಿರದ ಕುಖ್ಯಾತಿ ದಾಖಲೆಯೊಂದನ್ನು ಹೊಂದಿದ್ದಾರೆ. ಅದುವೇ ಅತಿ ಹೆಚ್ಚು ಬಾರಿ ಜಾಮೀನು ಪಡೆದ ನಾಯಕ. ಇದೀಗ ಇದೇ ರೀತಿಯ ಹಗರಣ ಚಿದಂಬರಂ ಅವರ ಕೊರಳಿಗೆ ಸುತ್ತಿಕೊಂಡಿದ್ದು, ಇನ್ನೇನು ಕೆಲವೇ ಕೆಲವು ಗಂಟೆಗಳಲ್ಲಿ ಚಿದಂಬರಂ ಅವರು ಬಂಧನ ವಾಗುವುದು ಖಚಿತವಾಗಿದೆ. ಇದೇ ವಿಚಾರದಲ್ಲಿ ಚಿದಂಬರಂ ರವರು ಯಾರು ಊಹಿಸದ ರೀತಿಯಲ್ಲಿ ನಡೆದುಕೊಂಡಿದ್ದು ಕೆಲವರು ಚಿದಂಬರಂ ರವರಿಗೆ ಈ ರೀತಿಯ ಪರಿಸ್ಥಿತಿ ಬರಬಾರದಿತ್ತು ಎಂದರೆ ಇನ್ನು ಕೆಲವರು ಇದು ಕಾಂಗ್ರೆಸ್ ಪಕ್ಷದವರ ನೈಜ ಮುಖ ಎಂದು ನಕ್ಕು ಸುಮ್ಮನಾಗಿದ್ದಾರೆ. ಅಷ್ಟಕ್ಕೂ ನಡೆದಿದ್ದೇನು ಗೊತ್ತಾ?

ಐಎನ್ಎಕ್ಸ್ ಮೀಡಿಯಾ ಹೌಸ್ ಹಗರಣದಲ್ಲಿ ಚಿದಂಬರಂ ರವರು 305 ಕೋಟಿ ಹಗರಣದ ತನಿಖೆ ಎದುರಿಸುತ್ತಿದ್ದಾರೆ. ಬಂಧನ ಭೀತಿಯಲ್ಲಿದ್ದ ಚಿದಂಬರಂ ಅವರು ಇನ್ನೇನು ತಾನು ಕೆಲವೇ ಕೆಲವು ಗಂಟೆಗಳಲ್ಲಿ ಬಂಧನವಾಗುತ್ತೇನೆ ಎಂದು ತಿಳಿದ ತಕ್ಷಣ ದಿಲ್ಲಿ ಹೈಕೋರ್ಟ್ ಕದ ತಟ್ಟಿ ನಿರೀಕ್ಷಣಾ ಜಾಮೀನು ಕೋರಿ ಮನವಿ ಸಲ್ಲಿಸಿದ್ದರು. ಆದರೆ ದಿಲ್ಲಿ ಹೈಕೋರ್ಟ್ ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ ಕೇಂದ್ರ ಮಾಜಿ ಸಚಿವರಾಗಿರುವ ಪಿ ಚಿದಂಬರಂ ರವರು ಪರಾರಿಯಾಗಿದ್ದಾರೆ. ಹೌದು ಜಾಮೀನು ತಿರಸ್ಕೃತಗೊಂಡ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹಾಗೂ ಸಿಬಿಐ ಅಧಿಕಾರಿಗಳು ಚಿದಂಬರಂ ಅವರನ್ನು ಬಂಧಿಸಲು ಮನೆಗೆ ಭೇಟಿ ನೀಡಿದ್ದರು. ಆ ಕ್ಷಣದಲ್ಲಿ ಪರಾರಿಯಾಗಿದ್ದ ಚಿದಂಬರಂ ಅವರನ್ನು ಕಂಡು ಒಂದು ಕ್ಷಣ ಅಧಿಕಾರಿಗಳು ಸಹ ದಂಗಾಗಿ ಮುಂದಿನ ಕ್ರಮದ ಕುರಿತು ಚಿಂತನೆ ನಡೆಸುತ್ತೇವೆ ಎಂದಿದ್ದಾರೆ.