ಮಂಡ್ಯ ಚುನಾವಣೆ- ಹೊನ್ನಾದೇವಿ ಅಮ್ಮನವರ ಹೂ ಭವಿಷ್ಯ ಯಾರ ಪರವಾಗಿ ಗೊತ್ತಾ??

ರಾಜ್ಯದಲ್ಲಿ ಭಾರೀ ಕುತೂಹಲವನ್ನು ಕೆರಳಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಫಲಿತಾಂಶ ಹೊರಬೀಳುವ ಮುನ್ನವೇ ಈಗಾಗಲೇ ಸೋಲು ಗೆಲುವಿನ ಲೆಕ್ಕಾಚಾರ ಗಳು ಆರಂಭವಾಗಿವೆ. ಗುಪ್ತಚರ ಇಲಾಖೆಯ ಮಾಹಿತಿಯ ಪ್ರಕಾರ ಸುಮಲತಾ ರವರು ಗೆಲುವು ದಾಖಲಿಸುತ್ತಾರೆ ಎನ್ನಲಾಗುತ್ತಿದ್ದು, ಆದರೆ ಮತ ಪ್ರಭು ಯಾರ ಪರವಾಗಿ ಇದ್ದಾನೆ ಎಂಬುದು ಖಚಿತವಾಗಿ ಯಾವ ಇಲಾಖೆಯ ಕೈಯಲ್ಲೂ ಹೇಳಲು ಸಾಧ್ಯವಾಗುತ್ತಿಲ್ಲ. ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ರವರ ನಡುವೆ ನೇರ ಸ್ಪರ್ಧೆ ಏರ್ಪಟ್ಟಿರುವ ಕಾರಣ ದಿನೇದಿನೇ ಚುನಾವಣಾ ಫಲಿತಾಂಶದ ರಂಗು ಏರುತ್ತಿದೆ. ಹೀಗಿರುವಾಗ ಮಂಡ್ಯ ಜಿಲ್ಲೆಯ ಹೊನ್ನಾದೇವಿ ತಾಯಿಯ ಹೂವಿನ ಭವಿಷ್ಯದ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ.