ನರೇಂದ್ರ ಮೋದಿ ಅವರು ದೇಶದ ಭವಿಷ್ಯಕ್ಕಾಗಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬುದು ಕೋಟ್ಯಂತರ ಜನರ ಕೂಗು. ವಿರೋಧ ಪಕ್ಷಗಳು ಯಾವುದೇ ಸಿದ್ಧಾಂತ ವಿಲ್ಲದೆ ಕೇವಲ ನರೇಂದ್ರ ಮೋದಿ ರವರನ್ನು ಕಟ್ಟಿ ಹಾಕುವುದು ನಮ್ಮ ಉದ್ದೇಶ ಎಂದು ಚುನಾವಣಾ ಪ್ರಚಾರ ಗಳಲ್ಲಿಯೂ ಸಹ ನೇರವಾಗಿ ಹೇಳಿಕೆಗಳನ್ನು ನೀಡಿ, ತಮ್ಮ ಪಕ್ಷದ ಸಿದ್ಧಾಂತಗಳ ಮೇಲೆ ಒತ್ತನ್ನು ನೀಡದೆ ನರೇಂದ್ರ ಮೋದಿ ಅವರನ್ನು ಸೋಲಿಸಿ ತೀರುತ್ತೇವೆ ಎಂದು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಅಕಾಡಕ್ಕೆ ಇಳಿದಿದ್ದಾರೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಲೋಕಸಭಾ ಚುನಾವಣೆಯು ಸಹ ಮುಗಿದಿದ್ದು, ಇನ್ನು ಕೇವಲ ಕೆಲವೇ ಕೆಲವು ದಿನಗಳಲ್ಲಿ ಇಡೀ ವಿಶ್ವವೇ ಕಾಯುತ್ತಿರುವ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದೆ.
ಈಗಾಗಲೇ ಭಾರೀ ಜನ ಬೆಂಬಲ ವನ್ನು ಹೊಂದಿರುವ ನರೇಂದ್ರ ಮೋದಿ ರವರಿಗೆ ಇದೀಗ ಬಾಳೆಹೊನ್ನೂರು ಶ್ರೀ ರಂಭಾಪುರಿ ಮಠದ ಶ್ರೀ ವೀರಸೋಮೇಶ್ವರ ಜಗದ್ಗುರು ಸ್ವಾಮೀಜಿಗಳು ಬೆಂಬಲ ಘೋಷಿಸಿದ್ದಾರೆ. ಹುಬ್ಬಳ್ಳಿ ಜಿಲ್ಲೆಯ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿಗಳು ತಾವು ಹೋದ ಕಡೆಯಲ್ಲ ಜನರು ನರೇಂದ್ರ ಮೋದಿ ರವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ಒಬ್ಬ ಪ್ರಧಾನಿಗೆ ಇಷ್ಟು ಜನ ಬೆಂಬಲ ನೀಡುತ್ತಿರುವುದನ್ನು ಇದೇ ಮೊದಲ ಬಾರಿಗೆ ಕಾಣುತ್ತಿದ್ದೇನೆ, ನನ್ನ ಆಶಯ ಕೂಡ ಅದೇ ಆಗಿದೆ, ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಹೇಳಿಕೆ ನೀಡಿದ್ದಾರೆ. ಧರ್ಮವನ್ನು ಒಡೆಯಲು ಹೋದವರು ಈಗಾಗಲೇ ಪ್ರತಿಫಲವನ್ನು ಅನುಭವಿಸುತ್ತಿದ್ದಾರೆ, ರಾಜಕೀಯದಲ್ಲಿ ಧರ್ಮ ಪೀಠಗಳನ್ನು ಎಳೆದು ತರಬಾರದು, ಧರ್ಮ ಒಡೆಯಲು ಹೋದ ಕೆಲವರು ತಪ್ಪನ್ನು ಒಪ್ಪಿಕೊಂಡಿದ್ದಾರೆ ಇನ್ನು ಕೆಲವರು ಅದೇ ತಪ್ಪನ್ನು ಮುಂದುವರಿಸಿದ್ದಾರೆ ಎಂದು ತಿಳಿಸಿದ್ದಾರೆ.