ಶ್ರೀ ರಾಮುಲು ಕಾರ್ಯ ವೈಖರಿ ನೋಡಿ ಖುಷಿ ಪಟ್ಟು ಯುವಕ ಬರೆದ ಪತ್ರ

ಯುವಕನೊಬ್ಬ ಹೀಗೆಂದು ತನ್ನ ವಾಲ್ ಮೇಲೆ ಬರೆದು ಕೊಂಡಿದ್ದ ಅದನ್ನು ನಾವು ಅವರ ಬಳಿ ಪರ್ಮಿಷನ್ ತೆಗೆದುಕೊಂಡು ಇಲ್ಲಿ ತಿಳಿಸಿದ್ದೇವೆ.

 

ಶ್ರೀ ರಾಮುಲುರವರಿಗೆ ನನ್ನ ಧನ್ಯವಾದಗಳು, ಮೊಳಕಾಲ್ಮೂರು ಬಂದಿದಕ್ಕಾಗಿ ನನ್ನ ವಂದನೆಗಳು. ನಿಮ್ಮಂತಹ ಜನನಾಯಕ ಪ್ರತಿಯೊಬ್ಬರಿಗೂ ಸಿಗಬೇಕು, ಕಳೆದ ವಾರವಷ್ಟೇ ನೀವು ಸೋಲನ್ನು ಲೆಕ್ಕಿಸದೆ ಕ್ಷೇತ್ರ ವನ್ನು ಮೀರಿ ಬಾದಾಮಿಗೆ ಹೋಗಿ ರೈತನ ಕುಟುಂಬದ ಜವಾಬ್ದಾರಿ ವಹಿಸಿಕೊಂಡು, ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ಭರವಸೆ ನೀಡಿ ಬಂದಿದ್ದೀರಿ.

ಅದಕ್ಕಾಗಿ ಪ್ರತ್ಯೇಕವಾಗಿ ನಿಮಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಈಗ ಮತ್ತೊಮ್ಮೆ ಮೊಳಕಾಲ್ಮೂರು ಕ್ಷೇತ್ರದಲ್ಲಿ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ನಮ್ಮ ಕಷ್ಟಗಳನ್ನು ಆಲಿಸಿದ್ದೀರಿ. ಅಷ್ಟೇ ಅಲ್ಲದೆ ನೀವು ನಾಯಕರು ಸಾಮಾನ್ಯ ರೈತನಂತೆ ನೇಗಿಲು ಹಿಡಿದದ್ದು ನೋಡಿ ನನಗೆ ತುಂಬಾ ಸಂತೋಷವಾಯಿತು.

ನೀವು ಚುನಾವಣೆಯ ಮುಂಚೆ ಮತ ಕೇಳಲು ಬಂದಿದ್ದೀರಿ, ಆದರೆ ಮುಂದಿನ ಬಾರಿ ಬರದೇ ಇದ್ದರೂ ನಮ್ಮ ಸಮಸ್ಯೆಗಳನ್ನು ಪರಿಹಾರ ಮಾಡುತ್ತೀರ ಎನ್ನುವ ನಂಬಿಕೆ ಮೇಲೆ ಹೇಳುತ್ತೇನೆ ನನ್ನ ಮತ ನಿಮಗೆ ಎಂದು. ನಿಮ್ಮ ಜನ ಪರ ಯೋಜನೆಗಳು ಈಗೆ ಮುಂದುವರಿಯಲಿ ಹಾಗು ಯಾವುದೇ ತೊಡಕು ಬಾರದಿರಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ.

 

bjpBJP KarnatakaSri ramulu
Comments (0)
Add Comment