ಮೋದಿ ಸುನಾಮಿ vs ಮಹಾಮೈತ್ರಿ !!

ರಾಷ್ಟ್ರರಾಜಕೀಯದ ಮಹಾನ್ ದಂಡನಾಯಕ ,ದೇಶದ್ಯಾಂತ ಕಮಲ ಅರಳಿಸಿದ ಕೇಸರಿ ಕಲಿ ಭಾರತವನ್ನು ಅಭಿವೃದ್ಧಿಯ ಪಥದತ್ತ ಮುನ್ನೆಡಿಸುತ್ತಿರುವ ರಾಜಕೀಯ ನಿಪುಣ ಮೋದಿ ಯವರ ಮೇಲೆ ಇಂದು ಎಲ್ಲ ವಿರೋಧಿಗಳ ಕಣ್ಣು ಬಿದ್ದಿದೆ.ಈಗಾಗಲೇ 20 ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್‌ ಬೆರಳೆಣಿಕೆಯ ರಾಜ್ಯಗಳಲ್ಲಿ ಮಾತ್ರ ಅಧಿಕಾರದಲ್ಲಿದೆ. ಈ ವಾಸ್ತವ ಗೊತ್ತಿದ್ದರೂ ರಾಹುಲ್‌ ಗಾಂಧಿ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ.

ಹೇಗಾದರೂ ಮುಂಬರುವ ಲೋಕಸಭಾ ಚುನಾವಣೆ ಯಲ್ಲಿ ಮೋದಿ ಸುನಾಮಿಯನ್ನು ತಡೆಯುವ ಹರಸಾಹಸ . ಮೋದಿ ಪ್ರಧಾನಿ ಯಾದಾಗ ಕೆಲವೇ ರಾಜ್ಯಗಳಲ್ಲಿದ್ದ ಕೇಸರಿ ಸಾಮ್ರಾಜ್ಯ ಇಂದು ದೇಶದಾದ್ಯಂತ ವ್ಯಾಪಿಸಿದೆ. ಮೋದಿ ಸುನಾಮಿ ಗೆ ಸಿಕ್ಕಿ ವಿರೋಧಿಗಳು ನಲುಗಿಹೋಗಿದ್ದಾರೆ , ಅದರಲ್ಲೂ ಕಾಂಗ್ರೆಸ್ ಹೀನಾಯ ಸ್ಥಿತಿಯನ್ನು ತಲುಪಿಬಿಟ್ಟಿದೆ.

ಯಾವ ಮಟ್ಟಿಗೆ ಎಂದರೆ ರಾಷ್ಟ್ರೀಯ ಪಕ್ಷವಾಗಿ ದೀರ್ಘಕಾಲದ ಆಳ್ವಿಕೆ ನಡೆಸಿ ಇಂದು ಪ್ರಾದೇಶಿಕ ಪಕ್ಷಗಳು ಮುಂದೆ ಕೈಕಟ್ಟಿ ನಿಲ್ಲುವ ಸ್ಥಿತಿ ಗೆ ತಲುಪಿಬಿಟ್ಟಿದೆ . ಮೋದಿಯವರ ಕಾಂಗ್ರೆಸ್ ಮುಕ್ತ ಭಾರತದ ಕನಸು ನನಸಾದರು ಅಚ್ಚರಿಯಿಲ್ಲ .

ಸಾಲು ಸಾಲು ಸೋಲನ್ನು ಕಂಡಿರುವ ಕಾಂಗ್ರೆಸ್ ಈಗ ಮಹಾಮೈತ್ರಿಯ ಮಂತ್ರ ಜಪಿಸುತಿದೆ . ಕಾಂಗ್ರೆಸ್ ನಿಂದ ಬಿಜೆಪಿ ಯನ್ನು ಎದುರಿಸುವುದು ಸದ್ಯಕ್ಕೆ ಅಸಾಧ್ಯ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ ಅದಕ್ಕೆ ಮಹಾಮೈತ್ರಿಯ ಮೂಲಕ ಮೋದಿ ಯನ್ನು ಹಣಿಯಲು ಮುಂದಾಗಿದೆ .

ಕಾಂಗ್ರೆಸ್ ನೊಂದಿಗೆ ಎಸ್ಪಿ,ಬಿಸ್ ಪಿ ,ಎನ್ ಸಿಪಿ,ಟಿಸಿಎಮ್ ,ಆರ್ ಜೇಡಿ ,ಟಿಡಿಪಿ ,ಟಿ ಆರ್ ಎಸ್ ,ಎಎಪಿ ಸೇರಿದಂತೆ ಇನ್ನು ಅನೇಕ ಪ್ರಾದೇಶಿಕ ಪಕ್ಷಗಳನೊಳಗೊಂಡ ಬೃಹತ್ ಮೈತ್ರಿಕೂಟ ಕ್ಕೆ ಕಾಂಗ್ರೆಸ್ ಮುನ್ನುಡಿ ಬರೆದಿದೆ . ಮಾತಿಗೆ ತೃತೀಯ ರಂಗ ಎಂದು ಹೇಳಿಕೊಂಡರು ಪರೋಕ್ಷವಾಗಿ ಕಾಂಗ್ರೆಸ್ ನ ಬೆಂಬಲಕ್ಕೆ ನಿಂತಿವೆ .

ಅದೇನೇ ಇರಲಿ ಮೋದಿಯವರು ಭಾರತೀಯರ ಮನ ಮನೆಗಳಲ್ಲಿ ತುಂಬಿಕೊಂಡಿದ್ದಾರೆ. . ಮೋದಿ ಸುನಾಮಿ ಇಡೀ ದೇಶವನ್ನು ಆವರಿಸಿದೆ,ದೇಶಪ್ರೇಮಿಗಳು ಮೋದಿಯವರ ಬೆನ್ನೆಲುಬಾಗಿ ನಿಂತಿದ್ದಾರೆ ಇಂತಹ ಎಷ್ಟೇ ಮೈತ್ರಿಗಳು ಸೃಷ್ಟಿಯಾದ್ರು ಗೆಲುವು ಮಾತ್ರ ಧರ್ಮದ ಪರವಾಗಿಯೇ ಇರುತ್ತದೆ .

ಒಬ್ಬ ಮೋದಿ ಅಭಿಮಾನಿಯಾಗಿ ಹೇಳುತ್ತಿದ್ದೇನೆ ಇಡೀ ಜಗತ್ತೇ ಒಂದಾದರು ೧೧೦ ಕೋಟಿ ಭಾರತೀಯರು ಮೋದಿರವರ ಜೊತೆಗೆ ಇರುತ್ತಾರೆ. ಈ ಹೇಳಿಕೆಗೆ ನಿಮ್ಮ ಬೆಂಬಲವಿದ್ದರೆ ಶೇರ್ ಮಾಡಿ.

ಲೇಖಕ- ನಾಗೇಶ್ ಯಾದವ್

bjpCongressmodiPolitics
Comments (0)
Add Comment