ಮೋದಿ ಸರ್ಕಾರದ ಈ ಕಾಯ್ದೆಯಿಂದ ಬ್ಯಾಂಕ್ ಗಳಿಗೆ ದಾಖಲೆಯ ಸಾಲ ಮರುಪಾವತಿ..!! ಎಷ್ಟು ಲಕ್ಷ ಕೋಟಿ ಗೊತ್ತಾ.!??ಯಾವುದು ಆ ಕಾಯ್ದೆ.?

ಪ್ರಪಂಚದ ನಾಯಕ ಭಾರತದ ಹೆಮ್ಮೆಯ ಪುತ್ರ ನಮ್ಮೆಲ್ಲರ ನೆಚ್ಚಿನ ಪ್ರಧಾನ ಮಂತ್ರಿ ಎಲ್ಲಕ್ಕಿಂತ ಹೆಚ್ಚಾಗಿ ಹಿಂದೂ ಹೃದಯ ಸಾಮ್ರಾಟ್,ಭಾರತ ಭಾಗ್ಯವಿಧಾತ ಶ್ರೀ ನರೇಂದ್ರ ಮೋದಿ.ಭಾರತದ ಸಮಸ್ಯೆಗಳನ್ನು ಬಗೆಹರಿಸಲು ಹಗಲಿರುಳು ದುಡಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿಜಿ ಸರ್ಕಾರಕ್ಕೆ ಇಗ ಮತೊಂದು ಗರಿ.

ಮೋದಿ ಸರ್ಕಾರದ ಈ ಕಾಯ್ದೆಯಿಂದ ಬ್ಯಾಂಕ್ ಗಳಿಗೆ ದಾಖಲೆಯ ಸಾಲ ಮರುಪಾವತಿ..!!

ಹೌದು!! ಮೋದಿ ಸರ್ಕಾರವು ಜಾರಿಗೆ ತಂದ ಕಠಿಣವಾದ Insolvency and Bankrupt Code( ದಿವಾಳಿ ಘೋಷಣಾ ಕಾನೂನು) ನಿಂದಾಗಿ ಬ್ಯಾಂಕ್ ಗಳಿಂದ ಸಾಲ ಪಡೆದು ಮರು ಪಾವತಿಸಲ್ಪಡದ ಕೆಟ್ಟ ಸಾಲ( Non Performing Asset) 9 ಲಕ್ಷ ಕೋಟಿಗಳಲ್ಲಿ ಈಗಾಗಲೇ 4 ಲಕ್ಷ ಕೋಟಿ ರುಪಾಯಿಗಳು ಮರುಪಾವತಿಸಲ್ಪಟ್ಟಿವೆ.

ಈ ಕಾಯ್ದೆ ಜಾರಿಯಾಗುವ ಮೊದಲು ಉದ್ಯಮಿಗಳು ಬ್ಯಾಂಕ್ ಗಳಿಂದ ದೊಡ್ಡ ಮೊತ್ತದ ಸಾಲವನ್ನು ಪಡೆದು ನಂತರ ಕಂಪನಿಯನ್ನು ದಿವಾಳಿ ಎಂದು ಘೋಷಿಸಿ ಬ್ಯಾಂಕ್ ಗಳಿಗೆ ಕೋಟಿಗಟ್ಟಲೆ ಪಂಗನಾಮ ಹಾಕುತ್ತಿದ್ದರು.ಕಂಪನಿಯು ದಿವಾಳಿಯೆಂದು ಘೋಷಿಸಲ್ಪಟ್ಟರೆ ಸಾಲವನ್ನು ಮರು ವಸೂಲಿ ಮಾಡುವ ಕಾನೂನು ಭಾರತದಲ್ಲಿ ಅಸ್ತಿತ್ವದಲ್ಲಿರಲಿಲ್ಲ.

ಭುಷಣ್ ಸ್ಟಿಲ್ ಸಂಸ್ಥೆಯು 43 ಸಾವಿರ ಕೋಟಿ ರೂಪಾಯಿಗಳು ಸಾಲಮಾಡಿ ದಿವಾಳಿಯೆಂದು ಘೋಷಿಸಿಕೊಂಡು ಸಾಲವನ್ನು ಮರುಪಾವತಿಸದೆ ಕುಳಿತ್ತಿತ್ತು.

ಲ್ಯಾಂಕೋ ಸಂಸ್ಥೆಯು ಕೂಡ 30 ಸಾವಿರ ಕೋಟಿಗಿಂತಲೂ ಹೆಚ್ಚಿನ ಮೊತ್ತದ ಸಾಲಮಾಡಿ ದಿವಾಳಿಯೆಂದು ಘೋಷಿಸಿಕೊಂಡು ಸಾಲವನ್ನು ಮರುಪಾವತಿಸದೆ ಕುಳಿತ್ತಿತ್ತು.ಆದರೆ ಮೋದಿ ಸರ್ಕಾರವು ಈ Insolvency and Bankrupt Code (ದಿವಾಳಿ ಘೋಷಣಾ ಕಾನೂನು) ಕಾಯ್ದೆಯನ್ನು ಜಾರಿಗೆ ತಂದು ದಿವಾಳಿಯೆಂದು ಘೋಷಿಸಲ್ಪಟ್ಟು ಉದ್ಯಮದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಕಠಿಣ ಕ್ರಮವನ್ನು ಕೈಗೊಂಡ ಕಾರಣ ಕಾನೂನು ಜಾರಿಗೊಂಡ ಕೆಲವೇ ತಿಂಗಳುಗಳಲ್ಲಿ 4 ಲಕ್ಷ ಕೋಟಿ ಸಾಲ ಮರುಪಾವತಿಗೊಂಡಿದೆ‌. ಸಾಲ ಮರುಪಾವತಿಸಲಾಗದ ಭುಷಣದ ಸ್ಟಿಲ್ ಟಾಟಾ ಸ್ಟಿಲ್ ಗೆ ಮಾರಾಟಗೊಂಡಿದೆ. ಮಾರಾಟದ ಹಣವು ಬ್ಯಾಂಕ್ ಖಾತೆಗೆ ಜಮೆಯಾಗಿದೆ.

ಭಾರತದ ಸ್ವಾತಂತ್ರ್ಯಾ ನಂತರ 4 ಲಕ್ಷ ಕೋಟಿ ರುಪಾಯಿಗಳಷ್ಟು ದೊಡ್ಡ ಮೊತ್ತದ ಅನುತ್ಪಾದಿತ ಸಾಲವು(NPA) ಮರುಪಾವತಿಯಾಗುತ್ತಿರುವುದು ಇದೆ ಮೊದಲು, ಇದನ್ನೇ ಮೋದಿ ಅವರು ಹೇಳಿದ್ದು ” ಮೈ ನಹೀ ಖಾವುಂಗಾ , ನಾ ಖಾನೇಕೋ ನಹೀ ದೊಂಗಾ ” ಅಂತ. ಅಚ್ಚೇ ದಿನ್ ಅಂದರೆ ಇದಲ್ಲವೇ.?

ಕೃಪೆ: news13

Comments (0)
Add Comment