Kannada News: ಹೆಂಡತಿ ಸುಂದರವಾಗಿದ್ದಾಳೆ ಎಂದು ತಾನೇ ಖರ್ಚು ಹಾಕಿ ಮದುವೆಮಾಡಿಕೊಂಡ. ಆದರೆ ಕೊನೆಗೆ ಸುಂದರಿ ಮಾಡಿದ್ದೇನು ಗೊತ್ತೇ??

Kannada News: ಇತ್ತೀಚಿನ ದಿನಗಳಲ್ಲಿ ಯಾರನ್ನು ಕೂಡ ನಂಬುವುದಕ್ಕೆ ಸಾಧ್ಯವಿಲ್ಲ. ಯಾರು ಯಾವಾಗ ಹೇಗೆ ಮೋಸ ಮಾಡುತ್ತಾರೆ ಎಂದು ಹೇಳುವುದಕ್ಕೂ ಆಗುವುದಿಲ್ಲ. ಮದುವೆ ಅಂತಹ ಪವಿತ್ರವಾದ ಸಂಬಂಧದಲ್ಲಿ ಸಹ ಇಂಥ ಮೋಸಗಳು ನಡೆಯುತ್ತಿದೆ. ಅದಾಗಲೇ ಮದುವೆಯಾಗಿದ್ದ ಹುಡುಗಿಯೊಬ್ಬಳು ತನಗೆ ಇನ್ನು ಮದುವೆಯಾಗಿಲ್ಲ ಎಂದು ಹೇಳಿ, ಮತ್ತೊಂದು ಮದುವೆಯಾಗಿ, ಆ ವ್ಯಕ್ತಿಯಿಂದ ಎಲ್ಲವನ್ನು ದೋಚಿಕೊಂಡು ಪರಾರಿಯಾಗಿದ್ದಾಳೆ. ಇಂತಹ ಒಂದು ಘಟನೆ ಇತ್ತೀಚೆಗೆ ಗುಂಟೂರಿನಲ್ಲಿ ನಡೆದಿದೆ. ಈ ವ್ಯಕ್ತಿಯ ಹೆಸರು ಶ್ರೀನಿವಾಸ್ ರಾವ್, ಈತ ಮೋಟೋ ಕಂಟ್ರೋಲರ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದಾನೆ. ಆತನ ತಂದೆ ಪೋಲಿಯೋ ಇಂದ ಕಷ್ಟಪಡುತ್ತಿದ್ದಾರೆ. ತಾಯಿಗು ಅನಾರೋಗ್ಯದಿಂದ ಬಳಲುತ್ತಿದ್ದಾರೆ.

ಆತನ ತಂದೆ ತಾಯಿ ಮಗನಿಗೆ ಮದುವೆ ಮಾಡಲು ನಿರ್ಧಾರ ಮಾಡಿದರು, ಆಗ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿರುವ ನೌಕರರೊಬ್ಬರ ಮಗಳ ಸಂಪರ್ಕ ಸಿಕ್ಕಿ, ಆಕೆಗು ಮತ್ತು ಶ್ರೀನಿವಾಸ್ ರಾವ್ ಗು ಮದುವೆ ಮಾಡಬೇಕು ಎಂದು ನಿರ್ಧಾರ ಮಾಡಿದರು. ಆ ಹುಡುಗಿಗೆ ತಂದೆ ಇಲ್ಲದ ಕಾರಣ, ವರದಕ್ಷಿಣೆ ಪಡೆಯದೇ ಮದುವೆಯಾದ ಶ್ರೀನಿವಾಸ್ ರಾವ್. ಆದರೆ ಎರಡು ಲಕ್ಷ ಬೆಳೆಬಾಳುವಷ್ಟು ಬಂಗಾರದ ಆಭರಣಗಳನ್ನು ಹೆಂಡಿತಿಗೆ ಮಾಡಿಸಿದ. 6 ಲಕ್ಷ ಖರ್ಚು ಮಾಡಿ, ಊರಿನಲ್ಲಿ ರಿಸೆಪ್ಶನ್ ಮಾಡಿಕೊಂಡ. ಆದರೆ ಆಕೆ ಗಂಡನನ್ನು ದೂರವೇ ಇಟ್ಟಿದ್ದಳು. ತಾಯಿಗೆ ಆರೋಗ್ಯ ಚೆನ್ನಾಗಿಲ್ಲ ಎಂದು ಊರಿಗೆ ಹೊರಟು ಹೋಗಿದ್ದಳು. ಇದನ್ನು ಓದಿ..Relationship: ವಯಸ್ಸು 30 ವರ್ಷ ದಾಟಿದ ಮೇಲೆ ಮದುವೆಯಾದರೆ ಏನಾಗುತ್ತದೆ ಗೊತ್ತೇ? ಇಂಗೆಲ್ಲ ಆಗುತ್ತಾ?? ಕೊನೆಗೂ ಬಯಲಾಯ್ತು ಸತ್ಯ.

ಎರಡು ಮೂರು ತಿಂಗಳು ಕಳೆದರೂ ಹೆಂಡತಿ ವಾಪಸ್ ಬರಲಿಲ್ಲ. ಶ್ರೀನಿವಾಸ್ ರಾವ್ ಆಗ ಆಕೆಯ ಬಗ್ಗೆ ವಿಚಾರಿಸಿದಾಗ, ಹುಡುಗಿಗೆ ಈಗಾಗಲೇ ಮದುವೆಯಾಗಿತ್ತು ಎನ್ನುವ ವಿಷಯ ಬೆಳಕಿಗೆ ಬಂದಿದೆ. ಇದರಿಂದ ಶ್ರೀನಿವಾಸ್ ಗೆ ಬಹಳ ನೋವಾಗ, ಆಕೆಯ ವಿರುದ್ಧ ಮತ್ತು ಆಕೆಯ ಕುಟುಂಬದವರ ವಿರುದ್ಧ ಪೊಲೀಸರಲ್ಲಿ ದೂರು ನೀಡಿದ್ದಾನೆ. ಪೊಲೀಸರು ಈ ವಿಚಾರದ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ. ಮದುವೆ ಬಳಿಕ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದುಕೊಂಡಿದ್ದ ವ್ಯಕ್ತಿ ಮೋಸ ಹೋಗಿದ್ದಾನೆ. ಇಂಥಹ ಘಟನೆಗಳು ಆಗಾಗ ನಡೆಯುತ್ತಲೇ ಇದೆ, ಹಾಗಾಗಿ ಮದುವೆ ಆಗುವುದಕ್ಕಿಂತ ಮೊದಲು, ಸರಿಯಾಗಿ ಯೋಚಿಸಿ, ಅವರ ಬಗ್ಗೆ ವಿಚಾರಿಸಿ, ಬಳಿಕ ಮದುವೆಯಾಗಬೇಕು. ಇದನ್ನು ಓದಿ..Kannada News: ಸುಂದರ ಹೆಂಡತಿ ಮಾತು ಕೇಳಿ ಹೆತ್ತ ತಾಯಿಯನ್ನು ಆಶ್ರಮಕ್ಕೆ ಬಿಟ್ಟು ಬಂದ ಮಗ, ಕೊನೆಗೆ ಅಮ್ಮ ಏನಾದಳು ಗೊತ್ತೇ? ಇಷ್ಟೆಲ್ಲ ಆದರೂ ಅಮ್ಮ ಮಾಡಿದ್ದೇನು ಗೊತ್ತೇ??