ರಾಜಮೌಳಿ ಅವರ ಆರ್ ಆರ್ ಆರ್ ಚಿತ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಪುನೀತ್ ಅಭಿಮಾನಿಗಳು, ಎನ್ಟಿಆರ್ ಗೆ ಮೇಲೆ ಬಾರಿ ಮುನಿಸು. ಯಾಕೆ ಗೊತ್ತೇ??

ರಾಜಮೌಳಿ ಅವರ ಆರ್ ಆರ್ ಆರ್ ಚಿತ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಪುನೀತ್ ಅಭಿಮಾನಿಗಳು, ಎನ್ಟಿಆರ್ ಗೆ ಮೇಲೆ ಬಾರಿ ಮುನಿಸು. ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಈಗಾಗಲೇ ಜೇಮ್ಸ್ ಚಿತ್ರ ರಾಜ್ಯಾದ್ಯಂತ ಹಾಗೂ ವಿಶ್ವಾದ್ಯಂತ ಸಿನಿಮಾ ಥಿಯೇಟರ್ ಗಳಲ್ಲಿ ಕನಸಿನ ಓಟವನ್ನು ಮುಂದುವರಿಸಿದೆ. ಎಲ್ಲಾ ಪ್ರದರ್ಶನಗಳು ಕೂಡ ಹೌಸ್ಫುಲ್ ಆಗಿ ಯಶಸ್ವಿಯಾಗಿ ಓಡುತ್ತಿದೆ. ಕನ್ನಡ ಚಿತ್ರವೊಂದು ಇಷ್ಟರಮಟ್ಟಿಗೆ ದೊಡ್ಡ ಮಟ್ಟದ ಯಶಸ್ಸನ್ನು ಕಾಣುತ್ತದೆ ಎಂದರೆ ನಿಜಕ್ಕೂ ಕೂಡ ಪ್ರತಿಯೊಬ್ಬ ಕನ್ನಡಿಗ ಕೂಡ ಹೆಮ್ಮೆಪಡಬೇಕು.

ರಾಜ್ಯಾದ್ಯಂತ ಈಗಾಗಲೇ ನೂರು ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಪಡೆದು ಜೇಮ್ಸ್ ಚಿತ್ರ ಇನ್ನಷ್ಟು ದಾಖಲೆಗಳನ್ನು ನಿರ್ಮಿಸುವ ಮುನ್ನುಗ್ಗುತ್ತಿದೆ ಎಂಬುದಾಗಿ ಸಿನಿಮಾ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ. ಅಪ್ಪು ಅಭಿಮಾನಿಗಳಿಗೆ ಅವರ ಜನ್ಮದಿನದ ವಿಶೇಷವಾಗಿ ಜೀವನಪೂರ್ತಿ ನೆನಪಿಟ್ಟುಕೊಳ್ಳುವಂತಹ ಉಡುಗೊರೆಯನ್ನು ಜೇಮ್ಸ್ ಚಿತ್ರತಂಡ ನೀಡಿದೆ ಎಂದು ಹೇಳಬಹುದಾಗಿದೆ. ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಸೆಲೆಬ್ರಿಟಿಗಳು ಕೂಡ ಮೊದಲ ದಿನವೇ ಫಸ್ಟ್ ಶೋ ನೋಡಿಕೊಂಡು ಬಂದು ತನ್ನ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಇನ್ನು ಸದ್ಯಕ್ಕೆ ಜೇಮ್ಸ್ ಚಿತ್ರ ಕನಿಷ್ಠಪಕ್ಷ 200ರಿಂದ 300 ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತದೆ ಎಂಬುದಾಗಿ ಅಪ್ಪು ಅಭಿಮಾನಿಗಳು ಸೇರಿದಂತೆ ಕನ್ನಡ ಚಿತ್ರರಂಗದ ಸಿನಿಮಾ ರಸಿಕರು ಅಂದಾಜು ಹಾಕಿದ್ದರು. ಆದರೆ ಇದಕ್ಕೆ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರಕಲೆ ಹಾಕುತ್ತಿದೆ ಎನ್ನುವುದಾಗಿ ಅಪ್ಪು ಅಭಿಮಾನಿಗಳು ಈಗ ರಾಜಮೌಳಿ ಅವರ ಮೇಲೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ನಿಮಗೆ ತಿಳಿದಿರಬಹುದು ಮಾರ್ಚ್ 18ರಂದು ಆರ್ ಆರ್ ಆರ್ ಚಿತ್ರ ಬಿಡುಗಡೆಯಾಗುವ ಯೋಜನೆಯನ್ನು ಹಾಕಿಕೊಂಡಿತ್ತು.

ಆದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಜೇಮ್ಸ್ ಚಿತ್ರ ಮಾರ್ಚ್ 17ರಂದು ಅವರ ಜನ್ಮದಿನದ ವಿಶೇಷವಾಗಿ ಬಿಡುಗಡೆ ಆಗುತ್ತಿದೆ ಎನ್ನುವ ವಿಚಾರವನ್ನು ತಿಳಿದು ತಮ್ಮ ಚಿತ್ರದ ಬಿಡುಗಡೆ ದಿನಾಂಕವನ್ನು ಮಾರ್ಚ್ 25 ಮುಂದೂಡಿತ್ತು. ಆದರೆ ಜೇಮ್ಸ್ ಚಿತ್ರ ಬಿಡುಗಡೆಯಾಗಿರುವ ಒಂದೇ ವಾರದಲ್ಲಿ ಮತ್ತೆ ಆರ್ ಆರ್ ಆರ್ ಚಿತ್ರ ಬಿಡುಗಡೆಯಾಗುತ್ತಿರುವುದು ಮತ್ತೊಂದು ಸಮಸ್ಯೆಯಾಗಿ ಕಾಣುತ್ತಿದೆ.

ಹೌದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೇಮ್ಸ್ ಚಿತ್ರ ಆರ್ ಆರ್ ಆರ್ ಚಿತ್ರದ ಬಿಡುಗಡೆಯ ನಂತರ ಕರ್ನಾಟಕ ರಾಜ್ಯದಲ್ಲಿ ಕೆಲವು ಸಿನಿಮಾ ಥಿಯೇಟರ್ ಗಳಿಗೆ ಮಾತ್ರ ಸೀಮಿತವಾಗಬಹುದಾದ ಸಾಧ್ಯತೆಗಳಿವೆ. ಯಾಕೆಂದರೆ ನಿಮಗೆ ತಿಳಿದಿರುವಂತೆ ಆರ್ ಆರ್ ಆರ್ ಚಿತ್ರ ಬಿಗ್ ಬಜೆಟ್ ನಲ್ಲಿ ಮೂಡಿಬಂದಿರುವ ಸಿನಿಮಾ. ಖಂಡಿತವಾಗಿ ಅವರು ಬಿಡುಗಡೆ ಮಾಡುವ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯ ಸಿನಿಮಾ ಥಿಯೇಟರುಗಳಲ್ಲಿ ಬಿಡುಗಡೆ ಮಾಡಲು ಪ್ರಯತ್ನಿಸುತ್ತಾರೆ, ಕನಿಷ್ಠ ಎರಡು ಸಾವಿರ ಸ್ಕ್ರೀನ್ ಗಳು ಬೇಕಾಗುತ್ತವೆ. ಈಗಾಗಲೇ ನಿಮಗೆಲ್ಲ ತಿಳಿದಿರುವಂತೆ ಬಹುತೇಕ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಜೇಮ್ಸ್ ಚಿತ್ರ ಪ್ರದರ್ಶನ ಕಾಣುತ್ತಿದೆ.

ಹೀಗಾಗಿ ಜೇಮ್ಸ್ ಚಿತ್ರ ಪ್ರದರ್ಶನ ಕಾಣುತ್ತಿರುವ ಸಿನಿಮಾ ಥಿಯೇಟರ್ ಗಳಲ್ಲಿ ಆರ್ ಆರ್ ಆರ್ ಸಿನಿಮಾ ಬಿಡುಗಡೆಯಾಗುವುದಂತೂ ಪಕ್ಕ. ಒಮ್ಮೆ ಚಿತ್ರಮಂದಿರಗಳನ್ನು ಪಡೆದ ನಂತರ ಮತ್ತೆ ಜೇಮ್ಸ್ ಚಿತ್ರಮಂದಿರಗಳಲ್ಲಿ ಕಾಣಿಸಿಕೊಳ್ಳುವುದು ಕಷ್ಟ. ಇನ್ನು ಹಲವಾರು ಪ್ರೇಕ್ಷಕರು ಜೇಮ್ಸ್ ಚಿತ್ರವನ್ನು ನೋಡಬೇಕಾಗಿದೆ. ಇದಕ್ಕೂ ಮುನ್ನವೇ ಜೇಮ್ಸ್ ಚಿತ್ರವನ್ನು ಚಿತ್ರಮಂದಿರಗಳಿಂದ ಹೊರಹಾಕಿದರೆ ಹೇಗೆತಾನೆ ಅಭಿಮಾನಿಗಳು ತಮ್ಮ ಆರಾಧ್ಯ ದೈವವನ್ನು ಕೊನೆಯ ಬಾರಿ ನೋಡಲು ಸಾಧ್ಯ.

ಇದಕ್ಕಾಗಿಯೇ ಅಪ್ಪು ಅಭಿಮಾನಿಗಳು ರಾಜಮೌಳಿಯವರ ಸಿನಿಮಾದ ಬಿಡುಗಡೆಗೆ ತಮ್ಮ ಮುನಿಸನ್ನು ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕಾಗಿ ಜೇಮ್ಸ್ ಚಿತ್ರವನ್ನು ಆದಷ್ಟು ಬೇಗ ನಿಮ್ಮ ಕುಟುಂಬ ಸಮೇತರಾಗಿ ಚಿತ್ರಮಂದಿರಗಳಲ್ಲಿ ತಪ್ಪದೆ ವೀಕ್ಷಿಸಿ ಎಂಬುದಾಗಿ ನಾವು ಪದೇಪದೇ ಕೇಳುತ್ತಿದ್ದೇವೆ. ಅಪ್ಪು ಅಭಿಮಾನಿಗಳ ಈ ಕೋರಿಕೆಗೆ ಮತ್ತೆ ರಾಜಮೌಳಿಯವರು ಮಂಡಿ ಊರುತ್ತಾರೋ ಇಲ್ಲವೋ ಎಂಬುದನ್ನು ಕಾದುನೋಡಬೇಕಾಗಿದೆ.