ಹುಟ್ಟುಹಬ್ಬದ ದಿನವೇ ನಿಜವಾಗಲೂ ಅಪ್ಪು ರವರನ್ನು ಮರೆತರೇ ಸುದೀಪ್?? ದರ್ಶನ್ ಮಾಡಿದ ಆ ಒಂದು ಟ್ವೀಟ್ ನಲ್ಲಿ ಏನಿದೆ ಗೊತ್ತೇ??

ಹುಟ್ಟುಹಬ್ಬದ ದಿನವೇ ನಿಜವಾಗಲೂ ಅಪ್ಪು ರವರನ್ನು ಮರೆತರೇ ಸುದೀಪ್?? ದರ್ಶನ್ ಮಾಡಿದ ಆ ಒಂದು ಟ್ವೀಟ್ ನಲ್ಲಿ ಏನಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನದ ಶುಭ ಸಂದರ್ಭದಲ್ಲಿ ಅವರ ಕೊನೆಯ ಚಿತ್ರವಾಗಿರುವ ಜೇಮ್ಸ್ ರಾಜ್ಯಾದ್ಯಂತ ಹಾಗೂ ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಕನ್ನಡ ಚಿತ್ರರಂಗದ ಹಲವಾರು ದಾಖಲೆಗಳನ್ನು ಈಗಾಗಲೇ ಚಿತ್ರ ಮುರಿದಿರುವುದು ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಕೊನೆಯ ಬಾರಿಗೆ ದೊಡ್ಡ ಪರದೆ ಮೇಲೆ ನೋಡುವ ತವಕ ಕೂಡ ಅಭಿಮಾನಿಗಳಲ್ಲಿ ಜಾಸ್ತಿಯಾಗಿರುವುದು ಕೂಡ ಇದಕ್ಕೆ ಕಾರಣವಾಗಿದೆ.

ಇನ್ನು ನಿಮಗೆ ತಿಳಿದಿರುವಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಜೊತೆಗೆ ಕನ್ನಡ ಚಿತ್ರರಂಗದಲ್ಲಿ ಅದೇ ಕಾಲಕ್ಕೆ ಬಂದವರು ಎಂದರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕೂಡ ಹೌದು. ಮೂವರು ಕೂಡ ಸಮಕಾಲೀನರಾಗಿ ಚಿತ್ರರಂಗದಲ್ಲಿ ಬೆಳೆದು ಬಂದವರು ಎಂದರೆ ತಪ್ಪಾಗಲಾರದು. ಮೂರು ಜನರು ಕೂಡ ಚಿತ್ರರಂಗದಲ್ಲಿ ಅದ್ಭುತ ಬಾಂಧವ್ಯವನ್ನು ಹೊಂದಿದ್ದರು. ಇದನ್ನು ಹಲವಾರು ಸಂದರ್ಭಗಳಲ್ಲಿ ನಾವು ನೋಡಿದ್ದೇವೆ.

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಮರಣ ಹೊಂದಿದ ಸಂದರ್ಭದಲ್ಲಿ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಕ್ರಾಂತಿ ಸಿನಿಮಾದ ಚಿತ್ರೀಕರಣವನ್ನು ಅರ್ಧಕ್ಕೆ ನಿಲ್ಲಿಸಿ ಆಸ್ಪತ್ರೆಗೆ ಓಡೋಡಿ ಬಂದಿದ್ದರು. ಈ ಕಡೆ ಕಿಚ್ಚ ಸುದೀಪ್ ಅವರು ಕೂಡ ಹೈದರಾಬಾದ್ನಿಂದ ಸುದ್ದಿ ಕೇಳಿದ ತಕ್ಷಣ ಉಪೇಂದ್ರರವರ ನ್ನು ಕರೆದುಕೊಂಡು ತಮ್ಮ ಗೆಳೆಯನನ್ನು ಕೊನೆಯ ಬಾರಿಗೆ ನೋಡಲು ಬಂದಿದ್ದರು. ಅಷ್ಟರಮಟ್ಟಿಗೆ ಇಬ್ಬರು ಪುನೀತ್ ರಾಜಕುಮಾರ್ ಅವರ ಜೊತೆಗೆ ಸ್ನೇಹ ಸಂಬಂಧವನ್ನು ಹೊಂದಿದ್ದರು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಎಂದರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ. ಅವರು ಕನ್ನಡ ಚಿತ್ರರಂಗದ ಅಜಾತಶತ್ರು ಎಂಬುದಾಗಿ ಸುಮ್ಮನೆ ಹೇಳ್ತಾರ.

ಆದರೆ ಇವತ್ತು ಅವರ ಜನ್ಮದಿನದ ವಿಶೇಷವಾಗಿ ನಡೆದಿರುವಂತಹ ಘಟನೆ ಸದ್ಯಕ್ಕೀಗ ಗುಸುಗುಸು ಚರ್ಚೆಗೆ ಈಡಾಗಿದೆ. ಅದೇನೆಂದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಜನ್ಮ ದಿನದ ವಿಶೇಷವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ತಮ್ಮ ಟ್ವಿಟರ್ ಖಾತೆಯ ಮೂಲಕ ದೈಹಿಕವಾಗಿ ಇಂದು ನಮ್ಮೊಡನೆ ಇರದಿದ್ದರೂ ಕನ್ನಡಿಗರ ಮನಗಳಲ್ಲಿ ಶಾಶ್ವತವಾಗಿ ನೆಲೆಮಾಡಿರುವ ಪುನೀತ್ ರಾಜ್ ಕುಮಾರ್ ಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಮತ್ತೆ ಕರುನಾಡಲ್ಲೇ ಹುಟ್ಟಿ ಬನ್ನಿ. ಜೇಮ್ಸ್ ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡಿ ಆನಂದಿಸಿ ಎಂದುವಿಶ್ ಮಾಡುವುದರ ಮೂಲಕ ತಮ್ಮ ಗೆಳೆಯನನ್ನು ನೆನೆಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಕಿಚ್ಚ ಸುದೀಪ್ ರವರು ಟ್ವಿಟರ್ ಖಾತೆಯಲ್ಲಿ ಅಪ್ಪು ಅವರ ಜನ್ಮದಿನದ ಹಿನ್ನೆಲೆಯಲ್ಲಿ ಯಾವುದೇ ಶುಭಾಶಯಗಳನ್ನು ಕೋರಿಲ್ಲ.

ನಿಜವಾಗಿ ಹೇಳಬೇಕೆಂದರೆ ಇತ್ತೀಚಿಗೆ ಜೇಮ್ಸ್ ಚಿತ್ರದ ಹಾಡನ್ನು ಕೂಡ ಸುದೀಪ್ ರವರು ಬಿಡುಗಡೆ ಮಾಡಿದ್ದರು. ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಸಾಮಾಜಿಕ ಜಾಲತಾಣಗಳಲ್ಲಿ ವಿಶ್ ಮಾಡದೇ ಇರಲು ಕಿಚ್ಚ ಸುದೀಪ್ ರವರಿಗೆ ಇರುವಂತಹ ದುಃಖವು ಕೂಡ ಕಾರಣ ಎಂಬುದಾಗಿ ಕೇಳಿ ಬರುತ್ತದೆ. ಗೆಳೆಯನನ್ನು ಕಳೆದುಕೊಂಡಿರುವ ದುಃಖದಲ್ಲಿ ಅವರ ಜನ್ಮದಿನದ ವಿಶ್ ಮಾಡಿಲ್ಲ ಇದು ಅವರ ಮನಸ್ಸಿಗೆ ಎಷ್ಟು ದುಃಖವನ್ನು ತಂದು ನೀಡಿದೆ ಎಂಬುದಾಗಿ ತಿಳಿದು ಬರುತ್ತದೆ.

ತಮ್ಮ ಗೆಳೆಯನನ್ನು ಕಳೆದುಕೊಂಡಿರುವ ದುಃಖದಲ್ಲಿ ವಿಶ್ ಮಾಡಲು ಕಣ್ಣೀರು ಬರುತ್ತದೆ ಎಂಬುದು ಕೂಡ ಇಲ್ಲಿ ತಿಳಿ ದುಬರುತ್ತದೆ. ಅದೇನೇ ಇರಲಿ ಗೆಳೆಯರೇ ಕನ್ನಡ ಚಿತ್ರರಂಗದ ಮೂರು ಆಧಾರ ಸ್ತಂಭಗಳಾಗಿ ಪುನೀತ್ ರಾಜಕುಮಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದರು. ಆದರೆ ಇಬ್ಬರೂ ಕೂಡ ಇಂದು ತಮ್ಮ ಗೆಳೆಯ ಹಾಗೂ ಕನ್ನಡ ಚಿತ್ರರಂಗದ ಆಧಾರಸ್ತಂಭ ಗಳಲ್ಲಿ ಒಂದಾದ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡ ದುಃಖದಲ್ಲಿ ಇದ್ದಾರೆ ಎಂಬುದು ಸತ್ಯ. ಅವರಷ್ಟೇ ಅಲ್ಲ, ಇಡೀ ಕರ್ನಾಟಕವೇ ಇಂದು ಮತ್ತೊಮ್ಮೆ ಸಿನಿಮಾ ನೋಡಿ ಕಣ್ಣೀರು ಹಾಕಿದೆ ಎಂದರೆ ತಪ್ಪಾಗಲಾರದು. ಇನ್ನು ಈ ಸಮಯದಲ್ಲಿ ಪ್ರತಿಯೊಬ್ಬರೂ ಥಿಯೇಟರ್ ನಲ್ಲಿಯೇ ಸಿನಿಮಾ ನೋಡಿ ಎಂದು ನಮ್ಮ ತಂಡದ ಪರವಾಗಿ ಮನವಿ ಮಾಡಿಕೊಳ್ಳುತ್ತಿದ್ದೇವೆ.