ಡಿ ಬಾಸ್ ರವರ ಕುರಿತಂತೆ ಮೊದಲ ಬಾರಿಗೆ ಮಾತನಾಡಿದ ವಿನೋದ್ ರಾಜ್ ರವರು ಹೇಳಿದ್ದೇನು ಗೊತ್ತೇ?? ಡಿ ಬಾಸ್ ಕೋಪದ ಕುರಿತು ಹೇಳಿದ್ದೇನು ಗೊತ್ತೇ??

ಡಿ ಬಾಸ್ ರವರ ಕುರಿತಂತೆ ಮೊದಲ ಬಾರಿಗೆ ಮಾತನಾಡಿದ ವಿನೋದ್ ರಾಜ್ ರವರು ಹೇಳಿದ್ದೇನು ಗೊತ್ತೇ?? ಡಿ ಬಾಸ್ ಕೋಪದ ಕುರಿತು ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಮೈಕಲ್ ಜಾಕ್ಸನ್ ಎಂದು ಕರೆಸಿಕೊಂಡವರು ನಟ ವಿನೋದ್ ರಾಜ್ ಎನ್ನುವುದು ನಿಮಗೆಲ್ಲ ತಿಳಿದಿದೆ. ಕನ್ನಡ ಚಿತ್ರರಂಗದ ಸ್ಟಾರ್ ನಟರಾಗಿ ಬೆಳೆಯುತ್ತಾರೆ ಎಂಬುದಾಗಿ ಎಲ್ಲರೂ ಕೂಡ ಅಂದುಕೊಂಡಿದ್ದರು. ಆದರೆ ಅಚಾನಕ್ಕಾಗಿ ಚಿತ್ರರಂಗದಿಂದ ವಿನೋದ್ ರಾಜ್ ರವರು ಕಣ್ಮರೆಯಾಗುತ್ತಾರೆ. ಕೆಲವರು ಹೇಳುವ ಪ್ರಕಾರ ಆರೋಗ್ಯ ಸಮಸ್ಯೆಯಿಂದ ಅವರು ಚಿತ್ರರಂಗದಿಂದ ದೂರವಾದರು ಎನ್ನುತ್ತಾರೆ.

ಇನ್ನು ಕೆಲವರು ಚಿತ್ರರಂಗವೇ ಅವರನ್ನು ದೂರವಿಟ್ಟಿದೆ ಇದಕ್ಕಾಗಿ ಅವರು ತಮ್ಮ ತಾಯಿಯೊಂದಿಗೆ ನೆಲಮಂಗಲದಲ್ಲಿ ಕೃಷಿ ಭೂಮಿಯನ್ನು ಖರೀದಿಸಿ ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ ಎಂಬುದಾಗಿ ಹೇಳುತ್ತಾರೆ. ಅದೇನೇ ಇರಲಿ ಕನ್ನಡ ಚಿತ್ರರಂಗ ವಿನೋದ್ ರಾಜ್ ರವರ ಸಂಪೂರ್ಣ ಪ್ರತಿಭೆಯನ್ನು ಗುರುತಿಸುವಲ್ಲಿ ವಿಫಲವಾಗಿದೆ ಎಂದು ಹೇಳಬಹುದಾಗಿದೆ. ಇತ್ತೀಚಿಗೆ ಲಾಕ್ಡೌನ್ ಸಂದರ್ಭದಲ್ಲಿ ಕೂಡ ಕೆಲವು ಆಸ್ತಿ ಮಾರಿದ ಹಣದಲ್ಲಿ ಅಶಕ್ತ ಜನರಿಗೆ ಆರ್ಥಿಕವಾಗಿ ಹಾಗೂ ಆಹಾರ ದೃಷ್ಟಿಯಲ್ಲಿ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದರು ತಾಯಿ ಮಗ.

ಕೇವಲ ಇಷ್ಟು ಮಾತ್ರವಲ್ಲದೆ ಚಿತ್ರಮಂದಿರಗಳ 50% ಸೀಟಿಂಗ್ ವ್ಯವಸ್ಥೆ ಇದ್ದಾಗಲೂ ಕೂಡ ಕನ್ನಡ ಚಿತ್ರರಂಗದ ಪರವಾಗಿ ದನಿಯೆತ್ತಿದ್ದರು. ಇನ್ನು ಇತ್ತೀಚೆಗೇ ಸಂದರ್ಶನದಲ್ಲಿ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕುರಿತಂತೆ ಕೂಡ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಕುರಿತಂತೆ ಮಾತನಾಡುತ್ತಾ ವಿನೋದ್ ರಾಜ್ ರವರು ದರ್ಶನ್ ಅವರಿಗೆ ಕೋಪ ಜಾಸ್ತಿ ಇದೆ ನಿಜ, ಆದರೆ ಕೋಪ ಎಲ್ಲರಿಗೂ ಬರುತ್ತದೆ, ಆದರೆ ಅವರ ಮನಸ್ಸು ಪರಿಶುದ್ಧವಾದದ್ದು ಎಂಬುದಾಗಿ ಹೊಗಳಿದ್ದಾರೆ. ಖಳನಾಯಕನ ಮಗನಾಗಿದ್ದರೂ ಕೂಡ ಅವರು ಚಿತ್ರರಂಗದಲ್ಲಿ ಮೇಲೆದ್ದು ಬಂದ ರೀತಿ ನಿಜಕ್ಕೂ ಕೂಡ ಮೆಚ್ಚುವಂತದ್ದು ಎಂಬುದಾಗಿ ಹೇಳಿದ್ದಾರೆ. ಒಂದು ಕಾಲದಲ್ಲಿ ಅವರಿಗೆ ಊಟ ಇಷ್ಟವಾಗಿದ್ದರು ತಿನ್ನಲು ಸಾಧ್ಯವಾಗುತ್ತಿರಲಿಲ್ಲ, ಆದರೆ ಇಂದು ಅವರ ಬಳಿ ಐಷಾರಾಮಿ ಕಾರುಗಳು ರಾಶಿಗಟ್ಟಲೆ ಇದೆ ನಿಜಕ್ಕೂ ಕೂಡ ಅವರ ಬೆಳವಣಿಗೆಯನ್ನು ನೋಡಿ ನಾನು ಸಂತೋಷ ಪಡುತ್ತೇನೆ ಎಂಬುದಾಗಿ ಹೇಳಿದ್ದಾರೆ.