ಅರ್ಜುನ್ ಗುರೂಜಿ ಪವಾಡಗಳ ಬಗ್ಗೆ ಮಾತನಾಡಿದ ತಾರಾ, ಅಂದು ದೀಪ ಬೆಳಗಿಸಿದ್ದು ಎಣ್ಣೆಯಿಂದಲ್ಲ, ಎಂದು ಷಾಕಿಂಗ್ ಹೇಳಿಕೆ ನೀಡಿ ಹೇಳಿದ್ದೇನು ಗೊತ್ತೇ??

ಅರ್ಜುನ್ ಗುರೂಜಿ ಪವಾಡಗಳ ಬಗ್ಗೆ ಮಾತನಾಡಿದ ತಾರಾ, ಅಂದು ದೀಪ ಬೆಳಗಿಸಿದ್ದು ಎಣ್ಣೆಯಿಂದಲ್ಲ, ಎಂದು ಷಾಕಿಂಗ್ ಹೇಳಿಕೆ ನೀಡಿ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನೀವು ನಮ್ಮ ಭಾರತ ದೇಶದ ವ್ಯವಸ್ಥೆಗೆ ಅತ್ಯಂತ ಪವರ್ಫುಲ್ ಆಗಿರುವ ಸ್ಥಾನ ಯಾವುದು ಎಂದು ಕೇಳಬಹುದು. ಆಗ ಕೆಲವರು ರಾಜಕಾರಣಿಗಳು ಸರ್ಕಾರಿ ಅಧಿಕಾರಿಗಳು ಹೀಗೆ ಒಂದಾದ ಮೇಲೊಂದರಂತೆ ಹೇಳಬಹುದು. ಆದರೆ ಈ ಎಲ್ಲ ವ್ಯಕ್ತಿಗಳು ಕೂಡ ತಲೆಬಾಗುವುದು ಒಬ್ಬ ಸ್ವಾಮೀಜಿಯ ಮುಂದೇನು ನಮ್ಮ ದೇಶದಲ್ಲಿ ಹೆಚ್ಚಿನ ಬಾರಿ ಕಂಡುಬರುವಂತಹ ಪರಿಸ್ಥಿತಿ. ಇಂದಿನ ವಿಚಾರದಲ್ಲಿ ಕೂಡ ನಾವು ಒಬ್ಬ ಸ್ವಾಮೀಜಿಯ ಕುರಿತಂತೆ ಹೇಳಲು ಹೊರಟಿದ್ದೇವೆ.

ಸುದ್ದಿಯಲ್ಲಿ ಕೇಳುವಂತೆ ಕೆಲವೊಂದು ಸ್ವಾಮೀಜಿಗಳು ಡೋಂಗಿ ಸ್ವಾಮೀಜಿ ಗಳಾಗಿರುತ್ತಾರೆ. ಅವರು ತಮ್ಮ ಹೊಟ್ಟೆಪಾಡಿಗಾಗಿ ಬೂಟಾಟಿಕೆ ಏನು ನಡೆಸುತ್ತಾರೆ ಎಂಬುದಾಗಿ ಕೂಡ ಹಲವಾರು ಬಾರಿ ಸಾಬೀತಾಗಿದೆ. ಇನ್ನು ಕೆಲವರು ಸತ್ಯವಂತರಾಗಿದ್ದರು ನಿಜಾಂಶವನ್ನು ಎಲ್ಲರಿಗೂ ಕೂಡ ಸಾರುತ್ತಾರೆ. ಅದರಲ್ಲೂ ಇತ್ತೀಚಿಗಷ್ಟೇ ನಡೆದಿರುವ ಚಂದನ್ ಶೆಟ್ಟಿ ನಟನೆಯ ಎಲ್ಲರ ಕಾಲ್ ಎಳಿತದೆ ಕಾಲ ಎಂಬ ಚಿತ್ರದ ಸುದ್ದಿಗೋಷ್ಠಿಯಲ್ಲಿ ಅವರು ಅರ್ಜುನ್ ಗುರೂಜಿ ಅವರ ಕುರಿತಂತೆ ಹೇಳಿದ್ದಾರೆ. ಆ ಸುದ್ದಿಗೋಷ್ಠಿಯಲ್ಲಿ ಅರ್ಜುನ್ ಗುರೂಜಿ ರವರು ಕೂಡ ಉಪಸ್ಥಿತರಿದ್ದರು. ತಾವು ಅರ್ಜುನ್ ಗುರೂಜಿ ಅವರು ಹೇಳುವ ಪ್ರತಿಯೊಂದು ಮಾತನ್ನು ನಾವು ಅನುಸರಿಸುತ್ತೇವೆ ಎಂಬುದಾಗಿ ತರಾರ್ ಅವರು ಹೇಳಿದ್ದಾರೆ.

ನಟಿ ಹಾಗೂ ರಾಜಕಾರಣಿಯಾಗಿರುವ ತಾರಾ ರವರು ಅರ್ಜುನ್ ಗುರೂಜಿ ರವರನ್ನು ತಮ್ಮ ಸ್ನೇಹಿತರ ಸಲಹೆ ಮೇರೆಗೆ ಹಲವಾರು ವರ್ಷಗಳ ಹಿಂದೆ ಮೈಸೂರಿನಲ್ಲಿ ಭೇಟಿಯಾಗಿದ್ದಾರೆ. ಅದಕ್ಕಿಂತ ಮುಂಚೆ ತಾರಾ ರವರಿಗೆ ರಾಜಕಾರಣಿಯಾಗುವಂತಹ ಯಾವ ಮನಸ್ಸು ಕೂಡ ಇರಲಿಲ್ಲ. ಅರ್ಜುನ್ ಗುರೂಜಿ ರವರು ನೀವು ಮುಂದಿನ ದಿನಗಳಲ್ಲಿ ರಾಜಕಾರಣಿ ಆಗುತ್ತಾರೆ ಎಂಬುದಾಗಿ ಹೇಳಿದಾಗ ಹಾಗೆ ಆಗುವುದಕ್ಕೆ ಸಾಧ್ಯವಿಲ್ಲ ಎಂಬುದಾಗಿ ತಾರ ರವರು ಹೇಳಿದ್ದರಂತೆ. ಆದರೆ ಈಗ ಭಾರತೀಯ ಜನತಾ ಪಾರ್ಟಿಯ ಸಕ್ರಿಯ ಕಾರ್ಯಕರ್ತರಾಗಿ ತಾರ ರವರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ತಾರಾ ಅವರು ಅರ್ಜುನ್ ಗುರೂಜಿಯವರು ಮಾಡಿರುವಂತಹ ಒಂದು ಪವಾಡದ ಕುರಿತಂತೆ ಕೂಡ ವಿವರಿಸುತ್ತಾರೆ. ಅರ್ಜುನ್ ಗುರೂಜಿ ರವರ ಜೊತೆಗೆ ತಾರಾ ರವರು ಮಾತನಾಡುತ್ತಿರಬೇಕಾದರೆ ಅವರ ಮನೆಯ ಕೆಳಗಡೆ ಭಾಗದಲ್ಲಿರುವ ಬಾಬಾರವರ ಮೂರ್ತಿಗೆ ಎರಡು ದೀಪಗಳನ್ನು ಯಾರೋ ತಂದಿಟ್ಟರು. ಆಗ ಅರ್ಜುನ್ ಗುರೂಜಿ ರವರು ಬಿಸ್ಲೇರಿ ಬಾಟಲಿ ಯಲ್ಲಿರುವ ನೀರನ್ನೇ ದೀಪಕ್ಕೆ ಹಾಕಿ ದೀಪವನ್ನು ಹಚ್ಚಿದರು. ಮೊದಲ ಗೀತಾರವರು ಬಿಸ್ಲೇರಿ ಬಾಟಲಿಯಲ್ಲಿ ಇರುವುದು ಎಣ್ಣೆ ಎಂದು ಭಾವಿಸಿದ್ದರು. ನಂತರ ಗುರುಗಳು ಅದನ್ನು ಕೇಳಿದ ನಂತರವೇ ಅವರಿಗೂ ಕೂಡ ಆಶ್ಚರ್ಯವಾಗಿದ್ದು.

ಒಮ್ಮೆ ಬೆಳ್ಳಿ ಗಣಪತಿಯನ್ನು ಅರ್ಜುನ್ ಗುರೂಜಿ ರವರು ಮೋದಿಯವರಿಗೆ ಕೊಡುವಂತೆ ಹೇಳಿದರು. ಆಗ ತಾರಾ ರವರು ಅಷ್ಟೊಂದು ಜನರ ನಡುವೆ ನಾನು ಉಡುಗೊರೆ ಕೊಡಲು ಸಾಧ್ಯವಿಲ್ಲ ಎಂಬುದಾಗಿ ಹೇಳುತ್ತಾರೆ. ಆಗ ಅರ್ಜುನ್ ಗುರೂಜಿ ರವರು ನೀವು ಕೊಡುವುದು ಬೇಡ ಮೋದಿಯವರೇ ಬಂದು ಅದನ್ನು ತೆಗೆದುಕೊಳ್ಳುತ್ತಾರೆ ಎಂಬುದಾಗಿ ಹೇಳುತ್ತಾರೆ. ಶಶಿಕಾಂತ್ ಜೊಲ್ಲೆ ರವರ ಕಾರ್ಯಕ್ರಮದಲ್ಲಿ ಮೋದಿಯವರು ಬಂದಿದ್ದಾಗ ಹಲವಾರು ಜನರು ಉಡುಗೊರೆ ನೀಡಲು ಕಾಯುತ್ತಿದ್ದರು ಕೂಡ ಮೋದಿಯವರೇ ಬಂದು ಬೆಳ್ಳಿ ಗಣಪತಿಯನ್ನು ತೆಗೆದುಕೊಂಡು ಹೋದರು ಇದು ನಿಜಕ್ಕೂ ಆಶ್ಚರ್ಯಕರ ವಿಚಾರ ಎಂಬುದಾಗಿ ಈ ಸಂದರ್ಭದಲ್ಲಿ ಅರ್ಜುನ್ ಗುರೂಜಿ ಅವರ ಕುರಿತಂತೆ ಹೇಳುತ್ತಾರೆ.

ಅದಾದಮೇಲೆ ಮೈಸೂರಿನಲ್ಲಿ ಅರ್ಜುನ್ ಗುರೂಜಿ ರವರನ್ನು ಹಲವಾರು ಸಾರಿ ಭೇಟಿಯಾಗಿದ್ದೆ. ನನ್ನ ಜೀವನದಲ್ಲಿ ನಡೆದಿರುವಂತಹ ಹಲವಾರು ಮಹತ್ವಪೂರ್ಣ ವಾದಂತಹ ಘಟನೆಗಳು ಗುರೂಜಿ ರವರು ಹೇಳಿರುವಂತೆ ನಡೆದಿದೆ ಹೀಗಾಗಿ ಅವರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಹಾಗೂ ಗೌರವವಿದೆ ಎಂಬುದಾಗಿ ಹೇಳಿದ್ದಾರೆ. ಅವರು ಎಲ್ಲರ ಕಾಲ್ ಎಳಿತದೆ ಕಾಲ ಚಿತ್ರತಂಡಕ್ಕೆ ಆಶೀರ್ವಾದ ನೀಡುತ್ತಿರುವುದು ನಿಜವಾಗಿಯೂ ಸಂತೋಷದ ವಿಚಾರ ಚಿತ್ರ ಕಂಡಿತವಾಗಿ ಗೆಲುವನ್ನು ಸಾಧಿಸಲಿದೆ ಎಂಬುದಾಗಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.