ವಿನೋದ್ ರಾಜ್ ಗೆ ಸಾಹಸಸಿಂಹ ಮಾಡಿದ ಸಹಾಯ ಏನು ಗೊತ್ತೇ?? ಏನು ಮಾಡಿದ್ದಾರೆ ಅನ್ನೋರಿಗೆ ಇಲ್ಲಿದೆ ನೋಡಿ ಸರಿಯಾದ ಉತ್ತರ

ವಿನೋದ್ ರಾಜ್ ಗೆ ಸಾಹಸಸಿಂಹ ಮಾಡಿದ ಸಹಾಯ ಏನು ಗೊತ್ತೇ?? ಏನು ಮಾಡಿದ್ದಾರೆ ಅನ್ನೋರಿಗೆ ಇಲ್ಲಿದೆ ನೋಡಿ ಸರಿಯಾದ ಉತ್ತರ

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಅನರ್ಘ್ಯ ರತ್ನಗಳಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರು ಕೂಡ ಒಬ್ಬರು. ಕನ್ನಡ ಚಿತ್ರರಂಗದಲ್ಲಿ ಒಬ್ಬ ಮೇರು ನಟನಾಗಿ ಹಾಗೂ ಮೇರು ವ್ಯಕ್ತಿತ್ವ ಉಳ್ಳಂತಹ ವ್ಯಕ್ತಿಯಾಗಿ ಕೂಡ ಎಲ್ಲರಿಗೂ ಅಚ್ಚುಮೆಚ್ಚಿನ ವರಾಗಿದ್ದಾರೆ ವಿಷ್ಣುವರ್ಧನ್ ರವರು. ವಿಷ್ಣುವರ್ಧನ್ ರವರು ಕೂಡ ಚಿತ್ರರಂಗಕ್ಕೆ ಬಂದಿದ್ದು ತಮ್ಮ ಸ್ವಂತ ಪರಿಶ್ರಮ ಹಾಗೂ ಪ್ರತಿಭೆಯ ಮೂಲಕ. ಚಿತ್ರರಂಗದಲ್ಲಿ ವಿಷ್ಣುವರ್ಧನ್ ರವರು ಎಂದರೆ ಈಗ ಅವರಿಲ್ಲದಿದ್ದರೂ ಕೂಡ ಅವರಿಗೆ ಇರುವ ಮರ್ಯಾದೆ ಹಾಗೂ ಗೌರವಗಳು ಉನ್ನತ ಸ್ಥಾನದಲ್ಲಿದೆ.

ಕೋಟ್ಯಾಂತರ ಅಭಿಮಾನಿಗಳ ಪಾಲಿನ ನೆಚ್ಚಿನ ರಾಮಚಾರಿಯಾಗಿ ಕೂಡ ವಿಷ್ಣುವರ್ಧನ್ ರವರು ಪರಿಚಿತರು. ಇನ್ನು ನಿಜ ಜೀವನದಲ್ಲಿ ಕೂಡ ಕಷ್ಟ ಎಂದು ಬಂದವರಿಗೆ ತಮ್ಮ ಕೈಲಾದಷ್ಟು ಸಹಾಯವನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನೀಡುತ್ತಿದ್ದವರು ನಮ್ಮ ದಾದಾ. ವಿಷ್ಣುವರ್ಧನ್ ರವರು ಸಿನಿಮಾದಲ್ಲಿ ಕೂಡ ಹಾಗೆ ಯಾವುದೇ ನಿರ್ಮಾಪಕರಿಗೆ ನಷ್ಟವಾಗದಂತೆ ನೋಡಿಕೊಳ್ಳುತ್ತಿದ್ದರು. ಸಂಭಾವನೆ ವಿಚಾರದಲ್ಲಿ ಕನ್ನಡ ಚಿತ್ರರಂಗದ ಟಾಪ್ ನಟನಾಗಿದ್ದರು ಕೂಡ ಕಡಿಮೆ ಸಂಭಾವನೆಯನ್ನು ಪಡೆಯುತ್ತಿದ್ದಂತಹ ಹೃದಯವಂತ ನಮ್ಮ ವಿಷ್ಣುವರ್ಧನ್ ರವರು ಆಗಿದ್ದರು. ಇನ್ನು ಇವರು ನಟಿ ಲೀಲಾವತಿಯವರ ಪುತ್ರನಾಗಿರುವ ವಿನೋದ್ ರಾಜ್ ರವರಿಗೆ ಮಾಡಿರುವ ಸಹಾಯವನ್ನು ಕೂಡ ನಾವು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ಹೌದು ಗೆಳೆಯರೇ ಸಾಹಸಸಿಂಹ ವಿಷ್ಣುವರ್ಧನ್ ರವರು ವಿನೋದ್ ರಾಜ್ ಅವರಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ಒಂದು ಕಾಲಘಟ್ಟದಲ್ಲಿ ಸಹಾಯವನ್ನು ಮಾಡಿದ್ದಾರೆ. ವಿನೋದ್ ರಾಜ್ ನಟನೆ ಹಾಗೂ ಲೀಲಾವತಿ ಅಮ್ಮನವರ ನಿರ್ಮಾಣದಲ್ಲಿ ಮೂಡಿ ಬಂದಿರುವಂತಹ ಕನ್ನಡದ ಕಂದ ಚಿತ್ರ ವಿನೋದ್ ರಾಜ್ ರವರಿಗೆ ಕನ್ನಡ ಚಿತ್ರರಂಗದಲ್ಲಿ ಕಮ್ ಬ್ಯಾಕ್ ಸಿನಿಮಾವಾಗಿತ್ತು. ಆದರೆ ಈ ಸಿನಿಮಾವನ್ನು ಆರ್ಥಿಕ ದೃಷ್ಟಿಯಲ್ಲಿ ಹಾಗೂ ಬಿಡುಗಡೆ ದೃಷ್ಟಿಯಲ್ಲಿ ಕೂಡ ಸಾಕಷ್ಟು ಸಮಸ್ಯೆಗಳನ್ನು ಇಬ್ಬರು ಎದುರಿಸಿದರು. ಈ ಸಂದರ್ಭದಲ್ಲಿ ನಾನಿದ್ದೇನೆ ಚಿತ್ರವನ್ನು ಬಿಡುಗಡೆ ಮಾಡಿ ಯಾವುದೇ ಸಮಸ್ಯೆ ಆದರೂ ನಿಮಗೆ ಬೆಂಗಾವಲಾಗಿ ನಿಲ್ಲುತ್ತೇನೆ ಎನ್ನುವುದಾಗಿ ಬಂದು ಧೈರ್ಯವನ್ನು ತುಂಬಿಸಿದರು ಇದೇ ನಮ್ಮ ವಿಷ್ಣುವರ್ಧನ್ ರವರು. ಇದಕ್ಕಾಗಿಯೇ ನಮ್ಮ ವಿಷ್ಣುದಾದಾ ಅವರು ಎಲ್ಲರಿಗೂ ಇಷ್ಟವಾಗುವುದು.