ಕನ್ನಡ ತಿರಸ್ಕಾರ ಮಾಡಿದ ರಶ್ಮಿಕಾಗೆ ಬಿಗ್ ಶಾಕ್ ನೀಡಿದ ತೆಲುಗು ಚಿತ್ರರಂಗ ಮಾಡಿದ್ದೇನು ಗೊತ್ತಾ?? ರಾತ್ರೋರಾತ್ರಿ ಸ್ಟಾರ್ ಆಗಿದ್ದ ರಶ್ಮಿಕಾ ಈಗ ಏನಾಗಿದ್ದಾರೆ ಗೊತ್ತಾ ??

ನಮಸ್ಕಾರ ಸ್ನೇಹಿತರೇ ರಶ್ಮಿಕ ಮಂದಣ್ಣ ನವರು ಕನ್ನಡ ಚಿತ್ರರಂಗದ ಮೂಲಕವೇ ಭಾರತೀಯ ಚಿತ್ರರಂಗಕ್ಕೆ ಪರಿಚಿತರಾಗಿದ್ದರು ಕೂಡ ಈಗ ಅವರಲ್ಲಿ ಕನ್ನಡತನ ಎನ್ನುವುದು ಒಂದಿಷ್ಟು ಉಳಿದುಕೊಂಡಿಲ್ಲ. ಇದಕ್ಕೆ ನಿದರ್ಶನ ಎಂಬಂತೆ ಇದುವರೆಗೂ ಹಲವಾರು ಬಾರಿ ಕನ್ನಡತನದ ತಿರಸ್ಕಾರದಿಂದ ರಶ್ಮಿಕಾ ಮಂದಣ್ಣ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಭಾರಿ ಟೀಕೆಗೆ ಒಳಗಾಗಿದ್ದರು ಎಂಬುದು ನೀವು ಈಗಾಗಲೇ ತಿಳಿದುಕೊಂಡಿದ್ದೀರಿ.

ಇಷ್ಟು ಮಾತ್ರವಲ್ಲ ಪುಷ್ಪ ಚಿತ್ರದಲ್ಲಿ ಕೂಡ ಕನ್ನಡದಲ್ಲಿ ವಾಯ್ಸ್ ಡಬ್ ಮಾಡಿರಲಿಲ್ಲ. ಯಾಕೆ ಎಂದು ಕೇಳಿದಾಗ ನನಗೆ ಸಮಯವಿರಲಿಲ್ಲ ಎಂಬ ನಿರ್ಲಕ್ಷ್ಯ ಭರಿತ ಮಾತನ್ನು ಹೇಳಿದ್ದಾರೆ. ಇನ್ನು ಪುಷ್ಪ ಚಿತ್ರ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಕೋಟಿ ಕೋಟಿ ಬಾಚಿದರೂ ಕೂಡ ಸೋತಿದೆ. ಅದರಲ್ಲೂ ಕೂಡ ಕರ್ನಾಟಕ ರಾಜ್ಯದಲ್ಲಿ ಕನ್ನಡ ಭಾಷೆಯಲ್ಲಿ ಡಬ್ ಮಾಡಿದ್ದ ಸಿನಿಮಾವನ್ನು ಬಿಡುಗಡೆ ಮಾಡದ್ದಕ್ಕಾಗಿ ನೆಲಕಚ್ಚಿದೆ ಎಂಬುದಾಗಿ ಹೇಳಬಹುದಾಗಿದೆ. ಇನ್ನು ಇದಕ್ಕೆ ಮುಖ್ಯ ಕಾರಣ ರಶ್ಮಿಕಾ ರವರೇ ಎಂದು ಕೇಳಿ ಬರುತ್ತಿದೆ. ಇದೇ ಹಿನ್ನೆಲೆಯಲ್ಲಿ ರಶ್ಮಿಕ ಮಂದಣ್ಣ ನವರು ತೆಲುಗು ಚಿತ್ರರಂಗದಿಂದ ಕನಸಿನಲ್ಲೂ ಕೂಡ ಸಹಿಸಲಾಗದಂತಹ ಶಾಕ್ ನ್ನು ಪಡೆದಿದ್ದಾರೆ.

ಹೌದು ಗೆಳೆಯರೇ ರಶ್ಮಿಕ ಮಂದಣ್ಣ ನವರು ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಜೂನಿಯರ್ ಎನ್ ಟಿ ಆರ್ ಹಾಗೂ ರಾಮ್ ಪೋತಿನೇನಿ ನಟನೆಯ ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ನಟಿಸಬೇಕಾಗಿತ್ತು. ಆದರೆ ಈ ವಿವಾದಗಳಿಂದಾಗಿ ಅವರನ್ನು ಚಿತ್ರದಿಂದ ಹೊರ ಹಾಕಲಾಗಿದೆ ಎಂದು ಕೇಳಿ ಬರುತ್ತಿದೆ. ಮಾತೃಭಾಷೆ ಕನ್ನಡವನ್ನು ಮರೆತರೆ ಏನಾಗುತ್ತದೆ ಎಂಬುದಕ್ಕೆ ರಶ್ಮಿಕ ಮಂದಣ್ಣ ನವರೇ ಉತ್ತಮ ನಿದರ್ಶನ ಎಂದರೆ ಕಂಡಿತವಾಗಿಯೂ ತಪ್ಪಾಗಲಾರದು. ಇನ್ನಾದರೂ ಬುದ್ಧಿ ಕರೆದುಕೊಂಡು ತಮ್ಮ ನಡವಳಿಕೆ ಸರಿಮಾಡಿಕೊಂಡರೆ ಸರಿ ಇಲ್ಲವಾದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕಷ್ಟವನ್ನು ಅನುಭವಿಸುವುದು ಗ್ಯಾರಂಟಿ ಎಂದು ತೋರುತ್ತಿದೆ.