ಕ್ರಿಕೆಟ್ ಲೋಕದ ದೊರೆಯನ್ನು ಬಿಸಿಸಿಐ ಹೀಗೆನಾ ನಡೆಸಿಕೊಳ್ಳೋದು. ಮತ್ತೊಮ್ಮೆ ಕ್ಯಾಮೆರಾ ಮುಂದೆ ಬಂದು ಎಲ್ಲವನ್ನು ಬಿಚ್ಚಿಟ್ಟ ಕೊಹ್ಲಿ ಹೇಳಿದ್ದೇನು ಗೊತ್ತೇ??

ಕ್ರಿಕೆಟ್ ಲೋಕದ ದೊರೆಯನ್ನು ಬಿಸಿಸಿಐ ಹೀಗೆನಾ ನಡೆಸಿಕೊಳ್ಳೋದು. ಮತ್ತೊಮ್ಮೆ ಕ್ಯಾಮೆರಾ ಮುಂದೆ ಬಂದು ಎಲ್ಲವನ್ನು ಬಿಚ್ಚಿಟ್ಟ ಕೊಹ್ಲಿ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತ ಕ್ರಿಕೇಟ್ ತಂಡದಲ್ಲಿ ಉಂಟಾಗಿದ್ದ ಬೆಳವಣಿಗೆಗಳು ಹಾಗೂ ತದನಂತರ ಉಂಟಾದ ಗೊಂದಲಗಳಿಗೆ ಇಂದು ಸ್ವಲ್ಪ ತೆರೆಯೆಳೆಯುವ ಕೆಲಸವನ್ನ ಬಿಸಿಸಿಐ ಮಾಡಿದೆ. ಭಾರತ ತಂಡವನ್ನ ಸೇರಿಕೊಂಡ ವಿರಾಟ್ ಕೊಹ್ಲಿ, ಉಂಟಾಗಿದ್ದ ಎಲ್ಲಾ ಗೊಂದಲಗಳಿಗೆ ಇಂದು ಒಂದು ವಿಡಿಯೋ ಮೂಲಕ ತೆರೆ ಎಳೆದಿದ್ದಾರೆ. ಆದರೇ ಈ ವೇಳೆ ಬಿಸಿಸಿಐಗೂ ಸಹ ಟಾಂಗ್ ನೀಡುವ ಮೂಲಕ ಸುದ್ದಿಯಾದರು.

ಬಿಸಿಸಿಐ ಏಕಾಏಕಿ ನನ್ನನ್ನು ಏಕದಿನ ಕ್ರಿಕೇಟ್ ನಾಯಕತ್ವದಿಂದ ಇಳಿಸಿದ್ದೂ ಬೇಸರ ತರಿಸಿತು. ನನಗೆ ಸ್ವಲ್ಪವೂ ಸುಳಿವು ನೀಡದೇ ಈ ಕೆಲಸ ಮಾಡಿದ್ದು ನನಗೆ ನೋವಾಗಿತ್ತು. ಹಾಗಾಗಿ ನಾನು ಒಂದೆರೆಡು ದಿನಗಳ ಕಾಲ ಮೌನಕ್ಕೆ ಶರಣಾಗಿದ್ದೆ. ಆದರೇ ನಾನು ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಏಕದಿನ ಪಂದ್ಯದಲ್ಲಿ ಭಾಗವಹಿಸುತ್ತೇನೆ. ಭಾರತವನ್ನ ಗೆಲ್ಲಿಸುವುದಷ್ಟೇ ನನ್ನ ಜವಾಬ್ದಾರಿ ಹಾಗೂ ಗುರಿಯಾಗಿದೆ ಎಂದು ಹೇಳಿದರು.

ಈ ನಡುವೆ ತಮ್ಮ ಹಾಗೂ ರೋಹಿತ್ ಶರ್ಮಾರವರ ನಡುವಿನ ಮನಸ್ತಾಪದ ಬಗ್ಗೆ ಮಾತನಾಡಿದ ವಿರಾಟ್, ಇದು ಸಂಪೂರ್ಣ ಸತ್ಯಕ್ಕೆ ವಿರುದ್ದವಾದದ್ದು, ನಾನು ಹಾಗೂ ರೋಹಿತ್ ಉತ್ತಮ ಗೆಳೆಯರು. ಕ್ರೀಸ್ ನಲ್ಲಿಯೂ ಸಹ ಸಾಕಷ್ಟು ಜೊತೆಯಾಟಗಳಲ್ಲಿ ಭಾಗಿಯಾಗಿದ್ದೇವೆ. ಕ್ರೀಡಾಂಗಣದ ಹೊರಗೆ ಸಹ ಉತ್ತಮ ಸ್ನೇಹಿತರಾಗಿದ್ದೇವೆ. ಉತ್ತಮ ಭಾಂದವ್ಯ ಸಹ ನಮ್ಮಿಬ್ಬರಿಗಿದೆ. ನಮ್ಮಿಬ್ಬರ ಗುರಿ ಈಗ ಭಾರತವನ್ನು ಗೆಲ್ಲಿಸುವುದಾಗಿದೆ ಎಂದು ಹೇಳಿದರು. ಈ ಮೂಲಕ ಹಲವಾರು ದಿನಗಳಿಂದ ಉತ್ತರ ಸಿಗದಿದ್ದ ಪ್ರಶ್ನೆಗೆ ವಿರಾಟ್ ಉತ್ತರ ನೀಡಿ, ಎಲ್ಲಾ ಗೊಂದಲಗಳನ್ನು ತಣ್ಣಗೆ ಮಾಡಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ‌.