ಬಹು ನಿರೀಕ್ಷಿತ ಪುಷ್ಪ ಚಿತ್ರದ ರಿಲೀಸ್ ಗು ಮುನ್ನವೇ ಮೈಮೇಲೆ ಕೇಸ್ ಎಳೆದುಕೊಂಡ ಸಮಂತಾ, ಸಮಂತಾ ಮೇಲೆ ಕೇಸ್ ಹಾಕಿದ ತಕ್ಷಣ ರೊಚ್ಚಿಗೆದ್ದ ಅಲ್ಲು ಅರ್ಜುನ್, ನಡೆದದ್ದೇನು ಗೊತ್ತೇ??

ಬಹು ನಿರೀಕ್ಷಿತ ಪುಷ್ಪ ಚಿತ್ರದ ರಿಲೀಸ್ ಗು ಮುನ್ನವೇ ಮೈಮೇಲೆ ಕೇಸ್ ಎಳೆದುಕೊಂಡ ಸಮಂತಾ, ಸಮಂತಾ ಮೇಲೆ ಕೇಸ್ ಹಾಕಿದ ತಕ್ಷಣ ರೊಚ್ಚಿಗೆದ್ದ ಅಲ್ಲು ಅರ್ಜುನ್, ನಡೆದದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ವಿವಾಹ ವಿಚ್ಛೇದನವನ್ನು ಪಡೆದುಕೊಂಡ ನಂತರ ಸಮಂತಾ ರವರು ಸಾಕಷ್ಟು ಸುದ್ದಿಯಲ್ಲಿದ್ದಾರೆ. ಒಂದಲ್ಲ ಒಂದು ಕಾರಣದಿಂದಾಗಿ ಸಮಂತ ರವರು ಸುದ್ದಿಯಾಗುತ್ತಲೇ ಇದ್ದಾರೆ. ಒಂದು ಕಾಲದಲ್ಲಿ ನಟಿ ಸಮಂತಾ ರವರು ದಕ್ಷಿಣ ಭಾರತ ಚಿತ್ರರಂಗದ ಅತ್ಯಂತ ಬಹುಬೇಡಿಕೆಯ ನಾಯಕ ನಟಿಯರಲ್ಲಿ ಒಬ್ಬರಾಗಿದ್ದರು. ಇನ್ನು ವಿವಾಹ ವಿಚ್ಛೇದನವನ್ನು ಪಡೆದ ನಂತರ ಹಲವಾರು ಸಮಯಗಳ ಕಾಲ ಚಿತ್ರರಂಗದಿಂದ ಸಮಂತಾರವರು ದೂರ ಉಳಿದಿದ್ದರು.

ಇನ್ನು ಇತ್ತೀಚಿಗಷ್ಟೇ ಸಮಂತ ರವರು ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರದಲ್ಲಿ ಐಟಂ ಸಾಂಗ್ ನಲ್ಲಿ ಡ್ಯಾನ್ಸ್ ಮಾಡಿದ್ದರು. ಇದು ಅಭಿಮಾನಿಗಳಲ್ಲಿ ಹಾಗೂ ತೆಲುಗು ಸಿನಿಮಾ ರಸಿಕ ರಲ್ಲಿ ಸಾಕಷ್ಟು ದೊಡ್ಡ ಸದ್ದನ್ನು ಮಾಡಿತ್ತು. ಆದರೆ ಈಗ ಊ ಅಂಟವಾ ಊಊ ಅಂಟವಾ ಸಾಂಗ್ ಎಷ್ಟು ಜನಪ್ರಿಯತೆ ಪಡೆದಿದೆಯೋ ಈಗ ಅದಕ್ಕೆ ಅಷ್ಟು ದೊಡ್ಡ ಸಮಸ್ಯೆ ಎದುರಾಗಿದೆ. ಆದರೆ ಈಗ ಸಮಸ್ಯೆ ಎದುರಾಗಿರುವುದು ಹಾಡಿದವರಿಗೂ ಅಲ್ಲ ಸಾಹಿತ್ಯವನ್ನು ಬರೆದವರಿಗೂ ಅಲ್ಲ ಬದಲಾಗಿ ಆ ಹಾಡಿಗೆ ಕುಣಿದ ಸಮಂತಾ ರವರಿಗೆ.

ಹೌದು ಐಟಂ ಸಾಂಗ್ ನಲ್ಲಿ ಮಿ ಮಗ ಬುದ್ದೇ ವಂಕಾರ ಬುದ್ದಿ ಎನ್ನುವ ಸಾಹಿತ್ಯ ಇದ್ದು ಇದರಿಂದ ಪುರುಷರಿಗೆ ಮುಜುಗರವಾಗುತ್ತದೆ, ಯಾವ ಪುರುಷರು ಹಾಗೆ ಇರುವುದಿಲ್ಲ ಎಂದು ಮೆನ್ಸ್ ಆಸೋಸಿಯೇಷನ್ ರವರು ಸಮಂತಾ ರವರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಈ ಕುರಿತು ಮಾತನಾಡಿರುವ ಅಲ್ಲೂ ಅರ್ಜುನ್ ಪ್ರತಿ ಸಾಲಿಗೂ ಅರ್ಥ ಹುಡುಕಿ ಕೇಸ್ ದಾಖಲಿಸುತ್ತ ಹೋದರೆ ಎಲ್ಲ ಹಾಡುಗಳನ್ನು ನಿಲ್ಲಿಸಬೇಕಾಗುತ್ತದೆ, ಸಿನಿಮಾ ಎಂಬುದೇ ಇರುವುದಿಲ್ಲ ಎಂದು ಗರಂ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಈ ಕೇಸ್ ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ತಿರುವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡ ಬೇಕಾಗಿದೆ. ಇದೇ ಡಿಸೆಂಬರ್ 17ಕ್ಕೆ ಪುಷ್ಪ ಚಿತ್ರ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಾಣಲಿದೆ. ರಿಲೀಸ್ ಡೇಟ್ ಆ ಹತ್ತಿರವಾಗುತ್ತಿದ್ದಂತೆ ಹೊಸ ಪ್ರಕರಣ ದಾಖಲಾಗಿರುವುದು ಪುಷ್ಪ ಕ್ಷೇತ್ರಕ್ಕೆ ಹಿನ್ನಡೆ ಉಂಟು ಮಾಡಿರಬಹುದು ಎಂದು ಹೇಳ ಬಹುದಾಗಿದೆ.