ಶಿಕ್ಷಕರ ಮೇಲೆ ತಮ್ಮ ಪೌರುಷ ತೋರಿಸಿದ ಪುಂಡ ವಿದ್ಯಾರ್ಥಿಗಳ ಪರಿಸ್ಥಿತಿ ಇದೀಗ ಏನಾಗಿದೆ ಗೊತ್ತೇ??ಇಷ್ಟು ಸಾಕಾ?? ಇನ್ನು ಏನಾದರು ಮಾಡಬೇಕಾ??

ಶಿಕ್ಷಕರ ಮೇಲೆ ತಮ್ಮ ಪೌರುಷ ತೋರಿಸಿದ ಪುಂಡ ವಿದ್ಯಾರ್ಥಿಗಳ ಪರಿಸ್ಥಿತಿ ಇದೀಗ ಏನಾಗಿದೆ ಗೊತ್ತೇ??ಇಷ್ಟು ಸಾಕಾ?? ಇನ್ನು ಏನಾದರು ಮಾಡಬೇಕಾ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಮ್ಮ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತವೆ ಎಂಬುದಕ್ಕೆ ಹಲವಾರು ನಿದರ್ಶನಗಳು ಹಾಗೂ ಘಟನೆಗಳು ನಡೆದಿರುವುದು ಈ ಮಾತು ಹೇಳುವುದಕ್ಕೆ ಸಾಕ್ಷಿಯಾಗಿದೆ. ಇನ್ನು ಇಂದು ನಾವು ಹೇಳಹೊರಟಿರುವ ವಿಚಾರ ಕೂಡ ನಡೆದಿರುವುದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ನಲ್ಲೂರು ಗ್ರಾಮದಲ್ಲಿ.

ಇಂತಹ ಮಕ್ಕಳನ್ನು ಹೆತ್ತ ಪೋಷಕರಿಗೆ ನಾವು ಹೇಳಬೇಕು ಅಥವಾ ಮಕ್ಕಳಿಗೆ ಬುದ್ಧಿಯನ್ನು ಕಲಿಸಬೇಕೋ ಎಂದು ಅರ್ಥವಾಗದಂತೆ ನಡೆದಿದೆ ಈ ಘಟನೆ. ಹೈಸ್ಕೂಲ್ ನಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಮಾಡಿರುವ ಕೆಲಸವನ್ನು ನೋಡಿದರೆ ಖಂಡಿತವಾಗಿಯೂ ಅವರ ಮನೆಯವರು ಕೂಡ ತಲೆತಗ್ಗಿಸುವುದು ಗ್ಯಾರಂಟಿ. ಪಾಠ ಮಾಡುತ್ತಿದ್ದ ಹಿಂದಿ ಶಿಕ್ಷರ ತಲೆಯ ಮೇಲೆ ಕಸದ ಬುಟ್ಟಿಯನ್ನು ಬೋರಲು ಹಾಕಿ ಅವರ ಜೊತೆಗೆ ತೀರಾ ಕೆಳಮಟ್ಟದಲ್ಲಿ ನಡೆದುಕೊಂಡಿದ್ದಾರೆ ಈ ಪುಂಡ ವಿದ್ಯಾರ್ಥಿಗಳು. ವಿದ್ಯಾರ್ಥಿಗಳು ಮಾಡಿರುವ ಈ ಹೇಯ ಕೃತ್ಯ ವಿಡಿಯೋ ರೂಪದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಇದಕ್ಕೆ ತಕ್ಕ ಶಿಕ್ಷೆಯನ್ನು ಕೂಡ ಈಗ ಅನುಭವಿಸಿದ್ದಾರೆ.

ಹೌದು ಗೆಳೆಯರೇ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸಂಘಟನೆಯ ಸದಸ್ಯರು ಈಗ ಈ ಪುಂಡ ವಿದ್ಯಾರ್ಥಿಗಳನ್ನು ಹಿಂದಿ ಶಿಕ್ಷಕರ ಕಾಲಿಗೆ ಬಿದ್ದು ಕ್ಷಮೆ ಕೇಳುವಂತೆ ಮಾಡಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಶಿಕ್ಷಕರಾಗಿರುವ ಪ್ರಕಾಶ್ ಬೋಗಾರ್ ಅವರು ನನ್ನದಿನ್ನೂ ಕೇವಲ ಒಂದು ವರ್ಷ ಸರ್ವಿಸ್ ಮಾತ್ರ ಇರುವುದು ಒಂದು ವೇಳೆ ನಾನು ವಿದ್ಯಾರ್ಥಿಗಳ ಮೇಲೆ ದೂರನ್ನು ಸಲ್ಲಿಸಿದ್ದಾರೆ ಅವರ ಜೀವನ ಎನ್ನುವುದು ಹಾಳಾಗುತ್ತಿತ್ತು ಅದಕ್ಕೆ ನಾನು ಏನು ಮಾಡದೆ ಸುಮ್ಮನಿದ್ದೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಈ ವಿದ್ಯಾರ್ಥಿಗಳ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.