ಅಪ್ಪು ರವರಿಗೆ ಆಸ್ಟ್ರೇಲಿಯಾ ದಿಂದ ಗೌರವ ಸಲ್ಲಿಸಿದ ತಕ್ಷಣ ವಾರ್ನರ್ ಮುಂದೆ ಹೊಸ ಬೇಡಿಕೆ ಇಟ್ಟ ಫ್ಯಾನ್ಸ್, ಈಡೇರಿಸುತ್ತಾರಾ ಡೇವಿಡ್ ವಾರ್ನರ್??

ಅಪ್ಪು ರವರಿಗೆ ಆಸ್ಟ್ರೇಲಿಯಾ ದಿಂದ ಗೌರವ ಸಲ್ಲಿಸಿದ ತಕ್ಷಣ ವಾರ್ನರ್ ಮುಂದೆ ಹೊಸ ಬೇಡಿಕೆ ಇಟ್ಟ ಫ್ಯಾನ್ಸ್, ಈಡೇರಿಸುತ್ತಾರಾ ಡೇವಿಡ್ ವಾರ್ನರ್??

ನಮಸ್ಕಾರ ಸ್ನೇಹಿತರೇ ಪುನೀತ್ ರಾಜಕುಮಾರ್ ಅವರು ಅಕ್ಟೋಬರ್ 29ರಂದು ನಮ್ಮನ್ನೆಲ್ಲಾ ಅಕಾಲಿಕವಾಗಿ ಅಗಲಿ ಹೋದ ನಂತರ ಇಡೀ ಭಾರತ ಚಿತ್ರರಂಗದ ಹಾಗೂ ರಾಜಕೀಯ ಕ್ಷೇತ್ರದ ಮತ್ತು ಬೇರೆ ಬೇರೆ ಕ್ಷೇತ್ರದ ಗಣ್ಯಾತಿಗಣ್ಯರು ಅವರಿಗೆ ಭಾವನಾತ್ಮಕವಾಗಿ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ನಾವು ಕಮಲ್ ಹಾಸನ್ ರವರು ಬಿಗ್ ಬಾಸ್ ವೇದಿಕೆಯಲ್ಲಿ ಅಪ್ಪು ಅವರನ್ನು ನೆನೆದು ಕಣ್ಣೀರಿಟ್ಟಿದ್ದನ್ನು ನಾವು ಕೂಡ ನೋಡಿದ್ದೇವೆ. ಹೀಗೆ ಅಪ್ಪು ಅವರಿಗೆ ಇರುವ ವಿಶ್ವಾದ್ಯಂತ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಕಂಬನಿಯ ಹೊಳೆಯೇ ಹರಿದುಬಂದಿತ್ತು.

ಅಪ್ಪು ಅವರು ತಮ್ಮ ನಟನೆ ಹಾಗೂ ವ್ಯಕ್ತಿತ್ವದಿಂದಾಗಿ ದೇಶ-ವಿದೇಶಗಳಲ್ಲಿ ಕೂಡ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ನು ಈ ಲಿಸ್ಟಿನಲ್ಲಿ ಸೆಲೆಬ್ರಿಟಿಗಳು ಕೂಡ ಶಾಮೀಲಾಗಿದ್ದಾರೆ. ಇತ್ತೀಚಿಗಷ್ಟೇ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪ್ರಖ್ಯಾತ ಆಟಗಾರನಾಗಿರುವ ಡೇವಿಡ್ ವಾರ್ನರ್ ಅವರು ಕೂಡ ಅಪ್ಪು ಅವರನ್ನು ಸ್ಮರಿಸಿಕೊಂಡಿದ್ದಾರೆ. ಡೇವಿಡ್ ವಾರ್ನರ್ ರವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪ್ಪು ಅವರ ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಹಾಡಿಗೆ ತಮ್ಮ ಮುಖವನ್ನು ಅಂಟಿಸಿ ರೆಸ್ಪೆಕ್ಟ್ ಎಂದು ಬರೆದು ಅಪ್ಪು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಅಪ್ಪು ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಡೇವಿಡ್ ವಾರ್ನರ್ ರವರನ್ನು ಈ ಬಾರಿಯ ಐಪಿಎಲ್ ನಲ್ಲಿ ಆರ್ಸಿಬಿ ಪರ ಆಡುವಂತೆ ಕೋರಿಕೊಂಡಿದ್ದಾರೆ. ಈಗಾಗಲೇ ಮೆಗಾ ಹರಾಜಿನಲ್ಲಿ ಡೇವಿಡ್ ವಾರ್ನರ್ ಪಾಲುಗೊಳ್ಳುವುದು ಕನ್ಫರ್ಮ್ ಆಗಿದ್ದು ಈಕಡೆ ಆರ್ಸಿಬಿಗೆ ಕ್ಯಾಪ್ಟನ್ ಕೂಡ ಬೇಕಾಗಿದ್ದು ಡೇವಿಡ್ ವಾರ್ನರ್ ರವರನ್ನು ಖರೀದಿಸುವ ಸಾಧ್ಯತೆ ಹೆಚ್ಚಾಗಿದೆ. ಅಪ್ಪು ಅವರ ಅಭಿಮಾನಿಗಳ ಕೋರಿಕೆಯನ್ನು ಡೇವಿಡ್ ವಾರ್ನರ್ ಈಡೇರಿಸುತ್ತಾರೆ ಎಂಬುದು ಹರಾಜಿನ ನಂತರವೇ ತಿಳಿಯಲಿದೆ.