ಹರಡುತ್ತಿರುವ ಸುದ್ದಿಯನ್ನು ನಂಬಬೇಡಿ, ಅಸಲಿಗೆ ನಿಜವಾಗಲೂ ಪುನೀತ್ ನಮನ ಕಾರ್ಯಕ್ರಮದಲ್ಲಿ ವಿಜಯ್ ಪ್ರಕಾಶ್ ಪಡೆದಿರುವ ಹಣವೆಷ್ಟು ಗೊತ್ತೇ??

ಹರಡುತ್ತಿರುವ ಸುದ್ದಿಯನ್ನು ನಂಬಬೇಡಿ, ಅಸಲಿಗೆ ನಿಜವಾಗಲೂ ಪುನೀತ್ ನಮನ ಕಾರ್ಯಕ್ರಮದಲ್ಲಿ ವಿಜಯ್ ಪ್ರಕಾಶ್ ಪಡೆದಿರುವ ಹಣವೆಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಈಗಾಗಲೇ ಹಲವಾರು ದಿನಗಳೇ ಕಳೆದುಹೋಗಿದೆ. ಇನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಪುನೀತ್ ನಮನ ಕಾರ್ಯಕ್ರಮ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿರುವುದು ನಿಮಗೆಲ್ಲ ಗೊತ್ತೇ ಇದೆ. ಇದೇ ಸಂದರ್ಭದಲ್ಲಿ ಪುನೀತ್ ರವರಿಗೆ ಭಾವನಾತ್ಮಕ ನಮನವನ್ನು ಸಲ್ಲಿಸಲು ಇಡೀ ದಕ್ಷಿಣ ಭಾರತ ಚಿತ್ರರಂಗವೇ ಒಂದಾಗಿತ್ತು ಎಂದುಕೊಂಡು ಖಂಡಿತವಾಗಿ ತಪ್ಪಾಗಲಾರದು.

ಕೇವಲ ಕನ್ನಡ ಚಿತ್ರರಂಗದ ಗಣ್ಯಾತಿಗಣ್ಯರು ಮಾತ್ರವಲ್ಲದೆ ತಮಿಳು ಹಾಗೂ ತೆಲುಗು ಚಿತ್ರದ ಖ್ಯಾತ ನಟರು ಕೂಡ ಆಗಮಿಸಿದ್ದರು. ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದಿಂದ ಯಶ್ ಗಣೇಶ್ ದರ್ಶನ್ ಹೀಗೆ ಹಲವಾರು ಜನರು ಕೂಡ ಉಪಸ್ಥಿತರಿದ್ದರು ಹಾಗೂ ವೇದಿಕೆಯ ಮೇಲೆ ಬಂದು ಪುನೀತ್ ರಾಜಕುಮಾರ್ ಅವರ ಕುರಿತಂತೆ ಮಾತನಾಡಿದರು. ಇನ್ನು ಈ ಕಾರ್ಯಕ್ರಮ ಪುನೀತ್ ರಾಜಕುಮಾರ್ ರವರಿಗೆ ಗೀತ ನಮನವನ್ನು ಸಲ್ಲಿಸುವುದರಾಗಿದ್ದರಿಂದ ಲೇಖಕ ಹಾಗೂ ಸಾಹಿತಿ ನಾಗೇಂದ್ರ ಪ್ರಸಾದ್ ಹಾಗೂ ಗುರುಕಿರಣ್ ಅವರ ಸಾರಥ್ಯದಲ್ಲಿ ಗೀತನಮನ ವನ್ನು ಕೂಡ ಮಾಡಲಾಯಿತು.

ಈ ಸಂದರ್ಭದಲ್ಲಿ ಬಹುಭಾಷಾ ಗಾಯಕ ವಿಜಯ ಪ್ರಕಾಶ್ ರವರು ಕೂಡ ಆಗಮಿಸಿದ್ದರು. ಪುನೀತ್ ರಾಜಕುಮಾರ್ ಅವರಿಗೆ ಗೀತ ನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ನಾಲ್ಕು ಗಂಟೆಗಳಿಗಿಂತ ಅಧಿಕ ಕಾಲ ವಿಜಯಪ್ರಕಾಶ್ ಅವರು ಹಾಡಿದ್ದಾರೆ. ಇನ್ನು ಅದಕ್ಕಾಗಿ ಅವರು ಪಡೆದುಕೊಂಡಿರುವ ಸಂಭಾವನೆ ಕೂಡ ಎಷ್ಟು ಗೊತ್ತಾ ಗೆಳೆಯರೇ. ಈ ಕುರಿತು ಸಾಕಷ್ಟು ಮಾಹಿತಿಗಳು ಹರಿದಾಡುತ್ತಿದ್ದು, ವಿಜಯ್ ಪ್ರಕಾಶ್ ರವರ ಕೋಟಿ ಕೋಟಿ ಹಣ ಪಡೆದಿದ್ದರೆ ಎಂದು ಅಸಮಾಧಾನ ಕೇಳಿ ಬಂದಿವೆ. ಆದರೆ ಗೆಳೆಯರೆ ವಿಜಯಪ್ರಕಾಶ್ ರವರು ಒಂದು ರೂಪಾಯಿ ಹಣವನ್ನು ಕೂಡ ಪಡೆದುಕೊಂಡಿಲ್ಲ. ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡಿರುವ ದುಃಖ ನಮ್ಮಲ್ಲೂ ಕೂಡ ಇದೆ ಎಂಬುದಾಗಿ ವಿಜಯಪ್ರಕಾಶ್ ಅವರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಕೇವಲ ವಿಜಯಪ್ರಕಾಶ್ ಮಾತ್ರವಲ್ಲದೆ ಅನುರಾಧ ಭಟ್ ಹೇಮಂತ್ ಕುಮಾರ್ ಹಾಗೂ ನಿರೂಪಕಿ ಆಗಿರುವ ಅಪರ್ಣ ರವರು ಕೂಡ ಸಂಭಾವನೆಯನ್ನು ಪಡೆದುಕೊಂಡಿಲ್ಲ.