ಕೆಂಪು ಚಂದ್ರನ ದಿನ ಪೂಜೆ ಮಾಡಿದ್ದ ಪುನೀತ್ ರವರ ಬಗ್ಗೆ ಭವಿಷ್ಯ ನುಡಿದಿದ್ದ ಅಜ್ಜಯ್ಯ, ಅದೊಂದು ಆ ಪೂಜೆ ಮಾಡಿಸಿದ್ರೆ ಉಳಿಯುತ್ತಿದ್ರೇನೋ ಎಂದ ಶ್ರೀಗಳು

ಕೆಂಪು ಚಂದ್ರನ ದಿನ ಪೂಜೆ ಮಾಡಿದ್ದ ಪುನೀತ್ ರವರ ಬಗ್ಗೆ ಭವಿಷ್ಯ ನುಡಿದಿದ್ದ ಅಜ್ಜಯ್ಯ, ಅದೊಂದು ಆ ಪೂಜೆ ಮಾಡಿಸಿದ್ರೆ ಉಳಿಯುತ್ತಿದ್ರೇನೋ ಎಂದ ಶ್ರೀಗಳು

ನಮಸ್ಕಾರ ಸ್ನೇಹಿತರೇ ನಾವು ನಮ್ಮೆಲ್ಲರ ನೆಚ್ಚಿನ ನಟ ಆಗಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ದೈಹಿಕವಾಗಿ ಕಳೆದುಕೊಂಡಿದ್ದೇವೆ. ಹೌದು ಗೆಳೆಯರೇ ಹೃದಯಾಘಾತದಿಂದಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೇವಲ 46 ವಯಸ್ಸಿಗೆ ಅಕಾಲ ಮರಣವನ್ನು ಹೊಂದಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಿಧನಕ್ಕೆ ಸಂತಾಪವನ್ನು ಸೂಚಿಸಿ ದಷ್ಟು ಯಾರನ್ನು ನಿಧನಕ್ಕೂ ಕೂಡ ಸಂತಾಪವನ್ನು ಸೂಚಿಸಿಲ್ಲ. ಅಷ್ಟರಮಟ್ಟಿಗೆ ಅಪ್ಪು ಅವರ ನಿಧನಕ್ಕೆ ಕರ್ನಾಟಕದ ಜನತೆ ಮರುಗಿದ್ದರು. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ನಿಧನಕ್ಕೆ ಅದೊಂದು ದೋಷ ಕಾರಣವಾಗಿತ್ತು ಅಜ್ಜಯ್ಯ ಸ್ವಾಮಿ ಹೇಳಿದ ಪೂಜೆ ಮಾಡಿಸಿದ್ದರೆ ಸರಿಯಾಗುತ್ತಿತ್ತು ಎಂಬ ಸುದ್ದಿಗಳು ಈಗಾಗಲೇ ಕೇಳಿ ಬರುತ್ತಿದೆ. ಹಾಗಿದ್ದರೆ ಇದೇನು ವಿಷಯ ಎಂಬುದು ನಾವು ನಿಮಗೆ ವಿವರವಾಗಿ ಹೇಳುತ್ತೇವೆ ತಪ್ಪದೆ ಕೊನೆಯವರೆಗೂ ಓದಿ.

ಕಳೆದ ವರ್ಷ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಮ್ಮ ಕುಟುಂಬ ಸಮೇತರಾಗಿ ತುಮಕೂರಿನ ತಿಪಟೂರಿನ ಗದ್ದುಗೆಯ ಅಜ್ಜಯ್ಯ ಸ್ವಾಮೀಜಿ ಬಳಿ ಹೋಗಿದ್ದರು. ಆ ಸಂದರ್ಭದಲ್ಲಿ ಪುನೀತ್ ಆರೋಗ್ಯದ ಸಮಸ್ಯೆ ಕುರಿತಂತೆ ಭವಿಷ್ಯವನ್ನು ನುಡಿದಿದ್ದರು. ಇದಕ್ಕಾಗಿ ಶಾಂತಿ ಕರ್ಮವನ್ನು ಕೂಡ ಮಾಡಿಸಿದ್ದರು. ಕಳೆದವರ್ಷ ರೆಡ್ ಮೂನ್ ದಿನ ಗದ್ದುಗೆಯಲ್ಲಿ ಹೊಡೆದುಕೊಂಡು ಪೂಜೆಯನ್ನು ಸಲ್ಲಿಸಿದರು ನಮ್ಮ ಅಪ್ಪು. ಆದರೆ ಈ ವರ್ಷ ಮಾತ್ರ ಪೂಜೆಯನ್ನು ಸಲ್ಲಿಸಲು ಆಗಿರಲಿಲ್ಲ. ಇದಕ್ಕೆ ಪ್ರತಿಕ್ರಿಯಿಸಿರುವ ಅಜ್ಜಯ್ಯ ಸ್ವಾಮೀಜಿ ಒಂದು ವೇಳೆ ಪೂಜೆಯನ್ನು ಮಾಡಿಸುತ್ತಿದ್ದರೆ ಬದುಕುಳಿಯುತ್ತಿದ್ದರೋ ಏನೋ ಎಂಬುದಾಗಿ ಬೇಸರಿಸಿದರು. ಈ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.