ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗಕ್ಕೆ ಯಾರು ಕೂಡ ಊಹಿಸಲಾಗದಂತಹ ದುಃಖಮಯ ಸುದ್ದಿ ಬಂದಪ್ಪಳಿಸಿದೆ. ಹೌದು ಗೆಳೆಯರೇ ನಮ್ಮೆಲ್ಲರ ಅಚ್ಚುಮೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಹೃದಯಾಘಾತದಿಂದಾಗಿ ನಮ್ಮನ್ನೆಲ್ಲಾ ಅಗಲಿ ದೈವಾದೀನರಾಗಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ದಿನಾಲು ಕೂಡ ಬೆಳಗ್ಗೆ ಎದ್ದ ನಂತರ ಜಾಗಿಂಗ್ ಗೆ ಹೋಗಿ ಬಂದ ನಂತರ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದದ್ದು ಮಾಮೂಲಿಯಾಗಿತ್ತು.
ಆದರೆ ಹಿಂದೂ ವರ್ಕೌಟ್ ಮಾಡುತ್ತಿದ್ದಾಗ ಹೃದಯಾಘಾತದಿಂದ ಕುಸಿದುಬಿದ್ದು ಆಸ್ಪತ್ರೆಗೆ ಸಾಗಿಸಿದರು ಕ್ಷಣಗಳಲ್ಲಿ ಇನ್ನಿಲ್ಲವಾಗಿಬಿಟ್ಟರು. ನಾಯಕನಟನಾಗಿ ನಟಿಸಿದ್ದು ಕೇವಲ 29 ಚಿತ್ರಗಳಲ್ಲಿ ಮಾತ್ರವಾದರೆ ಕೂಡ ಕೋಟ್ಯಂತರ ಅಭಿಮಾನಿಗಳ ಮನಸ್ಸಿನಲ್ಲಿ ಯುವರಾಜನಾಗಿ ಮೆರೆದು ನಿಂತಿದ್ದರು. ಇನ್ನೂ ಎರಡು ವಾರಗಳ ಹಿಂದಷ್ಟೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮಲ್ಲೇಶ್ವರಂನ ಫಿಸಿಯೋಥೆರಪಿಸ್ಟ್ ಬಳಿ ಹೋಗಿದ್ದರು.
ಈ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ಬೆನ್ನು ನೋವು ಹಾಗೂ ಮೀನ ಖಂಡದ ನೋವು ಇತ್ತು. ಇದು ಅವರಿಗೆ ಯುವರತ್ನ ಚಿತ್ರೀಕರಣದ ಸಂದರ್ಭದಲ್ಲಿ ಪ್ರಾರಂಭವಾಗಿತ್ತು ಎಂದು ಪುನೀತ್ ಡಾಕ್ಟರ್ ರವರಿಗೆ ಉತ್ತರ ನೀಡಿದ್ದರು. ಸ್ವಲ್ಪ ದಿನಕ್ಕೆ ವೈದ್ಯರು ನೀವು ಸ್ವಲ್ಪ ದಿನಗಳ ಮಟ್ಟಿಗೆ ಡ್ಯಾನ್ಸ್ ಮಾಡುವುದನ್ನು ನಿಲ್ಲಿಸಬೇಕಾಗುತ್ತದೆ ಎಂಬುದಾಗಿ ಹೇಳಿದರೂ ಕೂಡ ಚಿತ್ರದ ಅವಶ್ಯಕತೆ ಇರುವುದರಿಂದ ಪುನೀತ್ ರಾಜಕುಮಾರ್ ಅವರು ಮತ್ತೆ ಕೂಡ ಡ್ಯಾನ್ಸ್ ಮಾಡಿದ್ದರು. ಸಂಪೂರ್ಣ ವಾಗಿ ಗುಣಮುಖರಾದ ಮೇಲೆ ಮಾಡಿ ಎಂದಿದ್ದರು ಡಾಕ್ಟರ್. ಆದರೆ ಕೆಲಸ ಒಪ್ಪಿಕೊಂಡ ಮೇಲೆ ಸರಿಯಾಗಿ ಮಾಡಬೇಕು ಎನ್ನುವುದು ಪುನೀತ್ ರವರ ನಿಷ್ಠೆಯಾಗಿತ್ತು. ಆದರೆ ಇದೀಗ ಈ ರೀತಿ ಆಗಿರುವುಅದಕ್ಕೆ ಇದು ಕೂಡ ಇಂದಿನ ಈ ಪರಿಸ್ಥಿತಿಗೆ ಕಾರಣವಾಗಿರಬಹುದು ಎಂಬುದು ಯಾರು ಬಿಡಿಸಲಾಗದ ಅಂತಹ ಪ್ರಶ್ನೆಯಾಗಿ ಉಳಿದು ಬಿಟ್ಟಿದೆ. ಇದರ ಕುರಿತು ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳು ಏನೆಂಬುದನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ತಪ್ಪದೆ ಹಂಚಿಕೊಳ್ಳಿ.