ನಮಸ್ಕಾರ ಸ್ನೇಹಿತರೇ ನಮ್ಮಲ್ಲಿ ಶಾಖಾಹಾರಿ ಹಾಗೂ ಮಾಂಸಹಾರಿ ಜನರಿದ್ದಾರೆ. ಇನ್ನೂ ಎರಡು ವರ್ಗದಲ್ಲಿ ಕಾಮನ್ ಆಗಿ ಕೆಲವರು ಮೊಟ್ಟೆಯನ್ನು ತಿಂದೆ ತಿನ್ನುತ್ತಾರೆ. ಆದರೆ ಇಂದು ನಾವು ಹೇಳುತ್ತಿರುವ ವಿಷಯದಲ್ಲಿ ಮೊಟ್ಟೆಯಿಂದ ಆಗಿ ಒಬ್ಬ ಮಹಿಳೆ ಏನು ಮಾಡಿಕೊಂಡಿದ್ದಾರೆ ಗೊತ್ತಾ ಬನ್ನಿ ನಾವು ನಿಮಗೆ ವಿವರವಾಗಿ ಹೇಳುತ್ತೇವೆ ತಪ್ಪದೇ ಕೊನೆಯವರೆಗೂ ಓದಿ.
ಹೌದು ಸ್ನೇಹಿತರೆ ಈ ವಿಚಾರವನ್ನು ಕೇಳಿದರೆ ಖಂಡಿತವಾಗಿಯೂ ನೀವು ಕೂಡ ಆಶ್ಚರ್ಯ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಘಟನೆ ನಡೆದಿರುವುದು ತೆಲಂಗಾಣ ರಾಜ್ಯದಲ್ಲಿ. ತೆಲಂಗಾಣ ರಾಜ್ಯದ ನೆರಳ ಪಲ್ಲಿ ಎಂಬ ಸ್ಥಳದಲ್ಲಿ ನೀಲಮ್ಮ ಎಂಬಾಕೆ ಊಟದ ಸಮಯದಲ್ಲಿ ಬೇಯಿಸಿದ ಮೊಟ್ಟೆ ತಿನ್ನಬೇಕಾದರೆ ಅದು ಗಂಟಲಿನಲ್ಲಿ ಸಿಕ್ಕು ಉಸಿರಾಟದ ತೊಂದರೆಯಿಂದಾಗಿ ಕೊನೆಯುಸಿರನ್ನು ಎಳೆದಿದ್ದಾಳೆ. ಹೌದು ಸ್ನೇಹಿತರೆ ಕೇಳಲು ವಿಚಿತ್ರ ಅಂತ ಅನಿಸಿದರೆ ಕೂಡ ಇದು ನಡೆದಿರುವುದು ಇತ್ತೀಚಿಗಷ್ಟೇ. ಎಲ್ಲರೂ ಹೇಳುವ ಪ್ರಕಾರ ಊಟದ ಸಮಯದಲ್ಲಿ ಬೇಯಿಸಿದ ಮೊಟ್ಟೆಯನ್ನು ಭಾಗ ಮಾಡದೆ ಹಾಗೆ ಇಡೀ ಮೊಟ್ಟೆಯನ್ನು ನೀಲಮ್ಮ ಊಟ ಮಾಡುವಾಗ ನುಂಗಿದ್ದಾರೆ.
ಈ ತರಹ ನುಂಗಿದ್ದರ ಪರಿಣಾಮವಾಗಿ ಆ ಮೊಟ್ಟೆ ಗಂಟಲಿನ ಕೆಳಗಿಳಿಯದೆ ಹೊರಕ್ಕೂ ಬರದೆ ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡಿದೆ. ಇದರಿಂದಾಗಿ ಹಲವಾರು ಸಮಯಗಳ ಕಾಲ ಉಸಿರಾಟದ ತೊಂದರೆಯಾಗಿ ನೀಲಮ್ಮ ಒದ್ದಾಡಿದ್ದಾರೆ. ತದನಂತರ ಸರಿಯಾದ ಸಮಯಕ್ಕೆ ಕ್ರಮವನ್ನು ತೆಗೆದುಕೊಳ್ಳುದಿದ್ದ ಕಾರಣ ಕೊನೆಯುಸಿರನ್ನು ಎಳೆದಿದ್ದಾರೆ. ಅವರ ಸಂಬಂಧಿಕರು ಹೇಳುವ ಪ್ರಕಾರ ಊಟ ಮಾಡುವ ಸಂದರ್ಭದಲ್ಲಿ ಬೇಯಿಸಿದ ಮೊಟ್ಟೆಯನ್ನು ಭಾಗ ಮಾಡಿ ತಿಂದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂಬುದಾಗಿ ಅಭಿಪ್ರಾಯಪಟ್ಟಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.