ನಾಗ ಚೈತನ್ಯ ಹಾಗೂ ಸಮಂತಾ ವಿಚ್ಚೇದಕ್ಕೆ ಯಾರಿಗೂ ತಿಳಿಯದ ಕಾರಣಗಳೇನು ಗೊತ್ತೇ?? ಕೊನೆಗೂ ಸಿಕ್ಕವು ಅಸಲಿ ಕಾರಣ.

ನಾಗ ಚೈತನ್ಯ ಹಾಗೂ ಸಮಂತಾ ವಿಚ್ಚೇದಕ್ಕೆ ಯಾರಿಗೂ ತಿಳಿಯದ ಕಾರಣಗಳೇನು ಗೊತ್ತೇ?? ಕೊನೆಗೂ ಸಿಕ್ಕವು ಅಸಲಿ ಕಾರಣ.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಾಗುತ್ತಿರುವ ಹಾಗೂ ಚರ್ಚೆಗೆ ಒಳಗಾಗಿರುವ ವಿಷಯವೆಂದರೆ ಸಮಂತಾ ಹಾಗೂ ನಾಗಚೈತನ್ಯ ರವರ ವಿವಾಹ ವಿಚ್ಛೇದನದ ಸುದ್ದಿ. ಹೌದು ಸ್ನೇಹಿತರೆ ಪ್ರೀತಿಯ ಪಕ್ಷಿಗಳಂತೆ ಇದ್ದ ಇಬ್ಬರು ಈಗ ಬೇರೆಯಾಗಿರುವುದು ಅವರ ಅಭಿಮಾನಿಗಳಿಗೆ ಹಾಗೂ ಸಿನಿಮಾ ರಸಿಕರಿಗೆ ಸಾಕಷ್ಟು ಬೇಸರವನ್ನುಂಟು ಮಾಡಿದೆ. ಹಾಗಿದ್ದರೆ ಇವರಿಬ್ಬರು ಬೇರೆಯಾಗಲು ಕಾರಣಗಳೇನೆಂಬುದನ್ನು ಹುಡುಕಲು ಹೊರಟರೆ ಐದು ಕಾರಣಗಳು ಸಿಗುತ್ತವೆ ಸ್ನೇಹಿತರ ರಹ’ಸ್ಯ ಕಾರಣಗಳನ್ನು ನಾವು ನಿಮಗೆ ವಿವರವಾಗಿ ಹೇಳುತ್ತದೆ ಬನ್ನಿ.

ಮೊದಲನೇದಾಗಿ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದು ಹೌದು ಸ್ನೇಹಿತರೆ ಸಮಂತಾ ಅವರು ಇತ್ತೀಚಿನ ದಿನಗಳಲ್ಲಿ ಭಾರತದ ಅತ್ಯಂತ ಸಾಕಷ್ಟು ಜನಪ್ರಿಯತೆ ಹಾಗೂ ಯಶಸ್ಸನ್ನು ಪಡೆಯಲು ಕಾರಣ ಬಾಲಿವುಡ್ನಲ್ಲಿ ಇತ್ತೀಚೆಗೆ ಬಿಡುಗಡೆಯಾದಂತಹ ಫ್ಯಾಮಿಲಿ ಮನ್ ವೆಬ್ ಸೀರೀಸ್. ಹೌದು ಸ್ನೇಹಿತರೆ ಫ್ಯಾಮಿಲಿ ಮ್ಯಾನ್ ವೆಬ್ ಸೀರಿಸ್ ನಲ್ಲಿ ಸಮಂತ ರವರು ನಿರ್ವಹಿಸಿರುವ ಪಾತ್ರ ಎಲ್ಲರ ಜನ ಮೆಚ್ಚುಗೆಯನ್ನು ಪಡೆದಿದೆ. ಇನ್ನು ಈ ವೆಬ್ ಸೀರಿಸ್ ನಲ್ಲಿ ಸಮಂತಾ ರವರು ಒಂದು ದೃಶ್ಯದಲ್ಲಿ ಸಾಕಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಇದು ಅವರ ಮನೆಯವರಿಗೆ ಕಸಿವಿಸಿ ಉಂಟಾಗಿರಬಹುದು ಎಂಬುದಾಗಿ ಶಂಕಿಸಲಾಗಿದೆ. ಹೀಗಾಗಿ ಈ ವಿಚಾರವೂ ಕೂಡ ಸಮಂತ ಹಾಗೂ ನಾಗಚೈತನ್ಯ ರವರ ವಿವಾಹ ವಿಚ್ಛೇದನದಲ್ಲಿ ಪ್ರಮುಖ ಪಾತ್ರವನ್ನು ವಹಿಸಿರಬಹುದು ಎಂಬುದಾಗಿ ಅಂದಾಜಿಸಲಾಗುತ್ತಿದೆ.

ಎರಡನೇದಾಗಿ ಮುಂಬೈಗೆ ಹೋಗುವ ಪ್ಲಾನ್ ಹೌದು ಸ್ನೇಹಿತರೆ ಸಮಂತಾ ರವರಿಗೆ ಮುಂಬೈನಿಂದ ಅಂದರೆ ಬಾಲಿವುಡ್ ಚಿತ್ರರಂಗದಿಂದ ಸಾಕಷ್ಟು ದೊಡ್ಡ ದೊಡ್ಡ ಆಫರ್ಗಳು ಬರಲು ಆರಂಭಿಸಿದವು ಹೀಗಾಗಿ ಸಮಂತಾ ನಾಗಚೈತನ್ಯ ರವರ ಬಳಿ ಮುಂಬೈಗೆ ಹೋಗಿ ನೆಲೆಸುವ ವಿಚಾರವನ್ನು ಪ್ರಸ್ತಾಪಿಸಿದ್ದರಂತೆ ಆದರೆ ಇದಕ್ಕೆ ನಾಗಚೈತನ್ಯ ರವರು ಒಪ್ಪಿಗೆ ನೀಡಿರಲಿಲ್ಲ. ಹೀಗಾಗಿ ಈ ವಿಚಾರವೂ ಕೂಡ ಇವರಿಬ್ಬರ ನಡುವೆ ಬಿರುಕು ಮೂಡಲು ಕಾರಣವಾಗಿರಬಹುದು ಎಂಬುದಾಗಿ ಹೇಳಲಾಗುತ್ತಿದೆ.

ಮೂರನೇದಾಗಿ ನಾಗಚೈತನ್ಯ ತಂದೆ ಆಗುವ ಕನಸು ಕಂಡಿದ್ದರಂತೆ ಹೌದು ಸ್ನೇಹಿತರೆ ಹತ್ತು ವರ್ಷಗಳ ಕಾಲ ಪ್ರೀತಿಸಿ ನಾಲ್ಕು ವರ್ಷಗಳ ಕಾಲ ತುಂಬು ಸಂಸಾರವನ್ನು ನಡೆಸಿದ್ದ ನಾಗಚೈತನ್ಯ ಹಾಗೂ ಸಮಂತಾ ರವರು ಬೇರೆ ಯಾಗುವುದಕ್ಕೆ ಇದು ಒಂದು ಕಾರಣ ಎಂದು ಹೇಳಲಾಗುತ್ತಿದೆ. ಹೌದು ಸ್ನೇಹಿತರೆ ನಾಗಚೈತನ್ಯ ರವರು ಮಗು ಮಾಡಿಸಿಕೊಳ್ಳುವ ಪ್ಲಾನನ್ನು ಹೊಂದಿದ್ದರು. ಆದರೆ ಸಮಂತ ಅವರು ಇನ್ನೂ ಕೂಡ ಚಿತ್ರರಂಗದಲ್ಲಿ ಸಾಧಿಸಬೇಕೆಂಬ ಆಸೆಯನ್ನು ಹೊಂದಿದ್ದರಿಂದ ಈಗಲೇ ಮಗು ಬೇಡ ಎಂಬುದಾಗಿ ಹೇಳಿದ್ದರಂತೆ. ಇದು ಕೂಡ ಇವರಿಬ್ಬರ ನಡುವೆ ಕಂದಕವನ್ನು ಸೃಷ್ಟಿಸುವಲ್ಲಿ ಕಾರಣವಾಗಿದೆ ಎಂಬುದು ಹೇಳಬಹುದಾಗಿದೆ.

ನಾಗಚೈತನ್ಯ ರವರ ಅತಿಯಾದ ಕಾಳಜಿ ಹೌದು ಸ್ನೇಹಿತರೆ ನಾಗಚೈತನ್ಯ ರವರು ಸಮಂತ ರವರ ವಿಷಯದಲ್ಲಿ ಸಾಕಷ್ಟು ಪೊಸೆಸಿವ್ ಆಗಿದ್ದರು. ಹೌದು ಸ್ನೇಹಿತರೆ ಸಮಂತಾ ರವರ ಎಲ್ಲಾ ವಿಚಾರಗಳಲ್ಲಿಯೂ ಕೂಡ ನಾಗಚೈತನ್ಯ ರವರು ಅಗತ್ಯಕ್ಕಿಂತ ಹೆಚ್ಚಾಗಿ ಮೂಗನ್ನು ತೋರಿಸುತ್ತಿದ್ದರು. ಇಷ್ಟು ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಸಮಂತಾ ರವರಿಗೆ ಫೋಟೋಗಳನ್ನು ಪೋಸ್ಟ್ ಮಾಡಲು ಆಗಾಗ ಅಗತ್ಯಕ್ಕಿಂತಲೂ ಹೆಚ್ಚಾದಂತಹ ಮಾತುಗಳನ್ನು ಆಡುತ್ತಿದ್ದರು. ಇದು ಸಮಂತಾ ರವರಿಗೆ ಸಾಕಷ್ಟು ಕಿರಿಕಿರಿ ಉಂಟು ಮಾಡಿರಬಹುದು ಎಂದು ಹೇಳಲಾಗುತ್ತಿದೆ.

ಇನ್ನು ಇತ್ತೀಚೆಗೆ ನಾಗಚೈತನ್ಯ ಹಾಗೂ ಸಾಯಿಪಲ್ಲವಿ ನಡುವಿನ ಸುದ್ದಿಗಳು ಹೌದು ಸ್ನೇಹಿತರೆ ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ನಟನೆಯ ಲವರ್ಸ್ ಚಿತ್ರ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು ಹೀಗಾಗಿ ಇವರಿಬ್ಬರ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಗಳು ಪ್ರಸಾರವಾಗುತ್ತಿದ್ದವು ಹಾಗೂ ಚರ್ಚೆಗಳಾಗುತ್ತಿದ್ದವು. ಇದು ನಾಗಚೈತನ್ಯ ಹಾಗೂ ಸಮಂತ ರವರ ಸಂಬಂಧ ಹಳಸಲು ಕಾರಣವಾಗಿರಬಹುದು ಎಂಬುದಾಗಿ ಹೇಳಲಾಗುತ್ತಿದೆ. ಕಾರಣಗಳು ಏನೇ ಇರಲಿ ಸ್ನೇಹಿತರೆ ಆದರೆ ಇವರಿಬ್ಬರು ಒಬ್ಬರನ್ನೊಬ್ಬರು ಬಿಟ್ಟು ದೂರ ಆಗಿರುವುದು ಅಭಿಮಾನಿಗಳಲ್ಲಂತೂ ಸಾಕಷ್ಟು ಬೇಸರವನ್ನು ಮೂಡಿಸಿದೆ ಎಂದರೆ ತಪ್ಪಾಗಲಾರದು. ಈ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.