ದುಡ್ಡಿದ್ರೆ ಏನ್ ಬೇಕಾದ್ರು ಮಾಡಬಹುದು, ಒಟ್ಟೊಟ್ಟಿಗೆ ಮೂರು ನ್ಯೂಸ್ ಚಾನೆಲ್ ಖರೀದಿಸಲು ಮುಂದಾದ ರಾಮ್ ಚರಣ್, ಕಾರಣವೇನು ಗೊತ್ತೇ??

ದುಡ್ಡಿದ್ರೆ ಏನ್ ಬೇಕಾದ್ರು ಮಾಡಬಹುದು, ಒಟ್ಟೊಟ್ಟಿಗೆ ಮೂರು ನ್ಯೂಸ್ ಚಾನೆಲ್ ಖರೀದಿಸಲು ಮುಂದಾದ ರಾಮ್ ಚರಣ್, ಕಾರಣವೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿಗಷ್ಟೇ ರಾಮ್ ಚರಣ್ ತೇಜಾ ರವರ ಹೊಸ ಚಿತ್ರ ತಮಿಳಿನ ಖ್ಯಾತ ನಿರ್ದೇಶಕ ರೋಬೋ ಖ್ಯಾತಿಯ ಶಂಕರ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ. ಈ ಚಿತ್ರದ ಮುಹೂರ್ತಕ್ಕಾಗಿ ಅವರ ತಂದೆ ಚಿರಂಜೀವಿ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಹಾಗೂ ಬಾಲಿವುಡ್ ನಟ ರಣವೀರ್ ಸಿಂಗ್ ಕೂಡ ಬಂದಿದ್ದರು. ಇನ್ನು ಸದ್ಯಕ್ಕೆ ಎಸ್ ರಾಜಮೌಳಿ ನಿರ್ದೇಶನದ ಹಾಗೂ ರಾಮ್ ಚರಣ್ ತೇಜ ಹಾಗೂ ಜೂನಿಯರ್ ಎನ್ಟಿಆರ್ ನಟನೆಯ ಆರ್ ಆರ್ ಆರ್ ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದಾರೆ. ರಾಮ್ ಚರಣ್ ತೇಜ ರವರು ಕೇವಲ ನಟ ಹಾಗೂ ನಿರ್ಮಾಪಕ ಮಾತ್ರವಲ್ಲದೆ ಉತ್ತಮ ಬ್ಯುಸಿನೆಸ್ ಮ್ಯಾನ್ ಕೂಡ ಹೌದು.

ಹೌದು ಸ್ನೇಹಿತರೆ ಅವರು ಏರ್ಲೈನ್ ಸಂಸ್ಥೆ ಸಿನಿ ನಿರ್ಮಾಣ ಸಂಸ್ಥೆ ಬಾರ್ ಅಂಡ್ ರೆಸ್ಟೋರೆಂಟ್ ಸಂಸ್ಥೆ ಹಾಗೂ ಅವರ ಹೆಸರಿನಲ್ಲಿ ಒಂದು ಕ್ಲಬ್ ಕೂಡ ಇದೆ. ಇನ್ನು ಇವರ ಹೆಂಡತಿ ಉಪಾಸನಾ ಕೊನಿದೆಲ ಅಪೋಲೋ ಗ್ರೂಪ್ ಆಫ್ ಸಂಸ್ಥೆಯ ಮಾಲೀಕರ ಮಗಳು. ಹೀಗಾಗಿ ಹಣದ ವಿಚಾರದಲ್ಲಿ ಯಾರಿಗೂ ಕಮ್ಮಿ ಇಲ್ಲದಂತೆ ಅಷ್ಟು ಚಿಕ್ಕ ವಯಸ್ಸಿನಲ್ಲಿ ಪ್ರಬಲರಾಗಿದ್ದಾರೆ. ಇನ್ನು ರಾಮ್ ಚರಣ್ ತೇಜಾ ರವರು ಈಗ ಹೊಸ ಬ್ಯುಸಿನೆಸ್ ಗೆ ಕೈ ಹಾಕಲು ಹೊರಟಿದ್ದಾರೆ. ಹೌದು ಸ್ನೇಹಿತರೆ ರಾಮ್ ಚರಣ್ ತೇಜಾ ರವರು ಮೂರು ಹೊಸ ಚಾನೆಲ್ ಅನ್ನು ಕೊಂಡುಕೊಳ್ಳಲು ಹೊರಟಿದ್ದಾರೆ ಅದಕ್ಕೆ ಕಾರಣ ಏನು ಗೊತ್ತಾ ಸ್ನೇಹಿತರೆ ಬನ್ನಿ ಅದರ ಕುರಿತಂತೆ ವಿವರವಾಗಿ ಹೇಳುತ್ತೇವೆ.

ಹೌದು ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಯ ಪ್ರಕಾರ ರಾಮ್ ಚರಣ್ ತೇಜ ರವರು ಮೂರು ಹೊಸ ಚಾನೆಲ್ಗಳನ್ನು ಕೊಳ್ಳಲು ಹೊರಟಿದ್ದಾರೆ. ಹೌದು ಸ್ನೇಹಿತರೆ ನಷ್ಟದಲ್ಲಿರುವ 3 ಚಾನೆಲ್ ಗಳನ್ನು ಕಡಿಮೆ ದರದಲ್ಲಿ ಕೊಂಡು ಅದಕ್ಕೆ ಹೊಸ ರೂಪು ರೇಷೆಯನ್ನು ನೀಡಿ ಅದನ್ನು ಮರು ಪ್ರಾರಂಭಿಸುವ ಯೋಜನೆ ರಾಮ್ ಚರಣ್ ತೇಜಾರವರದ್ದು. ಇನ್ನು ಚಾನೆಲ್ಗಳನ್ನು ಕಂಡುಕೊಳ್ಳುತ್ತಿರುವ ಮುಖ್ಯ ಉದ್ದೇಶ ಅವರ ಚಿಕ್ಕಪ್ಪ ಪವನ್ ಕಲ್ಯಾಣ್. ಹೌದು ಸ್ನೇಹಿತರೆ ಅವರ ಚಿಕ್ಕಪ್ಪ ಪವನ್ ಕಲ್ಯಾಣ್ ರವರು ತೆಲುಗು ರಾಜಕೀಯದಲ್ಲಿ ಸಕ್ರಿಯರಾಗಿದ್ದು ಅವರಿಗೆ ಪ್ರಚಾರ ನೀಡಲು ಯಾವ ಚಾನಲ್ಗಳು ಇಲ್ಲ ಹೀಗಾಗಿ ಕೊಂಡುಕೊಳ್ಳುವ ಮೂರು ಚಾನೆಲ್ನಲ್ಲಿ ಅವರ ಚುನಾವಣಾ ಪ್ರಚಾರ ಮಾಡಲು ರಾಮ್ ಚರಣ್ ತೇಜ ರವರು ಯೋಜಿಸಿದ್ದಾರೆ ಎಂದು ಕೇಳಿ ಬರುತ್ತಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.